ಮೊದಲ ಪತಿಯಿಂದ ಸುಧಾರಣೆ ಅವರು ಅನುಭವಿಸಿದ ಕಷ್ಟ ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಬಚಾವಾಗಿದ್ದು ಹೇಗೆ ಗೊತ್ತಾ??

ಮೊದಲ ಪತಿಯಿಂದ ಸುಧಾರಣೆ ಅವರು ಅನುಭವಿಸಿದ ಕಷ್ಟ ನೋಡಿದರೆ ನಿಜಕ್ಕೂ ಕಣ್ಣೀರು ಬರುತ್ತದೆ. ಬಚಾವಾಗಿದ್ದು ಹೇಗೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕನ್ನಡದ ಚಿತ್ರರಂಗದ ಖ್ಯಾತ ಹೀರೋಯಿನ್ ಎಂಬ ಖ್ಯಾತಿಯನ್ನು ಪಡೆದುಕೊಂಡಿರುವ ನಟಿ ಸುಧಾರಾಣಿ ರವರು ನಿಮಗೆಲ್ಲರಿಗೂ ತಿಳಿದಿರುತ್ತಾರೆ. ಇತ್ತೀಚಿಗೆ ಕಿರುತೆರೆಯ ಪಾದಾರ್ಪಣೆ ಕೂಡ ಮಾಡಿರುವ ಸುಧಾರಾಣಿ ರವರ ಜೀವನದ ಕುರಿತು ಕೆಲವೊಂದು ಕಹಿ ಘಟನೆಗಳ ಕುರಿತು ನಿಮಗೆ ಮಾಹಿತಿ ನೀಡುತ್ತೇವೆ ಇಂದು. ಇನ್ನು ಸುಧಾರಾಣಿ ರವರು ಕಷ್ಟದಲ್ಲಿದ್ದಾಗ ಅವರ ಕೈಹಿಡಿದಿದ್ದು ಬೇರೆ ಯಾರು ಅಲ್ಲ ಡಾಕ್ಟರ್ ರಾಜಕುಮಾರ್ ಮತ್ತು ಅಂಬರೀಷ್ ಅಣ್ಣ.

ಹೌದು ಸ್ನೇಹಿತರೇ ಬಾಲನಟಿಯಾಗಿ ಕನ್ನಡ ಚಿತ್ರರಂಗದಲ್ಲಿ ತಮ್ಮ ಪಯಣವನ್ನು ಆರಂಭಿಸಿದ ಸುಧಾರಾಣಿ ರವರು, ಕನ್ನಡಕ್ಕೆ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿದ್ದರು. ಯಶಸ್ಸಿನ ಉತ್ತುಂಗದಲ್ಲಿ ಇರುವಾಗ ಇವರಿಗೆ ತೆಲುಗು ತಮಿಳು ಹಾಗೂ ಮಲೆಯಾಳಂ ಸಿನಿಮಾಗಳಿಂದ ಕೂಟ ಆಫರ್ ಬಂದಿತ್ತು, ಹೀಗೆ ವಿವಿಧ ಚಿತ್ರರಂಗದಲ್ಲಿ ಅಭಿನಯಿಸಿದರು ಕೂಡ ಸುಧಾರಾಣಿ ರವರು ಎಂದಿಗೂ ಕೂಡ ಕನ್ನಡ ಚಿತ್ರರಂಗಕ್ಕೆ ಮೊದಲನೇ ಆದ್ಯತೆ ನೀಡುತ್ತಿದ್ದರು. ಹೀಗೆ ಎಲ್ಲವೂ ಸರಿ ಇದೆ ಎನ್ನುವಾಗ ಕುಟುಂಬದವರ ಪರಿಚಯದ ಇರುವ ಸಂಬಂಧವನ್ನು ಒಪ್ಪಿಕೊಂಡು ಸುಧಾರಾಣಿ ರವರು ಡಾಕ್ಟರ್ ಸಂಜಯ್ ಎಂಬ ಅಮೆರಿಕ ವ್ಯಕ್ತಿಯ ಜೊತೆ ಮದುವೆ ಆಗುತ್ತಾರೆ.

ಹೀಗೆ ಮದುವೆಯಾದಾಗ ಇಡೀ ಕುಟುಂಬವನ್ನು ಬಿಟ್ಟು ಸುಧಾರಾಣಿ ರವರು ಅಮೆರಿಕಾ ದೇಶಕ್ಕೆ ತೆರಳುತ್ತಾರೆ. ಇದಾದ ಬಳಿಕ ಸ್ವಲ್ಪ ದಿನಗಳ ಬಳಿಕ ಸುಧಾರಾಣಿ ರವರ ಪತಿ ಅಸಲಿ ಮುಖ ಬಯಲಾಗುತ್ತದೆ, ಸುಧಾರಾಣಿ ರವರ ಪಾಸ್ಪೋರ್ಟ್ ಕಿತ್ತುಕೊಂಡು ಅವರ ಪತಿ ಇವರಿಗೆ ಟಾರ್ಚರ್ ಕೊಡಲು ಆರಂಭಿಸುತ್ತಾನೆ. ಎಷ್ಟರ ಮಟ್ಟಿಗೆ ಎಂದರೆ ಸುಧಾರಾಣಿ ರವರನ್ನು ಮತ್ತೊಮ್ಮೆ ನೋಡುತ್ತೇವೆಯೋ ಇಲ್ಲವೋ ಎಂಬ ಅನುಮಾನ ಕುಟುಂಬಸ್ಥರಲ್ಲಿ ಮೂಡುವ ಮಟ್ಟಕ್ಕೆ ಪತಿರಾಯ ಇಳಿಯುತ್ತಾನೆ. ಹೀಗೆ ಕುಟುಂಬದವರು ದಿನೇದಿನೇ ತಮ್ಮ ಆಶಾಭಾವನೆಯನ್ನು ಕಳೆದುಕೊಳ್ಳುತ್ತಾ ಸಾಗುತ್ತಾರೆ

ನಾವು ಹೇಗೆ ಟಾ’ರ್ಚರ್ ಮಾಡಿದರು ಎಂಬುದನ್ನು ಹೇಳುವುದಿಲ್ಲ ಯಾಕೆಂದರೆ ನಿಜಕ್ಕೂ ಆ ಕಷ್ಟಗಳು ಯಾರಿಗೂ ಬರಬಾರದು. ಹೀಗೆ ಕುಟುಂಬದವರು ಸುಧಾರಾಣಿ ರವರನ್ನು ಮರೆತು ಬಿಡಬೇಕು ಎನ್ನುವ ಸಂದರ್ಭ ಎದುರಾಗುತ್ತದೆ, ಇಷ್ಟು ಸಾಲದು ಎಂಬಂತೆ ಅಮೆರಿಕಾ ದೇಶದಲ್ಲಿ ಊಟಕ್ಕೂ ಕೂಡ ಕಷ್ಟವಾಗುವ ಪರಿಸ್ಥಿತಿ ಎದುರಾಗುತ್ತದೆ, ಇಲ್ಲಿ ರಾಣಿಯಂತೆ ಬದುಕಿದ್ದ ಸುಧಾರಾಣಿ ರವರು ಅಮೆರಿಕದಲ್ಲಿ ಕೆಲಸ ಮಾಡಲು ಆರಂಭಿಸುತ್ತಾರೆ ಕಷ್ಟಪಟ್ಟು ಕೆಲಸ ಕೂಡ ಮಾಡುತ್ತಾರೆ.

ಹೀಗೆ ದಿನೇ ದಿನೇ ಸುಧಾರಾಣಿ ರವರು ನಿಜಕ್ಕೂ ಸವಾಲಿನ ಬೆಟ್ಟಗಳನ್ನು ಎದುರಿಸುತ್ತಿರುತ್ತಾರೆ. ಸುಮಾರು ನಾಲ್ಕು ವರ್ಷಗಳ ಕಾಲ ಇಷ್ಟೆಲ್ಲಾ ಕಷ್ಟಗಳನ್ನು ಅನುಸರಿಸಿದ ಸುಧಾರಾಣಿ ರವರು ಕೊನೆಗೆ ಡಾಕ್ಟರ್ ರಾಜಕುಮಾರ್ ಹಾಗೂ ಅಂಬರೀಶ್ರವರ ಸಹಾಯ ಪಡೆದುಕೊಂಡು ಅಮೇರಿಕಾದಲ್ಲಿರುವ ಕೆಲವರನ್ನು ಸಂಪರ್ಕಿಸಿ ಪಾಸ್ಪೋರ್ಟ್ ಪಡೆದುಕೊಳ್ಳುತ್ತಾರೆ. ಹೀಗೆ ಪಾಸ್ಪೋರ್ಟ್ ಸಿಕ್ಕಕೂಡಲೇ ಅಮೆರಿಕ ಇಂದ ಬೆಂಗಳೂರಿಗೆ ವಾಪಸ್ಸು ಬಂದು ಬಿಡುತ್ತಾರೆ

ಇದಾದ ಬಳಿಕ ಜೀವನದಲ್ಲಿ ಏನೂ ಇಲ್ಲ ಎಂಬಂತೆ ಕು’ಗ್ಗಿದ್ದ ಸುಧಾರಾಣಿ ರವರು ಒಂದು ವರ್ಷ ಯಾರ ಸಂಪರ್ಕಕ್ಕೂ ಕೂಡ ಬರುವುದಿಲ್ಲ, ಚಿತ್ರರಂಗ ಹಾಗೂ ಸ್ನೇಹಿತರಿಂದ ದೂರವುಳಿದಿದ್ದ ಸುಧಾರಾಣಿ ರವರ ಬಾಳಿಗೆ ಈಗಿನ ಪತಿ ಗೋವರ್ಧನ್ ರವರು ನಿಜಕ್ಕೂ ಹೊಸ ಬೆಳಕಾಗಿ ಬರುತ್ತಾರೆ. ಹೌದು ಸ್ನೇಹಿತರೇ 2000ದಲ್ಲಿ ಗೋವರ್ಧನ್ ರವರು ಸುಧಾರಾಣಿ ರವರನ್ನು ಮದುವೆಯಾಗುತ್ತಾರೆ, ತದನಂತರ ಈ ದಂಪತಿಗಳ ಕುಟುಂಬ ನಿಜಕ್ಕೂ ಸ್ವರ್ಗವೆ ಎಂಬಂತೆ ನಡೆಯುತ್ತದೆ.

ಈ ದಂಪತಿಗಳಿಗೆ ನಿಧಿ ಎಂಬ ಮುದ್ದಾದ ಮಗಳಿದ್ದು ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ ಹಾಗೂ ಇನ್ನು ಕೆಲವೇ ಕೆಲವು ದಿನಗಳಲ್ಲಿ ಸಿನಿಮಾರಂಗಕ್ಕೆ ಕೂಡ ಕಾಲಿಡುತ್ತಿದ್ದಾರೆ. ಈ ಎಲ್ಲಾ ವಿಷಯಗಳನ್ನು ಸುಧಾರಾಣಿ ರವರು ಕನ್ನಡದ ಖ್ಯಾತರಾಗಿರುವ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಹೇಳಿಕೊಂಡು ಭಾವುಕರಾಗಿದ್ದಾರೆ, ಹಾಗೂ ಕೆಲವೊಂದು ಆನ್ಲೈನ್ ವೆಬ್ ಸೈಟ್ ಗಳಿಂದ ಮತ್ತಷ್ಟು ಮಾಹಿತಿಗಳನ್ನು ಕಲೆ ಹಾಕಲಾಗಿದೆ.