ಇದ್ದಕ್ಕಿಂದಂತೆ ಸುದೀಪ್ ತಂದೆಯ ಬಳಿ ಅಣ್ಣಾವ್ರು ಹೋಗಿ, ಎಂತ ಮಗನನ್ನು ಹೆತ್ತಿದ್ದೀಯ ಎಂದು ಕೇಳಿದ್ದೇಕೆ ಗೊತ್ತೇ??

ಇದ್ದಕ್ಕಿಂದಂತೆ ಸುದೀಪ್ ತಂದೆಯ ಬಳಿ ಅಣ್ಣಾವ್ರು ಹೋಗಿ, ಎಂತ ಮಗನನ್ನು ಹೆತ್ತಿದ್ದೀಯ ಎಂದು ಕೇಳಿದ್ದೇಕೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಅಂದು 1 ಹೌಸ್ಫುಲ್ ಪ್ರದರ್ಶನಕ್ಕಾಗಿ ಕಾಯುತ್ತಿದ್ದಂತಹ ನಟ ಇಂದು ಭಾರತೀಯ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಆಗಿ ಮಿಂಚುತ್ತಿದ್ದಾರೆ. ಹೌದು ಸ್ನೇಹಿತರೆ ನಾವು ಮಾತನಾಡುತ್ತಿರುವುದು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ಕುರಿತಂತೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ತಂದೆ ಶ್ರೀಮಂತನಾಗಿದ್ದರೂ ಕೂಡಾ ತನ್ನ ಸ್ವಂತ ಪರಿಶ್ರಮದ ಮೂಲಕ ಚಿತ್ರರಂಗದಲ್ಲಿ ನೆಲೆ ಕಟ್ಟಿಕೊಂಡವರು. ಕಷ್ಟಪಟ್ಟು ಪ್ರತಿಭೆಯ ಮೂಲಕ ಜನರ ಮನೆಗೆದ್ದು ಇಂದು ಕನ್ನಡ ಚಿತ್ರರಂಗದಲ್ಲಿ ಟಾಪ್ ನಟನಾಗಿ ಕಾಣಿಸಿಕೊಂಡಿದ್ದಾರೆ.

ಕೇವಲ ಕನ್ನಡ ಮಾತ್ರವಲ್ಲದೆ ವಿಶ್ವದಾದ್ಯಂತ ಅಭಿಮಾನಿಗಳನ್ನು ಹೊಂದಿರುವ ಕನ್ನಡದ ಏಕೈಕ ನಟ ಎಂದರೂ ಕೂಡ ತಪ್ಪಾಗಲಾರದು. ಆದರೆ ಒಮ್ಮೆ ಕಿಚ್ಚ ಸುದೀಪ್ ರವರ ತಂದೆಯ ಬಳಿ ಕನ್ನಡ ಚಿತ್ರರಂಗದ ದೇವರು ಎಂದೇ ಖ್ಯಾತರಾಗಿರುವ ನಟ ಸಾರ್ವಭೌಮ ಡಾ ರಾಜಕುಮಾರ್ ಅವರು ಎಂಥ ಮಗನನ್ನು ಹೆತ್ತಿದ್ದೀಯ ಎಂದು ಕಣ್ಣೀರು ಹಾಕಿಕೊಂಡು ಹೇಳುತ್ತಾರೆ. ಹೌದು ಸ್ನೇಹಿತರೆ ಇದಕ್ಕೆ ಕಾರಣವೇನು ಎಂಬುದನ್ನು ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಆದರೆ ಕಿಚ್ಚ ಸುದೀಪ್ ಅವರಿಗೆ ಮೊದಲ ಯಶಸ್ಸು ತಂದುಕೊಟ್ಟ ಚಿತ್ರವೆಂದರೆ ಅದು ಹುಚ್ಚ. ಇನ್ನು ಹುಚ್ಚ ಚಿತ್ರದ ಜನಪ್ರಿಯತೆಯನ್ನು ನೋಡಿ ರಾಜಕುಮಾರ್ ಅವರು ಕೂಡ ಅದನ್ನು ನೋಡುವ ಆಸೆಯನ್ನು ವ್ಯಕ್ತಪಡಿಸಿ ಅವರು ಕೂಡ ಚಿತ್ರವನ್ನು ನೋಡುತ್ತಾರೆ. ಚಿತ್ರವನ್ನು ನೋಡಿದ ನಂತರ ಅಣ್ಣಾವ್ರು ಕಣ್ಣೀರು ಹಾಕಿಕೊಂಡು ಬಂದು ಕಿಚ್ಚ ಸುದೀಪ್ ರವರ ತಂದೆಯವರ ಬಳಿ ಎಂತಹ ಮಗನನ್ನು ಹೆತ್ತಿದ್ದೀರಾ ಎಂಬುದಾಗಿ ಹೆಮ್ಮೆಯಿಂದ ಆನಂದ ಭಾಷ್ಪವನ್ನು ಸುರಿಸುತ್ತಾರೆ. ಅಷ್ಟರಮಟ್ಟಿಗೆ ಅಣ್ಣಾವ್ರು ಹುಚ್ಚಾ ಚಿತ್ರವನ್ನು ಮೆಚ್ಚಿ ಕಿಚ್ಚ ರವರಿಗೆ ಒಳ್ಳೆಯ ಮಾತುಗಳನ್ನು ಆಡಿದ್ದರು. ಇಂದಿಗೂ ಕೂಡ ಈ ಹೊಗಳಿಕೆಯನ್ನು ಕಿಚ್ಚ ಸುದೀಪ್ ರವರು ನೆನಪಿಸಿಕೊಳ್ಳುತ್ತಾರೆ.