ಮಂಜು, ಅರವಿಂದ್ ರವರಿಗೆ ಫೈನಲ್ನಲ್ಲಿ ಪೈಪೋಟಿ ನೀಡುವ ಮನೆಯ ಏಕೈಕ ಸ್ಪರ್ಧಿ ಯಾರು ಗೊತ್ತಾ?? ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ.

ಮಂಜು, ಅರವಿಂದ್ ರವರಿಗೆ ಫೈನಲ್ನಲ್ಲಿ ಪೈಪೋಟಿ ನೀಡುವ ಮನೆಯ ಏಕೈಕ ಸ್ಪರ್ಧಿ ಯಾರು ಗೊತ್ತಾ?? ಸೋಶಿಯಲ್ ಮೀಡಿಯಾದಲ್ಲಿ ಇವರದ್ದೇ ಹವಾ.

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮನೆಯ ಸ್ಪರ್ಧಿಗಳ ಅಭಿಪ್ರಾಯ ಒಂದಾಗಿದ್ದಾರೆ ಮನೆಯಿಂದ ಹೊರಗಡೆ ಇರುವ ಪ್ರೇಕ್ಷಕರ ಅಭಿಪ್ರಾಯ ಬೇರೆಯಾಗಿರುತ್ತದೆ. ಮನೆಯಲ್ಲಿ ಸ್ಪರ್ಧಿಗಳು ತಾವು ಅತ್ಯುತ್ತಮವಾಗಿ ಆಟ ಆಡುತ್ತಿದ್ದೇವೆ ಆದ್ದರಿಂದ ಖಂಡಿತ ನಾವು ವಿನ್ನರ್ ಆಗಬಹುದು ಎಂದೆಲ್ಲ ತಮ್ಮ ಕುರಿತು ತಾವು ಬಹಳ ಕಾನ್ಫಿಡೆನ್ಸ್ ಇಟ್ಟು ಕೊಂಡಿರುತ್ತಾರೆ ಆದರೆ ಕೇವಲ ಟಾಸ್ಕ್ ಆಡುವುದು ಮುಖ್ಯವಲ್ಲ ಎಂಬುದು ಪ್ರೇಕ್ಷಕರ ಅಭಿಪ್ರಾಯ.

ಬಹುಶಹ ಇದೇ ಕಾರಣಕ್ಕಾಗಿ ರಾಜೀವ್ ರವರು ಟಾಸ್ಕ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದರೂ ಕೂಡ ಗೋಲ್ಡನ್ ಪಾಸ್ ವಿಚಾರದಲ್ಲಿ ನಡೆದುಕೊಂಡ ರೀತಿಯಿಂದ ಕೇವಲ ಒಂದು ವಾರದ ತಪ್ಪಿನಿಂದಾಗಿ ಬಿಗ್ ಬಾಸ್ ಮನೆಯಿಂದ ಹೊರ ಬಂದರು. ಅಂದು ಶಮಂತ್ ರವರು ತಾವು ಬೇಗ ಓಡಿದರೆ ಸೋಲುತ್ತೇನೆ ಎಂದು ತಿಳಿದಿದ್ದರೂ ಕೂಡ ರಾಜೀವ್ ರವರನ್ನು ಬಹಳ ಸುಲಭವಾಗಿ ಸೋಲಿಸಿದರು.

ಮತ್ತೊಂದೆಡೆ ಶುಭ ರವರು ಮುಂದೆ ಹೋದರೆ ನಾನು ಗೆಲ್ಲುತ್ತೇನೆ ಎಂದು ತಿಳಿದಿದ್ದ ರಾಜೀವ್ ರವರು ಓಟದಲ್ಲಿ ಶುಭ ರವರನ್ನು ಸೋಲಿಸುವ ಆಲೋಚನೆ ಕೂಡ ಮಾಡಲಿಲ್ಲ. ಹೀಗೆ ಕೇವಲ ಟಾಸ್ಕ್ ನಲಿ ಗೆಲ್ಲುವುದು ಮುಖ್ಯವಲ್ಲ ಬದಲಾಗಿ ಚಿಕ್ಕ ಚಿಕ್ಕ ನಡುವಳಿಕೆಗಳು ಕೂಡ ಸ್ಪರ್ಧೆಯ ಸೋಲಿಗೆ ಬಹಳ ಸುಲಭವಾಗಿ ಕಾರಣ ವಾಗುತ್ತವೆ. ಇದೀಗ ಅದೇ ರೀತಿಯ ಘಟನೆಗಳು ಮತ್ತೊಮ್ಮೆ ನಡೆಯುತ್ತಿದ್ದು ಪ್ರತಿಯೊಬ್ಬರ ಸ್ಪರ್ಧಿಗಳು ಕೂಡ ನೇರವಾಗಿ ಪ್ರಶಾಂತ ಸಂಬಂಧವನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹೌದು ಸ್ನೇಹಿತರೇ, ಮನೆಯ ಮಂದಿಯೆಲ್ಲ ನೇರವಾಗಿ ಪ್ರಶಾಂತ್ ರವರನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂಬುವುದರಲ್ಲಿ ಎರಡು ಮಾತಿಲ್ಲ.

ಅದರಲ್ಲೂ ಮಂಜು ಪಾವಗಡ ರವರು ಇಷ್ಟು ದಿವಸ ಗಳಿಸಿದ ಒಳ್ಳೆ ಹೆಸರನ್ನು ಕಳೆದುಕೊಳ್ಳುತ್ತಿದ್ದಾರೆ ಯಾಕೆಂದರೆ ಪ್ರತಿಯೊಂದು ವಿಚಾರಕ್ಕೂ ಕೂಡ ಪ್ರಶಾಂತ ಅವರ ವಿರುದ್ಧವಾಗಿ ಮಾತನಾಡುತ್ತೀದ್ದಾರೆ ಎಂದು ಟ್ರೋಲ್ ಪೇಜ್ ಗಳು ಮಂಜು ಪಾವಗಡ ರವರನ್ನು ನಂದು ಎಲ್ಲಿಡಲಿ ನಂದಗೋಪಾಲ ಎಂದೆಲ್ಲ ಟ್ರೋಲ್ ಮಾಡುತ್ತಿದ್ದಾರೆ, ಬಹುತೇಕ ಟ್ರೊಲ್ ಪೇಜ್ ಗಳು ಪ್ರಶಾಂತ್ ರವರ ಪರವಾಗಿ ನಿಂತಿವೆ, ಖಂಡಿತ ಇಲ್ಲಿನವರೆಗೂ ಫೇವರೆಟ್ ಮಂಜು ಪಾವಗಡ ರವರೇ ಆದರೆ ಪ್ರಶಾಂತ ಸಂಬರ್ಗಿ ಅವರ ಮೇಲೆ ಎಲ್ಲರಿಗೂ ಸಹನುಭೂತಿ ಮೂಡುತ್ತಿದೆ, ಇದೇ ಸಮಯದಲ್ಲಿ ಪ್ರಶಾಂತ ರವರು ಪ್ರತಿಯೊಂದು ವಿಚಾರದಲ್ಲಿ ಸರಿಯಾಗಿರುವುದು ಪ್ಲಸ್ ಪಾಯಿಂಟ್.

ಇನ್ನು ಅರವಿಂದ್ ಹಾಗೂ ದಿವ್ಯ ಉರುಡುಗ ರವರ ಟಾರ್ಗೆಟ್ ಯಾರು ಎಂದು ಹೇಳಬೇಕಾಗಿಲ್ಲ, ಅದರಲ್ಲೂ ಭಾನುವಾರದ ಸಂಚಿಕೆಯಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಪ್ರಶಾಂತ್ ಅವರಿಗಿಂತ ಫೈನಲ್ ಹೋಗಲು ಹೆಚ್ಚು ಅರ್ಹತೆ ಹೊಂದಿದ್ದಾರೆ, ಎಂದು ಹೇಳುವ ಮೂಲಕ ದಿವ್ಯ ಉರುಡುಗ ರವರು ಎಲ್ಲರೂ ಒಮ್ಮೆಲೆ ಹುಬ್ಬೇರಿಸುವಂತೆ ಹೇಳಿಕೆ ನೀಡಿದರು. ಹೀಗೆ ಎಲ್ಲರ ಟಾರ್ಗೆಟ್ ಪ್ರಶಾಂತ್ ಸಂಬರ್ಗಿ ಆಗಿರುವ ಕಾರಣ ಅವರ ಕುರಿತು ಸಹಾನುಭೂತಿ ಕೂಡ ಹೆಚ್ಚಾಗಿ ಮೂಡುತ್ತಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ಕಳಿಸುವುದನ್ನು ಮರೆಯಬೇಡಿ.