ಮಂಜು ರವರಿಗೆ ನೇರವಾಗಿ ದ್ರೋ’ಹ ಮಾಡಿ ಕೈ ಕೊಟ್ಟ ದಿವ್ಯ ಸುರೇಶ್ ! ಕ್ಷಮಿಸುತ್ತಾರಾ ಪ್ರೇಕ್ಷಕರು??

ಮಂಜು ರವರಿಗೆ ನೇರವಾಗಿ ದ್ರೋ’ಹ ಮಾಡಿ ಕೈ ಕೊಟ್ಟ ದಿವ್ಯ ಸುರೇಶ್ ! ಕ್ಷಮಿಸುತ್ತಾರಾ ಪ್ರೇಕ್ಷಕರು??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಮನೆಯಲ್ಲಿ ಯಾರೂ ಊಹಿಸದಂತಹ ಘಟನೆಗಳು ಇದೀಗ ನಡೆಯುತ್ತಿದ್ದು ಮನೆಯ ಬಹುತೇಕ ಸದಸ್ಯರು ದಿವ್ಯ ಸುರೇಶ್, ಮಂಜು ಪಾವಗಡ ಹಾಗೂ ನಿಧಿ ಸುಬ್ಬಯ್ಯ ರವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ದಿವ್ಯ ಸುರೇಶ್ ರವರು ಕಳೆದ ಲವ್ ಲೆಟರ್ ಟಾಸ್ಕ್ ಗಳನ್ನು ಗೆಲ್ಲಲು ನಿಧಿ ಸುಬ್ಬಯ್ಯರ ಬರ ಜೊತೆ ಮಾಡಿಕೊಂಡ ಒಪ್ಪಂದ ಮನೆಯಲ್ಲಿ ಬಿರುಗಾಳಿಯನ್ನು ಎಬ್ಬಿಸಿದೆ.

ಇಷ್ಟು ದಿವಸ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದ ದಿವ್ಯ ಉರುಡುಗ, ಅರವಿಂದ್, ರಾಜೀವ್, ಮಂಜು ಪಾವಗಡ ಹಾಗೂ ದಿವ್ಯ ಸುರೇಶ್ ರವರ ನಡುವೆ ಬಿರುಗಾಳಿ ಎದ್ದಿದ್ದು, ದಿವ್ಯ ಸುರೇಶ್ ಹಾಗೂ ಮಂಜು ಪಾವಗಡ ರವರ ವಿರುದ್ಧ ಬಹಿರಂಗವಾಗಿ ದಿವ್ಯ ಹಾಗೂ ಅರವಿಂದ ಸ-ಮರ ಸಾರಿದ್ದಾರೆ, ಕೆಲವೊಂದು ಕಠಿಣ ಪದಗಳನ್ನು ಬಳಸುವ ಮೂಲಕ ಅರವಿಂಡ್ ರವರು ನೆನ್ನೆ ಮಂಜು ಪಾವಗಡ ರವರಿಗೆ ಶಾಕ್ ನೀಡಿದ್ದರು, ಇನ್ನು ನನ್ನ ಜೀವಮಾನದ ಸ್ನೇಹಿತೆ ದಿವ್ಯ ಸುರೇಶ್ ಅನ್ನುತ್ತಿದ್ದ ದಿವ್ಯ ಉರುಡುಗ ರವರು ದಿವ್ಯ ಸುರೇಶ್ ರವರನ್ನು ಹಲವಾರು ಗಂಟೆಗಳ ಕಾಲ ಮಾತನಾಡಿಸದೆ ಬಿಟ್ಟಿದ್ದರು.

ನೀವು ಮಾಡಿರುವ ತಪ್ಪನ್ನು ಮರೆಯಲು ಸಾಧ್ಯವೇ ಇಲ್ಲ ಅಷ್ಟು ಸುಲಭವಾಗಿ ಹೇಗೆ ಮರೆಯುವುದು ಎಂದು ಅರವಿಂದ್ ಅವರು ಕೂಡ ಖಾರವಾಗಿ ಮಾತನಾಡಿದ್ದಾರೆ, ಇಷ್ಟೆಲ್ಲಾ ನಡೆಯುತ್ತಿರುವ ಸಂದರ್ಭದಲ್ಲಿ ದಿವ್ಯ ಸುರೇಶ್ ರವರು ನಿಧಿ ರವರ ಜೊತೆ ಮಾಡಿಕೊಂಡ ಒಪ್ಪಂದ ಹೊರಬಿದ್ದಾಗ ದಿವ್ಯ ಸುರೇಶ್ ರವರು ಮಂಜುರವರ ಹೆಸರು ಹೇಳದೇ ಇದ್ದರೂ ನಡೆಯುತ್ತಿತ್ತು,

ಆದರೆ ನಾನು ನನ್ನ ನಿರ್ಧಾರ ತೆಗೆದುಕೊಳ್ಳುವ ಮುನ್ನ ಮಂಜುರವರ ಜೊತೆ ಚರ್ಚೆ ಮಾಡಿದೆ ಎಂದು ಹೇಳಿ ಮಂಜು ರವರನ್ನು ಕೂಡ ಸಿಕ್ಕಿ ಹಾಕಿಸಿದರು, ಮಂಜುರವರು ತಾವಾಗಿಯೆ ಐಡಿಯಾ ಕೊಟ್ಟು ಇದನ್ನು ಮಾಡು ಎಂದರೆ ತಪ್ಪಾಗುತ್ತದೆ, ಆದರೆ ತಾವು ನಿರ್ಧಾರ ಮಾಡಿ ಅಭಿಪ್ರಾಯವನ್ನು ಮಂಜುಗೆ ತಿಳಿಸಿದಾಗ ಮಂಜುರವರದ್ದು ಹೇಗೆ ತಪ್ಪಾಗುತ್ತದೆ ಎಂದು ಪ್ರೇಕ್ಷಕರು ಪ್ರಶ್ನೆ ಮಾಡಿದ್ದಾರೆ. ಇದರಿಂದ ಮನೆಯ ಮಂದಿಯೆಲ್ಲ ಮಂಜು ಪಾವಗಡ ರವರ ವಿರುದ್ಧ ಖಾರವಾದ ಮಾತುಗಳನ್ನು ಬಳಸುವುದನ್ನು ನೋಡಿದ ಪ್ರೇಕ್ಷಕರು ಮಂಜು ರವರ ಬೆಂಬಲಕ್ಕೆ ನಿಂತಿದ್ದಾರೆ ಹಾಗು ದಿವ್ಯ ಸುರೇಶ್ ರವರಿಗೆ ತರಾಟೆಗೆ ತೆಗೆದುಕೊಂಡಿದ್ದಾರೆ.