ಕನ್ನಡತಿ ತಂಡಕ್ಕೆ ಅಭಿಮಾನಿಗಳಿಂದ ಹೊಸ ಬೇಡಿಕೆ ! ಏನು ಗೊತ್ತಾ?? ನಿಮ್ಮ ಬೇಡಿಕೆ ಕೂಡ ಇದೇನಾ??

ಕನ್ನಡತಿ ತಂಡಕ್ಕೆ ಅಭಿಮಾನಿಗಳಿಂದ ಹೊಸ ಬೇಡಿಕೆ ! ಏನು ಗೊತ್ತಾ?? ನಿಮ್ಮ ಬೇಡಿಕೆ ಕೂಡ ಇದೇನಾ??

ನಮಸ್ಕಾರ ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ಯಾವ ಧಾರವಾಹಿ ಹೆಚ್ಚು ಚರ್ಚೆಗೆ ಗ್ರಾಸವಾಗುತ್ತಿದೆ ಎಂಬುದನ್ನು ನೋಡುವುದಾದರೆ ಆ ಧಾರವಾಹಿ ಮತ್ತೆ ಯಾವುದು ಅಲ್ಲ ಅದುವೇ ಕನ್ನಡತಿ ಧಾರಾವಾಹಿ. ಬಹಳ ಉತ್ತಮವಾಗಿ ಕನ್ನಡತಿ ಧಾರಾವಾಹಿ ಮೂಡಿ ಬರುತ್ತಿರುವ ಕಾರಣ ಜನರು ಕನ್ನಡತಿ ಧಾರವಾಹಿಯ ಕುರಿತು ದಿನಪೂರ್ತಿ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆ ನಡೆಸುತ್ತಿರುತ್ತಾರೆ. ಅಂತಹ ಸಂದರ್ಭದಲ್ಲಿ ಹಾಗೆ ನಿರ್ಮಾಣ ಮಾಡಬೇಕು ಹೀಗೆ ನಿರ್ಮಾಣ ಮಾಡಬೇಕು, ಕಥೆ ಹೀಗೆ ಸಾಗಲಿ ಹೇಗೆ ಸಾಗಬಾರದು ಎಂಬ ಎಲ್ಲ ರೀತಿಯ ಅಭಿಪ್ರಾಯಗಳನ್ನು ಸದಾ ವ್ಯಕ್ತಪಡಿಸುತ್ತಿರುತ್ತಾರೆ.

ಎಲ್ಲ ಜನರ ಅಭಿಪ್ರಾಯಗಳನ್ನು ಸರಿದೂಗಿಸುವಂತೆ ಧಾರವಾಹಿ ನಿರ್ಮಾಣ ಮಾಡುವುದು ಕೊಂಚ ಕಷ್ಟವೆನಿಸಿದರೂ ಕೂಡ ಇತ್ತೀಚೆಗೆ ಕಳೆದ ಎರಡು ದಿನಗಳಿಂದ ಕನ್ನಡತಿ ಧಾರವಾಹಿಯ ಅಭಿಮಾನಿಗಳು ಕನ್ನಡತಿ ಧಾರಾವಾಹಿ ಒಂದು ಪಾತ್ರದ ಬಗ್ಗೆ ಹೆಚ್ಚು ಚರ್ಚೆ ಸೃಷ್ಟಿಸುತ್ತಿದ್ದಾರೆ, ಕಥೆ ಯಾವ ರೀತಿ ಸಾಗಬೇಕು ಎಂದು ಜನರೇ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಆ ಅಭಿಪ್ರಾಯವಾದರೂ ಏನು ಎಂಬುದನ್ನು ತಿಳಿಸುತ್ತೇವೆ ಕೇಳಿ ಹಾಗೂ ಜನರ ಈ ಅಭಿಪ್ರಾಯದ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.

ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡತಿ ಧಾರವಾಹಿಯಲ್ಲಿ ಪ್ರತಿಯೊಂದು ಪಾತ್ರಗಳು ಬಹಳ ಮಹತ್ವವೆನಿಸುವೆ. ಯಾವುದೇ ಪಾತ್ರಗಳಿಗೂ ಅನವಶ್ಯಕವಾಗಿ ಜೀವ ನೀಡಿಲ್ಲ, ಪ್ರತಿಯೊಂದು ಪಾತ್ರಗಳಿಗೂ ಮಹತ್ವ ನೀಡಿ ಧಾರವಾಹಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಅದರಲ್ಲಿಯೂ ಧಾರವಾಹಿಯಲ್ಲಿ ಚಿತ್ಕಾಲ ಬಿರದಾರ್ ರವರು ನಟಿಸಿರುವ ರತ್ನಮಾಲಾ ಪಾತ್ರ ಅಭಿಮಾನಿಗಳ ಮನಗೆದ್ದಿದೆ, ಹೀಗೆ ಎಲ್ಲವೂ ಚೆನ್ನಾಗಿರುವ ಸಂದರ್ಭದಲ್ಲಿ ಅಮ್ಮಮ (ರತ್ನಮಾಲಾ) ರವರಿಗೆ ಅನಾರೋಗ್ಯ ಕಾಡಲಾರಂಭಿಸಿದೆ, ಕೆಲವು ಚರ್ಚೆಗಳ ಪ್ರಕಾರ ಇನ್ನು ಕೆಲವೇ ಕೆಲವು ದಿನಗಳಲ್ಲಿ ಅಮ್ಮಮ್ಮ ಪಾತ್ರ ಮುಗಿದುಹೋಗುತ್ತದೆ ಎಂಬ ಮಾತುಗಳು ಕೇಳಿಬಂದಿವೆ. ಅದೇ ಕಾರಣಕ್ಕಾಗಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಲು ಆರಂಭಿಸಿದ್ದು, ಯಾವುದೇ ಕಾರಣಕ್ಕೂ ಅಮ್ಮಮ್ಮ ಪಾತ್ರವನ್ನು ಮುಗಿಸ ಬಾರದು ಕಥೆ ಹೇಗೆ ಮುಂದುವರಿಸುತ್ತಿರೋ ತಿಳಿದಿಲ್ಲ, ಆದರೆ ಅಮ್ಮಮ್ಮ ಪಾತ್ರ ಮಾತ್ರ ಇರಲಿ ಎಂದು ಅಭಿಮಾನಿಗಳು ಒತ್ತಾಯ ಮಾಡಿದ್ದಾರೆ. ಈ ಕುರಿತು ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಬಾಕ್ಸಲ್ಲಿ ತಿಳಿಸಿ.