ಮಂಜು, ದಿವ್ಯ, ಅರವಿಂದ್ ಇವರ್ಯಾರೂ ಅಲ್ಲ, ಬಿಗ್ ಬಾಸ್ ಗೆಲ್ಲುವ ಸಾಧ್ಯತೆ ಇರುವ ಸ್ಪರ್ಧಿ ಯಾರಂತೆ ಗೊತ್ತಾ??

ಮಂಜು, ದಿವ್ಯ, ಅರವಿಂದ್ ಇವರ್ಯಾರೂ ಅಲ್ಲ, ಬಿಗ್ ಬಾಸ್ ಗೆಲ್ಲುವ ಸಾಧ್ಯತೆ ಇರುವ ಸ್ಪರ್ಧಿ ಯಾರಂತೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಆರಂಭವಾದ ಮೊದಲನೇ ದಿನದಿಂದಲೂ ಮಂಜು ಪಾವಗಡ ರವರು ಬಹಳ ಅದ್ಭುತವಾಗಿ ಮನೆಯಲ್ಲಿ ಎಲ್ಲರೂ ನಕ್ಕು ನಲಿಸುವಲ್ಲಿ ಯಶಸ್ವಿಯಾಗುತ್ತಿದ್ದಾರೆ, ಆದ ಕಾರಣ ಮಂಜು ಪಾವಗಡ ರವರು ಗೆಲ್ಲಬೇಕು ಎಂಬ ಮಾತುಗಳು ಆರಂಭದಲ್ಲಿ ಕೇಳಿ ಬಂದಿದ್ದವು, ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದರ ನಡುವೆ ಜೋಡಿ ಟಾಸ್ಕ್ ಬಂದಾಗ ಮೊದಲ ಬಾರಿಗೆ ಅರವಿಂದ ರವರು ಹೆಚ್ಚು ಸದ್ದು ಮಾಡಲು ಆರಂಭಿಸಿದರು.

ಜೋಡಿ ಟಾಸ್ ನಲ್ಲಿ ಅರವಿಂದ್ ಹಾಗೂ ದಿವ್ಯ ಉರುಡುಗ ಅವರು ತೆಗೆದುಕೊಂಡ ನಿರ್ಧಾರ ಭಾರಿ ಚರ್ಚೆಯನ್ನು ಸೃಷ್ಟಿ ಮಾಡಿತ್ತು, ಇದೇ ಸಮಯದಲ್ಲಿ ಅರವಿಂದ್ ರವರ ನೇರಾ ನೇರ ವ್ಯಕ್ತಿತ್ವಕ್ಕೆ ಎಲ್ಲರೂ ಭೇಷ್ ಎಂದಿದ್ದರು, ಈ ಮೂಲಕ ಅರವಿಂದ್ ರವರು ಕೂಡ ಗೆಲ್ಲುವ ಸ್ಪರ್ದಿಯಾಗಿ ಹೆಸರು ಪಡೆದುಕೊಂಡರು., ಇವರನ್ನು ಹೊರತು ಪಡಿಸಿದರೆ ದಿವ್ಯ ಉರುಡುಗ ರವರು ಹೆಚ್ಚು ಸದ್ದು ಮಾಡುವಲ್ಲಿ ಬಿಗ್ ಬಾಸ್ ಮನೆಯಲ್ಲಿ ಯಶಸ್ವಿಯಾಗಿದ್ದಾರೆ. ಇವರನ್ನು ಹೊರತುಪಡಿಸಿದರೆ ಕೆಲವೊಂದು ಜನ ದಿವ್ಯ ಸುರೇಶ್ ರವರ ಹೆಸರನ್ನು ತೆಗೆದು ಕೊಳ್ಳುತ್ತಾರೆ, ಅಲ್ಲಲ್ಲಿ ರಾಜೀವ್ ರವರ ಹೆಸರು ಕೂಡ ಜೋರಾಗಿಯೇ ಕೇಳಿ ಬರುತ್ತದೆ.

ಆದರೆ ಉಳಿದ ಸ್ಪರ್ಧಿಗಳು ಹೆಚ್ಚು ಸದ್ದು ಮಾಡುವಲ್ಲಿ ಆರಂಭದ ದಿನಗಳಲ್ಲಿ ಸಂಪೂರ್ಣವಾಗಿ ವಿಫಲರಾಗಿದ್ದರು, ಎಲ್ಲಿ ನೋಡಿದರೂ ಮಂಜು ಪಾವಗಡ ರವರ ಹೆಸರು ಶೇಕಡ 90ಕ್ಕೂ ಹೆಚ್ಚು ಜನರ ಬಾಯಲ್ಲಿ ಕೇಳಿ ಬರುತ್ತಿತ್ತು, ಆದರೆ ಇದೀಗ ಕಾಲ ಬದಲಾಗಿದೆ ಪ್ರೇಕ್ಷಕರ ಆಯ್ಕೆಗಳು ಕೂಡ ಬದಲಾಗಿದೆ, ಬಹುತೇಕರ ಬಾಯಲ್ಲಿ ಇದೀಗ ಒಬ್ಬರು ಸ್ಪರ್ಧೆಯ ಹೆಸರು ಕೇಳಿ ಬರುತ್ತಿದ್ದು ಆ ಸ್ಪರ್ಧಿಯು ಬಿಗ್ ಬಾಸ್ ಮನೆಯ ವಿಜೇತರಾಗಲು ಎಲ್ಲಾ ಸಾಧ್ಯತೆ ಹೊಂದಿದ್ದಾರೆ ಎಂದು ಜನರು ಅಭಿಪ್ರಾಯ ಪಟ್ಟಿದ್ದಾರೆ. ಬನ್ನಿ ಈ ಕುರಿತು ಎಂದು ನಿಮಗೆ ಸಂಪೂರ್ಣ ಮಾಹಿತಿ ನೀಡುತ್ತೇವೆ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮಂಜು ಪಾವಗಡ ರವರು ಜನರನ್ನು ನಕ್ಕು ನಲಿಸುವ ಯಶಸ್ವಿ ಯಾಗುತ್ತಿರುವ ಸಂದರ್ಭದಲ್ಲಿ ದಿವ್ಯ ಸುರೇಶ್ ರವರ ಜೊತೆ ಬಹಳ ಸ್ನೇಹವನ್ನು ಬೆಳೆಸಿಕೊಂಡರು, ಆದರೆ ದಿನೇ ದಿನೇ ಸ್ನೇಹ ಹೆಚ್ಚಾದಂತೆ ಮಂಜು ಪಾವಗಡ ರವರು ಮನೆಯ ಇತರ ಸ್ಪರ್ಧಿಗಳ ಜೊತೆ ಕಾಲ ಕಳೆಯುವುದನ್ನು ಸಂಪೂರ್ಣ ಕಡಿಮೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿ ಬಂದಿವೆ, ಅದೇ ಕಾರಣಕ್ಕಾಗಿ ಕೆಲವೊಂದು ಸ್ಪರ್ಧಿಗಳು ಮಂಜು ಪಾವಗಡ ರವರನ್ನು ನಾಮಿನೇಷನ್ ಗೆ ಕೂಡ ಆಯ್ಕೆ ಮಾಡಿದ್ದಾರೆ.

ಇನ್ನು ಅರವಿಂದ್ ಹಾಗೂ ದಿವ್ಯ ಉರುಡುಗ ರವರ ಜೋಡಿ ಟಾಸ್ಕ್ ನಲ್ಲಿ ಸದ್ದು ಮಾಡುವಲ್ಲಿ ಯಶಸ್ವಿಯಾದ ಬಳಿಕ ಬಿಗ್ ಬಾಸ್ ಮನೆಯಲ್ಲಿ ಕೆಲವೊಂದು ವಾರಗಳ ಕಾಲ ಹೆಚ್ಚು ಸದ್ದು ಮಾಡಿದರು, ಆದರೆ ಕಳೆದ ಎರಡು ವಾರಗಳಿಂದ ಈ ಜೋಡಿಯು ಸಂಪೂರ್ಣವಾಗಿ ಬಿಗ್ ಬಾಸ್ ಮನೆ ಆಟಗಳನ್ನು ಮರೆತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ, ಬಹುತೇಕ ಸ್ಪರ್ಧಿಗಳು ತಮ್ಮ ವಯಕ್ತಿಕ ವಿಚಾರಗಳಲ್ಲಿ ಹಾಗೂ ವಯಕ್ತಿಕ ಮಾತುಕತೆಗಳಲ್ಲಿ ಹೆಚ್ಚು ನಿರತವಾಗಿರುವ ಕಾರಣ ಪ್ರೇಕ್ಷಕರಿಗೆ ಮನರಂಜನೆ ಕಡಿಮೆಯಾಗಿದೆ,

ಆದರೆ ಇದೇ ಸಮಯದಲ್ಲಿ ಯಾರೂ ಊಹಿಸದ ರೀತಿಯಲ್ಲಿ ಅತ್ಯುತ್ತಮವಾಗಿ ಟಾಸ್ಕ್ಗಳನ್ನು ಮಾಡುವ ಮೂಲಕ ಹಾಗೂ ಆರಂಭವಾದ ಮೊದಲ ದಿನದಿಂದಲೂ ಕೂಡ ಇಲ್ಲಿಯವರೆಗೂ ಹೆಚ್ಚು ಮಾತನಾಡದೆ ಇದ್ದರೂ ತನ್ನ ವ್ಯಕ್ತಿತ್ವವನ್ನು ಉಳಿಸಿಕೊಂಡು ಎಲ್ಲರ ಮನ ಗೆದ್ದಿರುವ ವೈಷ್ಣವಿ ರವರು ಇದೀಗ ದಿನೇ ದಿನೇ ಪ್ರೇಕ್ಷಕರ ಮನಗೆಲ್ಲುತ್ತಿದ್ದಾರೆ. ಒಂದು ವೇಳೆ ಇದು ಹೀಗೆ ಮುಂದುವರೆದಲ್ಲಿ ಕಂಡಿತ ವೈಷ್ಣವಿ ರವರು ಗೆಲ್ಲಬಹುದು ಹಾಗೂ ಅವರಿಗೆ ಆ ಸಾಧ್ಯತೆ ಇದೆ ಎಂದು ಪ್ರೇಕ್ಷಕರು ಅಭಿಪ್ರಾಯ ಪಟ್ಟಿದ್ದಾರೆ.