ನಟನೆ ಮಾಡಬಾರದು ಎಂದು ಕೊಂಡಿದ್ದ ಸುದೀಪ್ ರವರು ನಟನಾಗಲು ಕಾರಣ ಯಾರು ಗೊತ್ತೆ?ಅವರು ಕೂಡ ಟಾಪ್ ನಟ.

ನಟನೆ ಮಾಡಬಾರದು ಎಂದು ಕೊಂಡಿದ್ದ ಸುದೀಪ್ ರವರು ನಟನಾಗಲು ಕಾರಣ ಯಾರು ಗೊತ್ತೆ?ಅವರು ಕೂಡ ಟಾಪ್ ನಟ.

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರ ನಟನೆ ಎಷ್ಟರಮಟ್ಟಿಗೆ ಉನ್ನತ ಮಟ್ಟದಲ್ಲಿದೆ ಎಂಬುದು ನಮಗೆಲ್ಲ ಗೊತ್ತಿದೆ. ಆದರೆ ಅದನ್ನು ಉಪಯೋಗಿಸುವಂತಹ ನಿರ್ದೇಶಕರು ನಮಗೆ ಸಿಗುತ್ತಿಲ್ಲ ಎಂಬುದು ವಿಪರ್ಯಾಸ. ಕನ್ನಡ ಚಿತ್ರರಂಗದ ಯಾರು ಕೂಡ ಮಾಡಿದಂತಹ ನಟನೆ ಮಾಡಬಲ್ಲಂತಹ ತಾಕತ್ತು ಇರುವ ಏಕೈಕ ನಟ ಎಂದರೆ ಕಿಚ್ಚ ಸುದೀಪ್ ಮಾತ್ರ. ಹೌದು ಸ್ನೇಹಿತರೆ ಆದರೆ ಕಿಚ್ಚ ಸುದೀಪ್ ರವರು ಕನ್ನಡ ಚಿತ್ರರಂಗಕ್ಕೆ ನಟನಾಗುವ ಆಸಕ್ತಿಯಿಂದ ಬಂದಿರಲಿಲ್ಲ.

ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಡಲು ಹುಚ್ಚ ಚಿತ್ರದ ಮೂಲಕ ಎಷ್ಟೊಂದು ಪರದಾಡಿದರು ಎಂಬುದು ನಿಮಗೆಲ್ಲಾ ಗೊತ್ತೇ ಇದೆ. ಕಿಚ್ಚ ಸುದೀಪ್ ರವರು ಹುಚ್ಚ ಚಿತ್ರ ಮಾಡುವ ಸಂದರ್ಭದಲ್ಲಿ ಹಲವಾರು ನೋ’ವುಗಳನ್ನು ಅನುಭವಿಸಿದ್ದು ಎಂಬುದು ನಿಮಗೆಲ್ಲ ಗೊತ್ತಿರುತ್ತದೆ. ಶ್ರೀಮಂತ ಉದ್ಯಮಿಯ ಮಗನಾಗಿದ್ದರೂ ಕೂಡ ಕನ್ನಡ ಚಿತ್ರರಂಗಕ್ಕೆ ಬರಲು ಕಿಚ್ಚ ಸುದೀಪ್ ರವರು ಯಾರು ಸಹಾಯವನ್ನು ಕೂಡ ತೆಗೆದುಕೊಳ್ಳಲಿಲ್ಲ. ಅಪ್ಪ ಕೋಟ್ಯಾಧಿಪತಿ ಆಗಿದ್ದರೂ ಕೂಡ ಮಗ ತನ್ನ ಸ್ವಂತ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದ ಮೆಟ್ಟಿಲನ್ನು ಹತ್ತಿದವರು. ಇನ್ನು ಕನ್ನಡ ಚಿತ್ರರಂಗಕ್ಕೆ ಸುದೀಪ್ ಮೊದಲು ನಿರ್ದೇಶಕರಾಗಲು ಬಂದವರು.

ಆದರೆ ನಂತರದ ದಿನಗಳಲ್ಲಿ ಕಿಚ್ಚ ಸುದೀಪ್ ಅವರು ಕನ್ನಡ ಚಿತ್ರರಂಗಕ್ಕೆ ನಟರಾಗಲೂ ಪ್ರಯತ್ನ ಪಟ್ಟಿದ್ದೇಕೆ ಗೊತ್ತಾ ಅದಕ್ಕೆ ಕಾರಣ ಯಾರು ಗೊತ್ತಾ. ಬನ್ನಿ ಸ್ನೇಹಿತರೇ ಅದಕ್ಕೆ ಕಾರಣವನ್ನು ನಾವು ಹೇಳುತ್ತೇವೆ. ಹೌದು ಸ್ನೇಹಿತರೆ ಕಿಚ್ಚ ಸುದೀಪ್ ರವರು ಮೊದಲು ನಿರ್ದೇಶಕನಾಗುವ ಪ್ರಯತ್ನದಲ್ಲಿ ಉಪೇಂದ್ರರವರ ಜೊತೆಗೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು. ಎಲ್ಲಿ ನೋಡಿದರೂ ಕೂಡ ಇಬ್ಬರೂ ಜೊತೆಯಾಗಿ ಇರುತ್ತಿದ್ದರು. ಒಮ್ಮೆ ಉಪೇಂದ್ರರವರು ಸುದೀಪ್ ರವರೇ ಯಾಕೆ ನೀವು ಹೀರೋ ಆಗಬಾರದು ನೋಡಲು ಸ್ಮಾರ್ಟ್ ಕೂಡ ಇದ್ದೀರಾ ಚೆನ್ನಾಗಿ ಹೈಟು ಒಳ್ಳೆ ವಾಯ್ಸ್ ಕೂಡ ಇದೆ ಎಂದರು. ಇದಾದ ನಂತರ ಸುದೀಪ್ ರವರಿಗೆ ಕೂಡ ಇದು ಹೌದೆನಿಸಿತು ಈಗ ಕೇವಲ ಕನ್ನಡಚಿತ್ರರಂಗದಲ್ಲಿ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲಿ ಬಹು ಬೇಡಿಕೆ ಹಾಗೂ ಬಹುನಿರೀಕ್ಷಿತ ನಾಯಕ ನಟನಾಗಿ ಕಾಣಿಸಿಕೊಂಡಿದ್ದಾರೆ.