ಆರ್ಸಿಬಿ ತಂಡಕ್ಕೆ ಕೋರೋನ ಶಾಕ್, ಐಪಿಎಲ್ ನಲ್ಲಿ ಮಹತ್ವದ ವಿದ್ಯಮಾನ. ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಐಪಿಎಲ್ ಟೂರ್ನಿಯು ಜನರನ್ನು ಮನೆಯಲ್ಲಿ ಕೂರಿಸುವುದರಲ್ಲಿ ಯಶಸ್ವಿಯಾಗಿದೆ, ಮನೆಯಲ್ಲಿ ಇದ್ದ ಸಮಯದಲ್ಲಿ ಐಪಿಎಲ್ ಬಹಳ ಉತ್ತಮ ಮನರಂಜನಾ ಕಾರ್ಯಕ್ರಮವಾಗಿದೆ. ಬಹುತೇಕ ದೇಶದಲ್ಲಿ ಕೋರೋಣ ಎರಡನೇ ಅಲೆಯಿಂದ ಎಲ್ಲರೂ ಮನೆಯಲ್ಲಿ ಉಳಿದು ಕೊಳ್ಳಬೇಕಾಗಿರುವ ಪರಿಸ್ಥಿತಿ ಎದುರಾಗಿರುವ ಸಂದರ್ಭದಲ್ಲಿ ಐಪಿಎಲ್ ಮಹತ್ವದ ಪಾತ್ರ ವಹಿಸುತ್ತಿದೆ.

ಅದೇ ಕಾರಣಕ್ಕಾಗಿ ಐಪಿಎಲ್ ಟೂರ್ನಿ ಯನ್ನು ಬಯೋಬಲ್ ನಲ್ಲಿ ಮುಂದುವರಿಸಲು ನಿರ್ಧಾರ ತೆಗೆದು ಕೊಳ್ಳಲಾಗಿತ್ತು, ಆದರೆ ಬಯೋಬಲ್ ನಡುವೆಯೂ ಕೂಡ ಇದೀಗ ನಡೆಯಬಾರದಂತಹ ಘಟನೆ ನಡೆದು ಹೋಗಿದೆ, ಇದರಿಂದ ಆರ್ಸಿಬಿ ಅಭಿಮಾನಿಗಳು ಬೇಸರವಾಗಿದ್ದು, ಕೊಂಚ ಯಾಮಾರಿದರೆ ಕೂಡ ಐಪಿಎಲ್ ಟೂರ್ನಿ ನಡೆಯುವ ಯಾವುದೇ ಸಾಧ್ಯತೆಗಳಿರುವುದಿಲ್ಲ.

ಹೌದು ಸ್ನೇಹಿತರೇ ಬಯೋಬಲ್ ನಡುವೆಯೂ ಕೂಡ ಆಟಗಾರರು ವಿವಿಧ ಕಾರಣಗಳಿಗೆ ಉದಾಹರಣೆಗೆ ಇಂಜುರಿ ಸಮಸ್ಯೆಗಳನ್ನು ಸ್ಕ್ಯಾನ್ ಮಾಡಿಸಿ ಕೊಳ್ಳಲು ಆಸ್ಪತ್ರೆಗಳಿಗೆ ತೆರಳಲೇ ಬೇಕಾದ ಸಂದರ್ಭ ಎದುರಾಗಿರುವ ಕಾರಣ ಬಹುಶಃ ಅಲ್ಲಿ ಆಟಗಾರರಿಗೆ ಕೋರೋಣ ಅಂಟಿಕೊಂಡಿದೆ, ಇದೀಗ ಮೂಲಗಳ ಪ್ರಕಾರ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಮೂರು ಆಟಗಾರರಿಗೆ ಪಾಸಿಟಿವ್ ಬಂದಿದೆ, ಅದಕ್ಕಾಗಿಯೇ ಇಂದು ನಡೆಯಬೇಕಾಗಿದ್ದ ಆರ್ಸಿಬಿ ಪಂದ್ಯ ಕೂಡ ಏಪ್ರಿಲ್ 30 ನೇ ತಾರೀಕಿಗೆ ಮುಂದೂಡಲಾಗಿದೆ, ಇನ್ನು ಇದೇ ಸಮಯದಲ್ಲಿ ಆರ್ಸಿಬಿ ತಂಡವು ಕೆಕೆಆರ್ ತಂಡದ ಜೊತೆ ಬಂದೆ ಮಾಡಲು ನಿರಾಕರಿಸಿದೆ ಎಂಬುದು ತಿಳಿದು ಬಂದಿದೆ. ಇದರಿಂದ ಹಿಂದಿನ ಆರ್ಸಿಬಿ ಪಂದ್ಯ ನಡೆಯುವುದಿಲ್ಲ. ಇಷ್ಟೆಲ್ಲ ಸವಾಲುಗಳ ನಡುವೆ ಟೂರ್ನಿ ಮುಂದುವರೆಯಬೇಕೆ? ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಿ.