ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಐಪಿಎಲ್ ಟೂರ್ನಿ ಇನ್ನೇನು ಕೆಲವೇ ಕೆಲವು ದಿನಗಳಲ್ಲಿ ಆರಂಭವಾಗುತ್ತಿದ್ದರೂ ಕೂಡ ಎಲ್ಲಾ ರಾಷ್ಟ್ರೀಯ ತಂಡಗಳ ಚಿತ್ತ ಟಿ-20 ವಿಶ್ವಕಪ್ ನತ್ತ ನೆಟ್ಟಿದೆ. ಎಲ್ಲಾ ತಂಡಗಳ ಆಟಗಾರರು ಕೂಡ ವಿಶ್ವಕಪ್ ಗಾಗಿ ಭರ್ಜರಿ ತಯಾರಿ ನಡೆಸಿದ್ದಾರೆ. ಐಪಿಎಲ್ ಕೂಡಾ ವಿಶ್ವಕಪ್ ತಯಾರಿಗೆ ವೇದಿಕೆಯಾಗಿ ಬದಲಾಗಲಿದೆ.
ಇಂತಹ ಸಂದರ್ಭದಲ್ಲಿ ಇದೀಗ ಇಂಗ್ಲೆಂಡ್ ವಿರುದ್ಧ ನಡೆದ ಟಿ-ಟ್ವೆಂಟಿ ಸರಣಿಯನ್ನು ಕೂಡ ವಿಶ್ವಕಪ್ ಟೂರ್ನಿಗೆ ಸಂಬಂಧಿಸಿ ಲೆಕ್ಕಾಚಾರಗಳನ್ನು ಹಾಕಲಾಗುತ್ತಿದೆ, ಇಷ್ಟು ದಿವಸ ಇಂಗ್ಲೆಂಡ್ ವಿಶ್ವಕಪ್ ಗೆಲ್ಲುವ ಫೇವರಿಟ್ ಎನ್ನುತ್ತಿದ್ದ ಇಂಗ್ಲೆಂಡ್ ಮಾಜಿ ನಾಯಕ ಮೈಕಲ್ ವಾನ್ ರವರು ಇದೀಗ ಮಾತನಾಡಿ ಭಾರತ ತಂಡ ಈಗಾಗಲೇ ಬಲಿಷ್ಠವಾಗಿದೆ ಇನ್ನೂ ಉಳಿದಿರುವ ಇಬ್ಬರು ಆಟಗಾರರು ತಂಡ ಸೇರಿಕೊಂಡರೇ ವಿಶ್ವಕಪ್ ಭಾರತ ತಂಡದ್ದೇ ಆಗಲಿದೆ ಎಂದಿದ್ದಾರೆ.
ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ಇಂಗ್ಲೆಂಡ್ ತಂಡದ ಮಾಜಿ ನಾಯಕ, ಭಾರತ ತಂಡ ಪ್ರಮುಖ ಇಬ್ಬರು ಆಟಗಾರರು ಇಲ್ಲದೆ ಸರಣಿಯನ್ನು ಗೆದ್ದಿದೆ, ಒಂದು ವೇಳೆ ಭಾರತ ಕ್ರಿಕೆಟ್ ತಂಡ ಇಂದು ಇರುವ ತಂಡದ ಜೊತೆಗೆ ವೇಗದ ಬೌಲರ್ ಜಸ್ಟೀತ್ ಬುಮ್ರಾ ಹಾಗೂ ವಿಶ್ವಶ್ರೇಷ್ಠ ಆಲ್-ರೌಂಡರ್ ರವೀಂದ್ರ ಜಡೇಜಾ ರವರನ್ನು ಸೂಕ್ತವಾಗಿ ಇಂದಿನ ತಂಡದಲ್ಲಿ ಸ್ಥಾನ ನೀಡಿದರೆ ಖಂಡಿತ ವಿಶ್ವಕಪ್ ಭಾರತ ತಂಡದ ಆಗಲಿದೆ ಎಂದು ಹೇಳಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯಬೇಡಿ.