ಮಂಜು ಮೇಲೆ ಷಡ್ಯಂತ್ರ, ಅಭಿಮಾನಿಗಳು ಪ್ರಶಾಂತ್ ರವರಿಗೆ ಗರಂ ಆಗಿ ನೀಡಿದ ಉತ್ತರವೇನು ಗೊತ್ತೇ??

ಮಂಜು ಮೇಲೆ ಷಡ್ಯಂತ್ರ, ಅಭಿಮಾನಿಗಳು ಪ್ರಶಾಂತ್ ರವರಿಗೆ ಗರಂ ಆಗಿ ನೀಡಿದ ಉತ್ತರವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗು ತಿಳಿದಿರುವಂತೆ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿ 4 ವಾರಗಳು ಕಳೆದರೂ ಕೂಡ ಮನೆಯಲ್ಲಿ ಕೇಳಿ ಬರುತ್ತಿರುವ ಹೆಸರು ಕೇವಲ ಮಂಜು ಪಾವಗಡ ರವರದ್ದು ಮಾತ್ರ, ಮನೆಯಲ್ಲಿ ಅಷ್ಟೇ ಅಲ್ಲ ಹೊರಗಡೆ ಸಾಮಾಜಿಕ ಜಾಲತಾಣಗಳಲ್ಲಿ ಕೂಡ ಮಂಜುರವರು ಬಹಳ ಅತ್ಯತ್ತಮವಾಗಿ ಆಟವಾಡುತ್ತಿದ್ದಾರೆ ಇವರೇ ಗೆಲ್ಲಬೇಕು ಎನ್ನುತ್ತಾರೆ ಅಭಿಮಾನಿಗಳೇ. ಬಹುಶಃ ಅದೇ ಈಗ ಮಂಜು ರವರಿಗೆ ಸವಾಲಾಗಿ ಪರಿಣಮಿಸಿದಂತೆ ಕಾಣುತ್ತದೆ.

ಹೌದು ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಮನೆಯ ಬಹುತೇಕರು ಮಂಜು ಪಾವಗಡ ರವರ ಜೊತೆ ಚೆನ್ನಾಗಿದ್ದಾರೆ, ಇತರ ಸಂದರ್ಭದಲ್ಲಿ ಮನೆಯ ಮಾವ ಪ್ರಶಾಂತ್ ಸಂಬರ್ಗಿ ರವರು ದಿವ್ಯ ಸುರೇಶ್ ಹಾಗೂ ಶಮಂತ್ ರವರ ಬಳಿ ತೆರಳಿ ಮಂಜು ಗಮನ ಸೆಳೆಯಲು ನಿಮ್ಮಿಬ್ಬರನ್ನು ಬಳಸಿಕೊಳ್ಳುತ್ತಿದ್ದಾನೆ, ಮಂಜು ನಿಮ್ಮನ್ನು ಉಪಯೋಗಿಸಿ ಕೊಳ್ಳುತ್ತಿದ್ದಾನೆ, ಅದರಲ್ಲಿಯೂ ದಿವ್ಯ ರವರಿಗೆ ನೀವು ಆತನ ಬಾಲದ ರೀತಿ ಆಗಿ ಬಿಟ್ಟಿದ್ದೀರಾ, ನೀವು ಸ್ಟ್ರಾಂಗ್ ಇದ್ದೀರಾ, ನನಗೆ ಅರ್ಥವಾಗಿದೆ ನೀವು ಕೂಡ ಅದನ್ನು ಅರ್ಥ ಮಾಡಿಕೊಳ್ಳಿ, ಎಂದು ಮಂಜು ಪಾವಗಡ ರವರ ಜೊತೆ ಸೇರಬೇಡಿ ಎಂದು ಸಲಹೆ ನೀಡಿದ್ದಾರೆ. ಈ ಮಾತನ್ನು ಕೇಳಿದ ಅಭಿಮಾನಿಗಳು ಗರಂ ಆಗಿದ್ದಾರೆ.

ಇಲ್ಲಿ ಗಮನಿಸ ಬೇಕಾದ ವಿಷಯ ಏನೆಂದರೆ ಮಂಜು ಪಾವಗಡ ರವರು ಯಾರನ್ನೂ ಕೂಡ ಹೈಲೇಟ್ ಆಗಬೇಕು ಎಂದು ಬಳಸಿ ಕೊಳ್ಳುತ್ತಿಲ್ಲ ಬದಲಾಗಿ ಬೇರೆಯವರು ಹೈಲೇಟ್ ಆಗಬೇಕು ಎಂದು ಮಂಜು ಅವರನ್ನು ಬಳಸಿ ಕೊಳ್ಳುತ್ತಿದ್ದಾರೆ ಎಂಬುದನ್ನು ಯಾರೂ ಮರೆಯಬಾರದು ಎಂದು ಅಭಿಮಾನಿಗಳು ಗರಂ ಆಗಿದ್ದಾರೆ, ಇದೇ ಸಮಯದಲ್ಲಿ ಪ್ರಶಾಂತ ರವರು ಕೂಡ ಇತ್ತೀಚೆಗೆ ಮಂಜುರವರು ಜೊತೆ ಸಾಕಷ್ಟು ವಾದಗಳಿಗೆ ಇಳಿಯುತ್ತಿರುವುದು, ಕಂಡುಬಂದ ಕಾರಣ ಪ್ರಶಾಂತವಾದ ಹೈಲೇಟ್ ಆಗಬೇಕು ಮಂಜುರವರ ಜೊತೆ ಕ್ಯಾತೆ ತೆಗೆಯುತ್ತಿದ್ದಾರೆ ಎಂದು ಕೂಡ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.