ಮಾಡಿದ 2 ಚಿತ್ರಗಳು ಸೂಪರ್ ಹಿಟ್ ಆದರೂ ಕೂಡ, ನೆನಪಿರಲಿ ವರ್ಷ ಸಿನೆಮಾದಿಂದ ದೂರ ಉಳಿದಿದ್ದು ಯಾಕೆ ಗೊತ್ತಾ??

ಮಾಡಿದ 2 ಚಿತ್ರಗಳು ಸೂಪರ್ ಹಿಟ್ ಆದರೂ ಕೂಡ, ನೆನಪಿರಲಿ ವರ್ಷ ಸಿನೆಮಾದಿಂದ ದೂರ ಉಳಿದಿದ್ದು ಯಾಕೆ ಗೊತ್ತಾ??

ನಮಸ್ಕಾರ ಸ್ನೇಹಿತರೇ ಕಳೆದ ಕೆಲವು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಭಾರಿ ಸದ್ದು ಮಾಡಿದ ನೆನಪಿರಲಿ ಚಿತ್ರವನ್ನು ಬಹುಶಹ ನೀವೆಲ್ಲರೂ ಇನ್ನೂ ಮರೆತಿರಲು ಸಾಧ್ಯವಿಲ್ಲ. ಬಹುತೇಕ ಹೊಸ ಕಲಾವಿದರಿಂದ ನಿರ್ಮಿತವಾದ ಈ ನೆನಪಿರಲಿ ಚಿತ್ರ ಜನರ ಮನ ಗೆಲ್ಲುವುದರಲ್ಲಿ ಯಶಸ್ವಿಯಾಗಿತ್ತು. ಅದರಲ್ಲಿಯೂ ಈ ಚಿತ್ರದ ಹಾಡುಗಳು ಈಗಲೂ ಕೂಡ ಜನರ ಅಚ್ಚುಮೆಚ್ಚಿನ ಹಾಡುಗಳಲ್ಲಿ ಒಂದಾಗಿವೆ. ಹೀಗೆ ನೆನಪಿರಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆ ಮಾಡಿದ ಹೊಸ ಕಲಾವಿದರಲ್ಲಿ ವರ್ಷ ಕಾಮೇಶ್ ಕೂಡ ಒಬ್ಬರು.

ಚಿತ್ರದ ಎರಡನೇ ಭಾಗದಲ್ಲಿ ಸಿನಿಮಾಗೆ ಪ್ರವೇಶ ನೀಡಿದರೂ ಕೂಡ ನಟಿಸಿದ ಕೆಲವೇ ಕೆಲವು ನಿಮಿಷಗಳಲ್ಲಿ ತಮ್ಮ ಸೌಂದರ್ಯ ಹಾಗೂ ನಟನೆಯ ಮೂಲಕ ಜನರ ಮನ ಗೆದ್ದಿದ್ದರು. ಇದಾದ ಬಳಿಕ ಖ್ಯಾತ ನಟ ದರ್ಶನ್ ಅವರ ಜೊತೆ ಸೇರಿಕೊಂಡು ನವಗ್ರಹ ಚಿತ್ರದಲ್ಲಿ ಕೂಡ ಅವಕಾಶ ಪಡೆದು ಕೊಂಡಿದ್ದರು. ಇವರು ನಟನೆ ಮಾಡಿದ ಎರಡು ಚಿತ್ರಗಳು ಕೂಡ ಯಶಸ್ವಿಯಾಗಿತ್ತು. ಆದರೆ ತದ ನಂತರ ವರ್ಷ ರವರು ಎಲ್ಲಿಯೂ ಕಾಣಿಸಲೇ ಇಲ್ಲ. ಇದೀಗ ಬಿಗ್ ಬಾಸ್ ಖ್ಯಾತಿಯ ಶಾಲಿನಿ ರವರ ಯುಟ್ಯೂಬ್ ಚಾನೆಲ್ ನಲ್ಲಿ ಕಾಣಿಸಿಕೊಂಡಿರುವ ವರ್ಷ ರವರು ಯಾಕೆ ಚಿತ್ರರಂಗದಿಂದ ದೂರ ಉಳಿದಿದ್ದೇನೆ ಎಂದು ಹೇಳಿದ್ದಾರೆ.

ಹೌದು ಸ್ನೇಹಿತರೇ ಇದೀಗ ಮಾತನಾಡಿರುವ ವರ್ಷ ರವರು ನನಗೆ ಅನಾರೋಗ್ಯ ಸಮಸ್ಯೆ ಕಾಡಲಾರಂಭಿಸಿತು ನಾನು ಚಿಕಿತ್ಸೆ ಪಡೆಯುತ್ತಿದ್ದೇನೆ, ಜೀವನದಲ್ಲಿ ಏನಾದರೂ ಮಾಡಬೇಕು ಎಂಬ ಚಲ ಇನ್ನು ನನ್ನಲ್ಲಿದೆ ಅದೇ ಕಾರಣಕ್ಕಾಗಿ ಇನ್ನು ಕೆಲವೇ ಕೆಲವು ದಿನಗಳಲ್ಲೇ ಮತ್ತೊಮ್ಮೆ ಪ್ರೇಕ್ಷಕರನ್ನು ಮನರಂಜಿಸಲು ಸಿದ್ಧವಾಗಿ ಬರುತ್ತೇನೆ ಎಂದಿದ್ದಾರೆ. ಎರಡು ಚಿತ್ರಗಳು ಯಶಸ್ಸಿನ ಹಾದಿ ತುಳಿದರೂ ಕೂಡ ಆರೋಗ್ಯದ ದೃಷ್ಟಿಯಿಂದ ಕನ್ನಡ ಚಿತ್ರರಂಗದಿಂದ ದೂರ ಉಳಿದಿರುವುದು ನಿಜಕ್ಕೂ ದುರಾದೃಷ್ಟವೇ ಸರಿ. ಒಟ್ಟಿನಲ್ಲಿ ಅದೇನೇ ಆಗಲಿ ಇದೀಗ ಮತ್ತೊಮ್ಮೆ ಕಂಬ್ಯಾಕ್ ಮಾಡಲು ಸಿದ್ಧವಾಗಿರುವ ವರ್ಷ ರವರ ಆರೋಗ್ಯ ಸಂಪೂರ್ಣ ಸರಿ ಹೋಗಿ ಬೇಗ ಕನ್ನಡ ಚಿತ್ರರಂಗಕ್ಕೆ ವಾಪಸ್ ಬರಲಿ ಎಂದು ಹಾರೈಸುತ್ತೇವೆ.