ಈ ಬಾರಿಯ ಬಿಗ್ ಬಾಸ್ ವಿನ್ನರ್ ಯಾರು ಎಂದು ತಿಳಿಸಿದ ನಿಧಿ ಸುಬ್ಬಯ್ಯ, ವಿನ್ನರ್ ಹಾಗೂ ರನ್ನರ್ ಯಾರಂತೆ ಗೊತ್ತಾ?

ನಮಸ್ಕಾರ ಸ್ನೇಹಿತರೇ, ಈ ವಾರ ಮನೆಯಿಂದ ಹೊರ ಬಂದಿರುವ ಖ್ಯಾತ ನಟಿ ನಿಧಿ ಸುಬ್ಬಯ್ಯ ರವರು, ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಮನೆಯ ಕುರಿತು ಮಾತನಾಡಿದ್ದಾರೆ. ಹೌದು ಸ್ನೇಹಿತರೇ, ಮನೆಯಲ್ಲಿದ್ದಾಗ ಬಾರಿ ಸದ್ದು ಮಾಡಿ, ಅರವಿಂದ್ ಹಾಗೂ ಪ್ರಶಾಂತ್ ರವರ ಜೊತೆ ಅಷ್ಟೇನು ಚೆನ್ನಾಗಿ ಬಾಂಧ್ಯವ್ಯ ಸೃಷ್ಟಿ ಮಾಡಿಕೊಳ್ಳದೆ ವಿವಿಧ ವಿಚಾರಗಳಲ್ಲಿ ಮಾತನಾಡಿದ್ದ ನಿಧಿ ಸುಬ್ಬಯ್ಯ ರವರು ಇದೀಗ ಪ್ರೇಕ್ಷಕರ ಅಭಿಪ್ರಾಯದಂತೆ ಮನೆಯಿಂದ ಹೊರಬಂದಿದ್ದಾರೆ.

ಇದೇ ಸಮಯದಲ್ಲಿ ಬಿಗ್ ಬಾಸ್ ಮನೆಯ ಕುರಿತು ಹಾಗೂ ಅಲ್ಲಿನ ಸ್ಪರ್ದಿಗಳ ಕುರಿತು ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯ ವ್ಯಕ್ತ ಪಡಿಸಿರುವ ನಿಧಿ ಸುಬ್ಬಯ್ಯ ರವರು, ಫೈನಲ್ ನಲ್ಲಿ ಯಾರು ಇರಬಹುದು ಹಾಗೂ ಯಾವ ಸ್ಪರ್ಧಿ ವಿಜೇತರಾಗುತ್ತಾರೆ ಅಷ್ಟೇ ಅಲ್ಲದೇ ರನ್ನರ್ ಅಪ್ ಯಾರು ಎಂಬುದನ್ನು ಕೂಡ ಕಾರಣಗಳ ಸಮೇತ ವಿವರಣೆ ನೀಡಿದ್ದಾರೆ. ಅಷ್ಟೇ ಅಲ್ಲದೇ ಮುಂದಿನ ವಾರ ಯಾರು ಮನೆಯಿಂದ ಹೊರಬರಬೇಕು ಎಂಬುದನ್ನು ಕೂಡ ಉತ್ತರಿಸಿದ್ದಾರೆ. ಹಾಗಿದ್ದರೆ ಇವರ ಅಭಿಪ್ರಾಯಗಳೇನು ಹಾಗೂ ಇವರ ಅಭಿಪ್ರಾಯದ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.

ಸ್ನೇಹಿತರೇ, ಈ ವಾರ ಮನೆಯಿಂದ ಚಕ್ರವರ್ತಿ ಚಂದ್ರಚೂಡ್ ರವರು ಮನೆಯಿಂದ ಹೊರಗಡೆ ಬರಬೇಕು ಎಂದಿದ್ದಾರೆ. ಇದೇ ಸಮಯದಲ್ಲಿ ಮಾತನ್ನು ಮುಂದುವರೆಸಿದ ನಿಧಿ ಸುಬ್ಬಯ್ಯ ರವರು ದಿವ್ಯಾ ಉರುಡುಗ, ಪ್ರಶಾಂತ್ ಸಂಬರಗಿ,​ ಮಂಜು, ಶುಭಾ, ವೈಷ್ಣವಿ ರವರು ಫೈನಲ್ ತಲುಪುತ್ತಾರೆ, ಕೊನೆಯಲ್ಲಿ ಮಂಜು ಮತ್ತು ವೈಷ್ಣವಿ ಕೊನೆಯಲ್ಲಿ ಉಳಿಯುತ್ತಾರೆ. ಇವರಿಬ್ಬರಲ್ಲಿ ಮಂಜು ಪಾವಗಡ ರವರು ವಿನ್ ಆಗುತ್ತಾರೆ ಎಂದು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಈ ಕುರಿತಂತೆ ನಿಮ್ಮ ಅಭಿಪ್ರಾಯ??