ಎಲ್ಲಾ ಹೊಗಳಿ ಕೊನೆಯಲ್ಲಿ ರೇಷ್ಮೆ ಸೀರೆಯಂತೆಯೇ ವೈಷ್ಣವಿ ರವರಿಗೆ ಖಡಕ್ಕಾಗಿ ಉತ್ತರ ನೀಡಿದ ಸುದೀಪ್, ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿರುವ ವೈಷ್ಣವಿ ರವರು ಯಾವ ರೀತಿ ಆಟವಾಡುತ್ತಾರೆ ಹಾಗೂ ಯಾವ ರೀತಿಯ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಯಾರಿಗೂ ಹೇಳುವ ಅವಶ್ಯಕತೆ ಇಲ್ಲ ಯಾಕೆಂದರೆ ನೀವು ಯಾರ ಅಭಿಮಾನಿ ಆಗಿದ್ದರೂ ಕೂಡ ವೈಷ್ಣವಿ ಗೌಡರವರು ಬಹಳ ಉತ್ತಮ ವ್ಯಕ್ತಿತ್ವ ಹೊಂದಿರುವ ಸ್ಪರ್ಧಿ ಇವರು ಗೆದ್ದರೆ ಯಾವುದೇ ಆಶ್ಚರ್ಯ ಪಡಬೇಕಾಗಿಲ್ಲ, ದಿನೇ ದಿನೇ ತಮ್ಮ ನಡವಳಿಕೆಯ ಮೂಲಕ ಎಲ್ಲರ ಮನಗೆದ್ದಿದ್ದಾರೆ ಎಂದು ಉತ್ತರ ನೀಡುತ್ತಾರೆ. ಆದರೆ ಕಳೆದ ವಾರ ಪ್ರಶಾಂತ ಅಭಿಮಾನಿಗಳು ಇದ್ದಕ್ಕಿದ್ದ ಹಾಗೆ ವೈಷ್ಣವಿ ರವರ ವಿರುದ್ಧ ಮಾತನಾಡಿದರು.

ಇಷ್ಟು ದಿವಸ ಬಹಳ ಉತ್ತಮ ಸ್ನೇಹಿತರಾಗಿದ್ದ ಪ್ರಶಾಂತ ಸಂಬರ್ಗಿ ಹಾಗೂ ವೈಷ್ಣವಿ ರವರ ನಡುವೆ ಸಾಕಷ್ಟು ವಿಚಾರಗಳಲ್ಲಿ ಕಳೆದ ವಾರ ಚರ್ಚೆ ಸೃಷ್ಟಿಯಾಗಿತ್ತು, ಪ್ರಶಾಂತ ಸಂಬರ್ಗಿ ರವರ ಮೇಲೆ ಕೈ ಎತ್ತಿದಾಗ ಕೂಡ ಅಭಿಮಾನಿಗಳು ಅಷ್ಟಾಗಿ ಚರ್ಚೆ ಮಾಡಿರಲಿಲ್ಲ ಆದರೆ ತಾವೇ ಹಗ್ಗವನ್ನು ಕೊರಳಿಗೆ ಕಟ್ಟಿಕೊಂಡು ಆಟವನ್ನು ಆಡುವಾಗ ಪ್ರಶಾಂತ್ ರವರ ಆಟದ ವೈಖರಿಯ ಕುರಿತು ಪ್ರಶ್ನೆ ಮಾಡಿ ಕಳಪೆ ಎಂದು ಆಯ್ಕೆ ಮಾಡಿದ ವೈಷ್ಣವಿ ರವರ ವಿರುದ್ಧ ಪ್ರಶಾಂತ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದರು. ಆದರೆ ವೈಷ್ಣವಿ ರವರ ಅಭಿಮಾನಿಗಳು ಮಾತ್ರ ಇದರಲ್ಲಿ ಯಾವುದೇ ತಪ್ಪಿಲ್ಲ ಎಂದು ವೈಷ್ಣವಿ ರವರ ಪರವಾಗಿ ನಿಂತಿದ್ದರು. ಇನ್ನು ಉಳಿದವರ ಅಭಿಮಾನಿಗಳ ಕುರಿತು ನಿಮಗೆ ಹೇಳುವ ಅವಶ್ಯಕತೆ ಇಲ್ಲ ಯಾಕೆಂದರೆ ಖುದ್ದು ಸ್ಪರ್ಧಿಗಳೇ ಬಿಗ್ ಬಾಸ್ ಮನೆಯಲ್ಲಿ ಪ್ರಶಾಂತ್ ರವರನ್ನು ಟಾರ್ಗೆಟ್ ಮಾಡುತ್ತಿರುತ್ತಾರೆ ಇನ್ನು ಅವರ ಅಭಿಮಾನಿಗಳು ಕೂಡ ಅದೇ ಕೆಲಸ ಮಾಡುತ್ತಾರೆ.

ಈ ವಿಷಯದ ಕುರಿತು ಸುದೀಪ್ ಚರ್ಚೆ ಮಾಡಲು ಆರಂಭಿಸಿದಾಗ ವೈಷ್ಣವಿ ರವರ ಆಟದ ಕುರಿತು ಎಂದಿನಂತೆ ಹೊಗಳಿದರು, ಆದರೆ ನೀವು ಇಷ್ಟು ದಿವಸ ನಡೆಸಿಕೊಂಡು ಬಂದಿದ್ದ ವ್ಯಕ್ತಿತ್ವ ಆ ವಾರ ಕೆಲವೊಂದು ಕ್ಷಣಗಳಲ್ಲಿ ನನಗೆ ಕಾಣಲಿಲ್ಲ, ಹಗ್ಗವನ್ನು ಕತ್ತಿಗೆ ಕಟ್ಟಿಕೊಂಡಿದ್ದು ಪ್ರಶಾಂತ ಸಂಬರ್ಗಿ ರವರ ತಪ್ಪಲ್ಲ ಅದು ನಿಮ್ಮದು. ಹಾಗೂ ಗುಂಪಿನ ಆಟದಲ್ಲಿ ಆಡುವಾಗ ಇತರ ಸ್ಪರ್ಧಿಗಳನ್ನು ಸೋಲಿಸಲು ಪ್ರಯತ್ನ ಪಡುವುದು ತಪ್ಪಲ್ಲ, ಪ್ರಶಾಂತ ಸಂಬರ್ಗಿ ರವರು ಬಹಳ ರ್ಯಾಶ್ ಆಟವಾಡಿದ್ದಾರೆ ಎಂದು ಹೇಳಿದ್ದೀರಾ ಅದರಲ್ಲಿ ಯಾವುದೇ ತಪ್ಪು ನನಗೆ ಕಾಣಿಸುತ್ತಿಲ್ಲ ಎಂದು ನಿಧಾನವಾಗಿಯೇ ಖಡಕ್ಕಾಗಿ ಹೇಳಿಕೆ ನೀಡಿದ್ದಾರೆ. ಈ ಮೂಲಕ ಮತ್ತೊಮ್ಮೆ ಪ್ರಶಾಂತ್ ಅವರು ತಮ್ಮ ವಾದದಲ್ಲಿ ಗೆಲ್ಲುವ ಮೂಲಕ ಮತ್ತಷ್ಟು ಅಭಿಮಾನಿಗಳನ್ನು ಪಡೆದು ಕೊಂಡಿದ್ದಾರೆ.