ಬಿಗ್ ಬಾಸ್ ನಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಕುಲಾಯಿಸಿದ ಪ್ರಶಾಂತ ಅದೃಷ್ಟ, ಅರವಿಂದ್, ಮಂಜು ರವರ ಮೀರಿಸಿದ್ದು ಹೇಗೆ ಗೊತ್ತೇ??

ಬಿಗ್ ಬಾಸ್ ನಿಂದ ಹೊರ ಬಂದ ಕೆಲವೇ ದಿನಗಳಲ್ಲಿ ಕುಲಾಯಿಸಿದ ಪ್ರಶಾಂತ ಅದೃಷ್ಟ, ಅರವಿಂದ್, ಮಂಜು ರವರ ಮೀರಿಸಿದ್ದು ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಇತಿಹಾಸದಲ್ಲಿ ಅತಿ ಹೆಚ್ಚು ಪ್ರೇಕ್ಷಕರನ್ನು ಸೆಳೆದ ಸೀಸನ್ ಎಂದೇ ಖ್ಯಾತಿ ಪಡೆದು ಕೊಂಡಿರುವ ಈ ಬಾರಿಯ ಬಿಗ್ ಬಾಸ್ ನಲ್ಲಿ ಪ್ರಶಾಂತ ಸಂಬರ್ಗಿ ಕೂಡ ಹೆಚ್ಚಿನ ಸದ್ದು ಮಾಡಿದ್ದರು. ಹೆಚ್ಚಿನ ಜನಪ್ರಿಯತೆ ಇಲ್ಲದೆ ಮನೆಯ ಒಳಗಡೆ ಹೋದ ಪ್ರಶಾಂತ ಸಂಬರ್ಗಿ ರವರು ಕೊನೆಯ ಐದು ಸ್ಪರ್ಧಿಗಳ ವರೆಗೂ ಎಲ್ಲರಿಗೂ ಸಾಕಷ್ಟು ಪೈಪೋಟಿ ನೀಡಿ ಮನೆಯಲ್ಲೇ ಉಳಿದು ಕೊಂಡಿದ್ದರು. ಈ ಕಾರ್ಯಕ್ರಮದ ಮೂಲಕ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿಕೊಂಡಿರುವ ಪ್ರಶಾಂತ ಸಂಬರ್ಗಿ ರವರು ವಿನ್ನರ್ ಆಗುತ್ತಾರೆ ಎಂದು ಕೂಡ ಹೇಳಲಾಗುತ್ತಿತ್ತು.

ಆದರೆ ಮಂಜು ಪಾವಗಡ ರವರು ಯಾರು ಊಹಿಸಿದಂತೆ ಲಕ್ಷಗಟ್ಟಲೆ ಅಭಿಮಾನಿಗಳನ್ನು ಗಳಿಸಿ ವಿನ್ನರ್ ಸ್ಥಾನವನ್ನು ಗೆದ್ದು ಕೊಳ್ಳುವಲ್ಲಿ ಯಶಸ್ವಿಯಾದರು. ಆದರೆ ಅದೇ ಸಮಯದಲ್ಲಿ 6 ಲಕ್ಷಕ್ಕೂ ಹೆಚ್ಚು ಪ್ರೇಕ್ಷಕರ ಮನಗೆದ್ದಿದ್ದ ಪ್ರಶಾಂತ ಸಂಬರ್ಗಿ ರವರು ನಿಜಕ್ಕೂ ಸಾಕಷ್ಟು ಜನಪ್ರಿಯತೆಯನ್ನು ಕೂಡ ಗಳಿಸಿದ್ದಾರೆ. ಇಂತಹ ಸಮಯದಲ್ಲಿ ಬಿಗ್ ಬಾಸ್ ಮನೆಯಿಂದ ಹೊರ ಬಂದ ತಕ್ಷಣ ಎಲ್ಲರಿಗೂ ಅದೃಷ್ಟ ಕೇಳಿ ಬರುವುದು ಸಹಜ, ಆದರೆ ಅದ್ಯಾಕೋ ತಿಳಿದಿಲ್ಲ ಬಹುತೇಕ ಸ್ಪರ್ಧಿಗಳಿಗೆ ಇನ್ನು ಅದೃಷ್ಟ ಬಾಗಿಲು ತಟ್ಟಿಲ್ಲ. ಆದರೆ ಪ್ರಶಾಂತ ಸಂಬರ್ಗಿ ರವರಿಗೆ ಇದೀಗ ಒಂದಲ್ಲ ಎರಡಲ್ಲ ಮೂರು ಮೂರು ಅದೃಷ್ಟ ಒಟ್ಟಾಗಿ ಒಮ್ಮೆಲೆ ಬಂದಿದೆ.

ಹೌದು ಸ್ನೇಹಿತರೇ ಮೂಲಗಳ ಪ್ರಕಾರ ಪ್ರಶಾಂತ ಸಂಬರ್ಗಿ ರವರು ಮನೆಯಿಂದ ಹೊರಬಂದ ಮೇಲೆ ಮೂರು ಚಿತ್ರಗಳಿಗೆ ಅಧಿಕೃತವಾಗಿ ಸಹಿ ಹಾಕಿದ್ದಾರೆ, ರವಿ ಶ್ರೀವತ್ಸ, ಎನ್ ಕುಮಾರ್ ಹಾಗೂ ಕನ್ನಡದ ಖ್ಯಾತ ಗಾಯಕರಾಗಿರುವ ಹಂಸಲೇಖರವರು ನಿರ್ದೇಶನ ಮಾಡಲಿರುವ ಮೂರು ಚಿತ್ರಗಳಿಗೆ ಪ್ರಶಾಂತ ಸಂಬರ್ಗಿ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಪ್ರಶಾಂತ ಸಂಬರ್ಗಿ ರವರು ಮೂರು ಚಿತ್ರಗಳಲ್ಲಿ ಯಾವ ಪಾತ್ರ ನಿರ್ವಹಣೆ ಮಾಡುತ್ತಾರೆ ಎಂಬುದರ ಕುರಿತು ಇನ್ನೂ ಮಾಹಿತಿ ಸಿಕ್ಕಿಲ್ಲ. ಆದರೆ ಮಂಜು ಅರವಿಂದ್ ಇವರೆಲ್ಲರನ್ನು ಮೀರಿಸಿ ಮೊದಲು ಸಿನಿಮಾಗೆ ಸಹಿ ಹಾಕಿದ್ದು ಮಾತ್ರ ಪ್ರಶಾಂತ ಸಂಬರ್ಗಿ