ನಮಸ್ಕಾರ ಸ್ನೇಹಿತರೇ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೊತೆ ಜೊತೆಯಲಿ ಸೀರಿಯಲ್ ಜನಮನ ಗೆದ್ದ ಸೀರಿಯಲ್. ಇದು ಆರಂಭವಾದಾಗಿನಿಂದ ಉತ್ತಮ ಪ್ರತಿಕ್ರಿಯೆಯನ್ನು ಗಳಿಸಿಕೊಂಡಿದೆ. ಹಾಗೆಯೇ ಇದಕ್ಕೆ ಬರುವ ಟಿ ಆರ್ ಪಿ ರೇಟಿಂಗ್ ಕೂಡ ಉತ್ತಮವಾಗಿಯೇ ಇದೆ. ಜೀ ಕನ್ನಡದ ’ಗಟ್ಟಿಮೇಳ’, ಹಾಗೂ’ಜೊತೆ ಜೊತೆಯಲಿ’ ಈ ಎರಡೂ ಧಾರಾವಾಹಿಗಳು ಹೆಚ್ಚಿನ ಜನಮನ್ನಣೆಯನ್ನು ಗಳಿಸಿವೆ. ಇದಕ್ಕೆ ಪ್ರಮುಖ ಕಾರಣ ಪಾತ್ರವರ್ಗ ಹಾಗೂ ಧಾರಾವಾಹಿಯ ಕಥೆ.
ಜೊತೆಜೊತೆಯಲಿ ಧಾರಾವಾಹಿಯಲ್ಲಿ ಅನು ಸಿರಿಮನೆ ಹಾಗೂ ಆರ್ಯವರ್ಧನ್ ಜೋಡಿ ಮನೆಮಾತಾಗಿದೆ. ಅನುವಾಗಿ ಮೇಘ ಶೆಟ್ಟಿ ಹಾಗೂ ಆರ್ಯನಾಗಿ ಅನಿರುದ್ಧ ತಮ್ಮ ಪಾತ್ರವನ್ನು ಅತ್ಯಂತ ಚೆನ್ನಾಗಿ ನಿಭಾಯಿಸಿದ್ದಾರೆ. ಈ ಧಾರಾವಾಹಿಯಲ್ಲಿ ಆಗಾಗ ಟ್ವಿಸ್ಟ್ ಗಳನ್ನು ನೀಡುತ್ತಲೇ ಬಂದಿದೆ ಜೊತೆ ಜೊತೆಯಲಿ ತಂಡ. ಇದೀಗ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಪಾತ್ರದಲ್ಲಿ ನಟಿಸುತ್ತಿದ್ದ ಮೇಘ ಶೆಟ್ಟಿ ಧಾರಾವಾಹಿಯನ್ನು ಬಿಟ್ಟಿದ್ದಾರೆ ಎನ್ನಲಾಗಿದೆ.
ಮೇಘ ಅವರ ಕೊನೆಯ ಎಪಿಸೋಡ್ ಚಿತ್ರೀಕರಣ ಕೂಡ ಮುಗಿಸಿದ್ದಾರಂತೆ. ಅವರ ನಟನೆಯ ಇನ್ನೂ ಕೆಲವು ಎಪಿಸೋಡ್ ಗಳು ಪ್ರಸಾರವಾಗಲಿವೆ. ಮೇಘ ಶೆಟ್ಟಿಯವರ ನಟನೆ ಜೊತೆ ಜೊತೆಯಲಿ ಧಾರಾವಾಹಿ ಉತ್ತಮವಾಗಿ ಮೂಡಿ ಬರುವುದಕ್ಕೆ ಒಂದು ಕಾರಣ. ಆದರೆ ಇದೀಗ ಅವರು ನಟಿಸುವುದಿಲ್ಲವಾದ್ದರಿಂದ ಬೇರೆ ಕನ್ನಡತಿಯ ಹುಡುಕಾಟದಲ್ಲಿದ್ದಾರಂತೆ ಸೀರಿಯಲ್ ತಂಡ. ಇದಕ್ಕೆ ಮೂರು ಹೆಸರುಗಳು ಕೇಳಿ ಬರುತ್ತಿವೆ.
ಟಾಪ್ ಮೊದಲನೇ ಸ್ಥಾನದಲ್ಲಿ ಕವಿತಾ ಗೌಡ – ಲಕ್ಷ್ಮೀ ಬಾರಮ್ಮ: ಹೌದು, ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಚಿನ್ನುವಾಗಿ ನಟಿಸಿದ್ದ ಕವಿತಾ ಗೌಡ ಅನು ಪಾತ್ರಕ್ಕೆ ತಕ್ಕಂತೆ ಇದ್ದಾರೆ ಎಂಬುದು ಕೆಲವರ ಅನಿಸಿಕೆ. ಲಕ್ಷ್ಮೀ ಬಾರಮ್ಮ ಧಾರಾವಾಹಿಯಲ್ಲಿ ಒಟ್ಟಿಗೆ ನಟಿಸಿದ್ದ ಕವಿತಾ ಹಾಗೂ ಚಂದನ್ ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಸರಳವಾಗಿ ಮದುವೆಯಾಗಿದ್ದರು. ಬಿಗ್ ಬಾಸ್ ನಲ್ಲಿಯೂ ಕೂಡ ಭಾಗವಹಿಸಿದ್ದರು ಕವಿತಾ. ಇದೀಗ ರಿಯಾಲಟಿ ಶೋಗಳಲ್ಲಿಯೂ ಕೂಡ ಜೊತೆಯಾಗಿ ಭಾಗವಹಿಸಿದ್ದಾರೆ. ಉತ್ತಮ ನಟನೆ ಮಾಡುವ ಕವಿತಾ ಅನು ಪಾತ್ರಕ್ಕೆ ಸರಿ ಎಂದು ಜನ ಹೇಳುತ್ತಾರೆ.
ಇನ್ನು ಟಾಪ್ ಎರಡನೇ ಸ್ಥಾನದಲ್ಲಿ ಸುಪ್ರಿತಾ ನಾರಾಯಣ್ – ಸೀತಾ ವಲ್ಲಭ: ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ ಸೀತಾ ವಲ್ಲಭ ಧಾರಾವಾಹಿಯನ್ನು ನೀವು ನೋಡಿರಬಹುದು. ಅದರಲ್ಲಿ ಮೈಥಿಲಿ ಅಲಿಯಾಸ್ ಗುಬ್ಬಿಯಾಗಿ ಕಾಣಿಸಿಕೊಂಡ ಸುಪ್ರಿತಾ ನಾರಾಯಣ್ ಅವರ ಮೃದು ನಟನೆಗೆ ಫೇಮಸ್ ಆಗಿದ್ದರು. ಈ ಧಾರಾವಾಹಿ ಮುಗಿದ ನಂತರ ಸ್ಟಾರ್ ಸುವರ್ಣ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ’ಸರಸು’ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ ಸುಪ್ರಿತಾ. ಸುಪ್ರಿತಾ ಮೂಲತಃ ಮೈಸೂರಿನವರು. ಇವರ ಇನೋಸೆಂಟ್ ಫೇಸ್ ನಿಂದಾಗಿ ಅನು ಪಾತ್ರಕ್ಕೆ ಸರಿಯಾದ ಆಯ್ಕೆ ಎಂಬುದು ಸಾಕಷ್ಟು ಜನರ ಅಭಿಪ್ರಾಯ. ಜೊತೆ ಜೊತೆಯಲಿ ತಂಡ ಸುಪ್ರಿತಾ ಅವರನ್ನು ಆಯ್ಕೆ ಮಾಡುತ್ತಾರಾ ಎಂದು ಕಾದು ನೋಡಬೇಕು.
ಇನ್ನು ಟಾಪ್ ಮೊದಲನೇ ಸ್ಥಾನದಲ್ಲಿ ಅನ್ವಿತಾ ಸಾಗರ್ – ಗಟ್ಟಿಮೇಳ: ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಇನ್ನೊಂದು ಫೇಮಸ್ ಧಾರಾವಾಹಿ ಗಟ್ಟಿಮೇಳ. ಈ ಧಾರಾವಾಹಿಯಲ್ಲಿ ತಂಗಿಯ ಪಾತ್ರದಿಂದ ಜನ ಮನ ಗೆದ್ದ ನಟಿ ಆದ್ಯ ಅಲಿಯಾಸ್ ಅನ್ವಿತಾ ಸಾಗರ್. ಅನ್ವಿತಾ ಮೂಲತಃ ಸಾಗರದವರು. ಈಗ ಅಪ್ಪ ಅಮ್ಮನ ಜೊತೆ ಮಂಗಳೂರಿನಲ್ಲಿ ನೆಲೆಸಿದ್ದಾರೆ. ಇವರು ತುಳು ಚಿತ್ರದಲ್ಲಿ ನಟಿಸಿದ್ದಾರೆ. ಇವರ ಅಣ್ಣನೂ ಕೂಡ ತುಳು ಸಿನಿಮಾದಲ್ಲಿ ಉತ್ತಮ ನಟನೆ ಮಾಡುತ್ತಿದ್ದಾರೆ. ಗಟ್ಟಿಮೇಳದಲ್ಲಿ ಮೂವರು ಅಣ್ಣಂದಿರ ಮುದ್ದಿನ ತಂಗಿ ಆದ್ಯಳಾಗಿ ಕಾಣಿಸಿಕೊಳ್ಳುತ್ತಿರುವ ಅನ್ವಿತಾ ಅನು ಸಿರಿಮನೆ ಪಾತ್ರಕ್ಕೆ ಸೂಕ್ತ ಎಂಬ ಮಾತು ಕೇಳಿಬರುತ್ತಿದೆ. ಪ್ರೇಕ್ಷಕರು ತಮಗಿಷ್ಟವಾದ ನಟಿಯರನ್ನು ಸೂಚಿಸುತ್ತಿದ್ದಾರೆ. ಆದರೆ ಜೊತೆ ಜೊತೆಯಲಿ ಧಾರಾವಾಹಿ ತಂಡ ಯಾವ ನಟಿಯನ್ನು ಅನು ಸಿರಿಮನೆಯಾಗಿ ಆಯ್ಕೆ ಮಾಡುತ್ತಾರೆ ಎಂಬುದು ಮಾತ್ರ ಸಿಕ್ರೆಟ್!