ದಿವ್ಯ ವಿರುದ್ಧ ಅರವಿಂದ ಅಭಿಮಾನಿಗಳು ಗರಂ, ಮತ್ತೊಮ್ಮೆ ಅಸಲಿ ಮುಖ ತೋರಿಸಿಬಿಟ್ಟರು ಎಂದ ನೆಟ್ಟಿಗರು ಯಾಕೆ ಗೊತ್ತಾ??

ದಿವ್ಯ ವಿರುದ್ಧ ಅರವಿಂದ ಅಭಿಮಾನಿಗಳು ಗರಂ, ಮತ್ತೊಮ್ಮೆ ಅಸಲಿ ಮುಖ ತೋರಿಸಿಬಿಟ್ಟರು ಎಂದ ನೆಟ್ಟಿಗರು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ನೆನ್ನೆಯ ಬಿಗ್ ಬಾಸ್ ಎಪಿಸೋಡಿನಲ್ಲಿ ಏನಾಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ದಿವ್ಯ ಉರುಡುಗ ರವರು ತಾವು ಆಟ ಎಂದು ಬಂದಾಗ ಯಾವುದೇ ಸ್ಪರ್ಧಿಯ ಜೊತೆ ಇರುವ ಸಂಬಂಧಗಳನ್ನು ನೋಡುವುದಿಲ್ಲ ಎಂದು ಮೊದಲೇ ಸ್ಪಷ್ಟ ಪಡಿಸಿದ್ದರು. ಬಹುಶಹ ಅದೇ ಕಾರಣಕ್ಕಾಗಿ ಇರಬೇಕು ನೆನ್ನೆ ಅರವಿಂದ್ ರವರು ಯಾಕೆ ಗ್ಲೋಸ್ ಎತ್ತಿಕೊಳ್ಳಲು ಹತ್ತಿರ ಹೋಗಿ ನಿಂತಿದ್ದೀರಾ ಎಂದು ಪ್ರಶ್ನೆ ಮಾಡಿದಾಗ ಇದು ನನ್ನ ಆಟ ಎಂದು ಸ್ಪಷ್ಟ ಪಡಿಸಿದ್ದರು. ಇದಕ್ಕೆ ಅರವಿಂದ್ ರವರು ಬೇಜಾರು ಮಾಡಿಕೊಂಡು ದಿವ್ಯ ಉರುಡುಗ ರವರ ಜೊತೆ ಮಾತನ್ನು ಬಿಟ್ಟಿದ್ದರು. ಇದು ಇಷ್ಟಕ್ಕೇ ನಿಂತಿಲ್ಲ ಬದಲಾಗಿ ಮತ್ತಷ್ಟು ಬದಲಾಗಿದೆ.

ಹೌದು ಸ್ನೇಹಿತರೇ ಬಿಗ್ ಬಾಸ್ ಜೋಡಿ ಟಾಸ್ಕ್ ಆರಂಭವಾದ ದಿನದಿಂದಲೂ ಕೂಡ ಒಟ್ಟಿಗೆ ಇರುವ ದಿವ್ಯ ಹಾಗೂ ಅರವಿಂದ್ ರವರು ಯಾವುದೇ ಕ್ಷಣದಲ್ಲೂ ಕೂಡ ಒಬ್ಬರನ್ನೊಬ್ಬರು ಬಿಟ್ಟು ಕೊಟ್ಟಿರಲಿಲ್ಲ, ಆದರೆ ಸುದೀಪ್ ರವರು ಇಬ್ಬರಲ್ಲಿ ಒಬ್ಬರು ಮಾತ್ರ ಉಳಿಯಬೇಕು ಎಂದಾಗ ಯಾವ ನಿರ್ಧಾರ ತೆಗೆದು ಕೊಳ್ಳುತ್ತಿರಾ ಎಂದಾಗ ದಿವ್ಯ ಉರುಡುಗ ರವರು ನಾನು ಉಳಿಯುತ್ತೇನೆ ಎಂದಿದ್ದರು ಆದರೆ ಅರವಿಂದ್ ರವರು ದಿವ್ಯ ರವರಿಗಾಗಿ ಅವಕಾಶ ಬಿಡಲು ಸಿದ್ಧವಿದ್ದೇನೆ ಎಂದು ಉತ್ತರ ನೀಡಿದ್ದರು. ಹೀಗೆ ಎಲ್ಲಾ ಮಾತುಕತೆಗಳ ನಡುವೆ ಇದೀಗ ದಿವ್ಯ ದಿವ್ಯ ಉರುಡುಗ ರವರು ಇದೀಗ ಬಿಡುಗಡೆಯಾಗಿರುವ ಪ್ರೊಮೊ ದಲ್ಲಿ ಮತ್ತೊಮ್ಮೆ ಅರವಿಂದ್ ರವರ ವಿರುದ್ಧ ಮಾತನಾಡಿದ್ದಾರೆ.

ಹೌದು ಸ್ನೇಹಿತರೇ ಮತ್ತೆ ಅದೇ ರೀತಿ ಇಂದು ಗ್ಲೋಸ್ ತೆಗೆದು ಕೊಳ್ಳಲು ದಿವ್ಯ ಉರುಡುಗ ರವರು ನಿಂತಿರುವ ಸಮಯದಲ್ಲಿ ಮತ್ತೊಮ್ಮೆ ಅರವಿಂದ್ ರವರು ಇದೇ ರೀತಿಯ ಪ್ರಶ್ನೆಗಳನ್ನು ಕೇಳುತ್ತಾರೆ ಹಾಗೂ ಮನೆ ಮಂದಿ ಕೂಡ ಇದನ್ನೇ ಪ್ರಶ್ನೆ ಮಾಡುತ್ತಾರೆ, ಅರವಿಂದ್ ರವರೆಗೂ ಸೇರಿಸಿ ಉತ್ತರ ನೀಡಿರುವ ದಿವ್ಯ ಹುಡುಗರು ಯಾವುದಕ್ಕೂ ಕ್ಯಾರೇ ಎನ್ನದೆ ಇದು ನನ್ನ ಆಟ ನಾನು ಬಿಟ್ಟುಕೊಡಲು ತಯಾರಿಲ್ಲ, ನೀವು ನಿಂತು ಕೊಳ್ಳಬೇಡಿ ಎಂದು ಹೇಳಿಲ್ಲ ಎಂದು ಖಡಾ ಖಂಡಿತವಾಗಿ ಹೇಳಿದ್ದಾರೆ ಇದಕ್ಕೆ ಮನೆಯ ಮಂದಿ ಅಸಮಾಧಾನ ವ್ಯಕ್ತ ಪಡಿಸುವುದು ಸಾಮಾನ್ಯ ಆದರೆ ಅರವಿಂದ್ ರವರು ಮತ್ತೊಮ್ಮೆ ದಿವ್ಯ ರವರ ನಿರ್ಧಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇಷ್ಟೆಲ್ಲ ದಿನ ಜೊತೆಗಿದ್ದ ಇವರಿಬ್ಬರು ಕೇವಲ ಎರಡು ದಿನಗಳಲ್ಲಿ ತಮ್ಮ ಸಂಪೂರ್ಣ ಅಭಿಪ್ರಾಯಗಳನ್ನು ಬದಲಾಯಿಸಿ ಕೊಂಡಿರುವುದು ಪ್ರೇಕ್ಷಕರಿಗೆ ಆಶ್ಚರ್ಯ ತರಿಸಿರುವುದು ಸುಳ್ಳಲ್ಲ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸುವುದನ್ನು ಯಾವುದೇ ಕಾರಣಕ್ಕೂ ಮರೆಯಬೇಡಿ