ಸುಧಾ ಮೂರ್ತಿ ಅಮ್ಮನವರಿಗೆ ಇಷ್ಟವಾದ ಇಬ್ಬರು ಟಾಪ್ ನಟರು ಯಾರ್ಯಾರು ಗೊತ್ತೇ?? ಅಮ್ಮನವರ ಆಯ್ಕೆ ಹೇಗಿದೆ ಗೊತ್ತೇ??

ಸುಧಾ ಮೂರ್ತಿ ಅಮ್ಮನವರಿಗೆ ಇಷ್ಟವಾದ ಇಬ್ಬರು ಟಾಪ್ ನಟರು ಯಾರ್ಯಾರು ಗೊತ್ತೇ?? ಅಮ್ಮನವರ ಆಯ್ಕೆ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದಲ್ಲಿ ಜನನಾಯಕರು ಎಷ್ಟು ಒಳ್ಳೆಯ ಕೆಲಸ ಮಾಡುತ್ತಾರೋ ಜನ ಕಾರ್ಯಗಳನ್ನು ಮಾಡುತ್ತಾರೋ ಗೊತ್ತಿಲ್ಲ. ಆದರೆ ಕರ್ನಾಟಕ ಜನರಿಗೆ ಸಂಕಷ್ಟ ಎಂದು ಬಂದಾಗ ಇವರು ಮಾತ್ರ ಸದಾ ಮುಂದೆ ಬಂದು ಜನರ ಸೇವೆಗೆ ಸಿದ್ಧರಾಗಿರುತ್ತಾರೆ. ಇದರಿಂದ ಅವರು ಯಾವುದೇ ಲಾಭವನ್ನು ಪಡೆಯಲು ಇಂದಿಗೂ ಸಹ ಹೃದಯವೈಶಾಲ್ಯ ತಿಂದ ಕನ್ನಡಿಗರಿಂದ ಅಮ್ಮ ಎಂದು ಕರೆಸಿಕೊಳ್ಳುತ್ತಾರೆ. ನಾವು ಯಾರ ಬಗ್ಗೆ ಮಾತನಾಡುತ್ತಿದ್ದೇವೆ ಎಂಬುದನ್ನು ತಿಳಿಯಬೇಕೇ ತಪ್ಪದೆ ಕೊನೆಯವರೆಗೂ ಓದಿ.

ಹೌದು ನಾವು ಇಂದು ಮಾತನಾಡುತ್ತಿರುವುದು ಕರ್ನಾಟಕ ಕಂಡ ಶ್ರೇಷ್ಠ ಮಾನವತವಾದಿ ಸಾಹಿತಿ ಮತ್ತು ಸಮಾಜಸೇವಕಿ ಸುಧಾಮೂರ್ತಿ ಅಮ್ಮನವರ ಬಗ್ಗೆ. ಹೌದು ಕರ್ನಾಟಕ ರಾಜ್ಯ ಅಥವಾ ರಾಜ್ಯವನ್ನು ಮೀರಿ ಜನರು ಎಲ್ಲಿ ಸಂಕಷ್ಟದಲ್ಲಿದ್ದರೂ ಅಲ್ಲಿಗೆ ಹೋಗಿ ಜನರ ಕಷ್ಟವನ್ನು ತಿಳಿದು ಅದನ್ನು ಕ್ಷಣಮಾತ್ರದಲ್ಲಿ ಪರಿಹರಿಸುವ ಏಕೈಕ ವ್ಯಕ್ತಿಯೆಂದರೆ ಅದು ಖಂಡಿತವಾಗಿ ಸುಧಾಮೂರ್ತಿ ಅಮ್ಮ. ಈ ಮಹಾಮಾರಿ ಪ್ರಾರಂಭವಾದಾಗ ಜನರ ಕಷ್ಟಗಳಿಗೆ ಸ್ಪಂದಿಸಲು ನೂರು ಕೋಟಿ ಅನುದಾನವನ್ನು ನೀಡಿದ್ದರು.

ಇದು ಮಾತ್ರವಲ್ಲದೆ ಅದೆಷ್ಟು ಸಾವಿರಾರು ಲಕ್ಷಾಂತರ ಮನೆಯ ಜನರಿಗೆ ಆಹಾರದ ಕಿಟ್ ನ್ನು ತಮ್ಮ ಇನ್ಫೋಸಿಸ್ ಫೌಂಡೇಶನ್ ಮೂಲಕ ವಿತರಿಸಿದ್ದಾರೆ. ಒಮ್ಮೆ ಭಾರತ ದೇಶ ಕಂಡ ಶ್ರೇಷ್ಠ ನಟ ಬಾಲಿವುಡ್ನ ದಂತಕತೆ ಅಮಿತಾಬಚ್ಚನ್ ರವರು ಕೌನ್ ಬನೇಗಾ ಕರೋಡ್ ಪತಿಯಲ್ಲಿ ಸುಧಾಮೂರ್ತಿ ಅಮ್ಮನವರ ಪಾದ ಮುಟ್ಟಿ ನಮಸ್ಕರಿಸಿ ಸುಧಾಮೂರ್ತಿಯವರು ಜೀವಿಸುತ್ತಿರುವ ದೇಶದಲ್ಲಿ ನಾವಿದ್ದೇವೆ ಎಂಬುದಕ್ಕೆ ನಮಗೆ ತುಂಬಾ ಹೆಮ್ಮೆಯಾಗುತ್ತದೆ ಎಂದು ಹೇಳಿದ್ದರು.

ಇದು ಸುಧಾಮೂರ್ತಿ ಅಮ್ಮನವರ ಮೇರುವ್ಯಕ್ತಿತ್ವ ಹಿಡಿದ ಕೈಗನ್ನಡಿಯಾಗಿದೆ. ಸಹಸ್ರಾರು ಕೋಟಿ ರೂಪಾಯಿಗಳ ಒಡತಿ ಆಗಿದ್ದರೂ ಸಹ ಸುಧಾಮೂರ್ತಿ ಅಮ್ಮನವರು ಇಂದಿಗೂ ಸಹ ಸರಳ ಜೀವನದ ಮೂಲಕ ಕನ್ನಡಿಗರ ಮನಗೆದ್ದಿದ್ದಾರೆ. ಇನ್ನು ಸಾಹಿತಿಯಾಗಿ ಕೂಡ ಸುಧಾಮೂರ್ತಿ ಅಮ್ಮನವರು ಕನ್ನಡ ಸಾರಸ್ವತ ಲೋಕಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಇತ್ತೀಚಿಗಷ್ಟೇ ಅವರು ಬರೆದ ಹಲವಾರು ಪುಸ್ತಕಗಳು ಬಿಡುಗಡೆಯಾಗಿವೆ.

ದೇಶದ ವಿದೇಶದ ಯಾವುದೇ ಮೂಲೆಯಲ್ಲಿ ಹೋದರು ಕೂಡ ತಾವು ಕನ್ನಡತಿ ಎಂಬ ಹೆಮ್ಮೆಯಿಂದ ಮಾತನಾಡಿ ಕನ್ನಡವನ್ನು ವಿಶ್ವಾದ್ಯಂತ ಪಸರಿಸಿದ್ದಾರೆ. ಇಂದಿಗೂ ಸಹ ಮಂತ್ರಾಲಯಕ್ಕೆ ಹೋಗಿ ಅಲ್ಲಿನ ಊಟೋಪಚಾರ ಗಳಲ್ಲಿ ಬಿಡುವಿದ್ದಾಗ ತಾವು ಕೂಡ ಕೆಲಸ ಮಾಡಿ ದೇವರ ಸೇವೆ ಮಾಡುತ್ತಾ ಪುನೀತ ಭಾವವನ್ನು ಕಾಣುತ್ತಾರೆ. ಇನ್ನೂ ಇವೆಲ್ಲದರೊಂದಿಗೆ ಸುಧಾ ಮೂರ್ತಿ ಅಮ್ಮನವರಿಗೆ ಕನ್ನಡದ ಯಾವ ನಟ ಇಷ್ಟ ಎಂಬುದು ಇತ್ತೀಚೆಗೆ ತಿಳಿದುಬಂದಿದೆ. ಸುಧಾಮೂರ್ತಿ ಅಮ್ಮನವರ ನೆಚ್ಚಿನ ನಟ ಯಾರೆಂಬುದು ನಿಮಗೆ ಹೇಳುತ್ತೇವೆ ಬನ್ನಿ.

ಹೌದು ಕರ್ನಾಟಕದ ಶ್ರೇಷ್ಠ ವ್ಯಕ್ತಿತ್ವಗಳಲ್ಲಿ ಒಬ್ಬರಾದ ಸುಧಾಮೂರ್ತಿ ಅಮ್ಮನವರ ಕನ್ನಡದ ನೆಚ್ಚಿನ ನಟ ಎಂದರೆ ಅದು ಇತ್ತೀಚಿನ ದಿನಗಳಲ್ಲಿ ಸ್ಯಾಂಡಲ್ವುಡ್ನಲ್ಲಿ ಸಿಂಪಲ್ ಸ್ಟಾರ್ ಎಂದೇ ಖ್ಯಾತರಾಗಿರುವ ರಕ್ಷಿತ್ ಶೆಟ್ಟಿ ಅವರು. ರಕ್ಷಿತ್ ಶೆಟ್ಟಿಯವರ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಚಿತ್ರ ನೋಡಿದ ಮೇಲೆ ಅವರಿಗೆ ರಕ್ಷಿತ್ ಶೆಟ್ಟಿ ಎಂದರೆ ತುಂಬಾ ಇಷ್ಟ. ತೆಲುಗಿನಲ್ಲಿ ಕನ್ನಡಮೂಲದ ನಟರಾದ ಜೂನಿಯರ್ ಎನ್ಟಿಆರ್ ಎಂದರೆ ಕೂಡ ತುಂಬಾ ಇಷ್ಟ. ಸಮಾಜ ಸೇವೆ ಹಾಗೂ ಸಾಹಿತ್ಯದೊಂದಿಗೆ ಸುಧಾಮೂರ್ತಿ ಅಮ್ಮನವರಿಗೆ ಸಿನಿಮಾ ಕೂಡ ಇಷ್ಟವಿದೆ ಎಂಬುದು ಇತ್ತೀಚಿಗೆ ನಾವು ತಿಳಿದುಕೊಂಡಿದ್ದೇವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡು ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.