ಒಂದೆಲಗ / ಬ್ರಾಹ್ಮಿ ಎಲೆಗಳ ಪ್ರಯೋಜನಗಳನ್ನು ತಿಳಿದರೇ ಖಂಡಿತ ಬಳಸಲು ಆರಂಭಿಸುತ್ತೀರಿ !

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಆಯುರ್ವೇದ ಪದ್ಧತಿಯಲ್ಲಿ ಅಸಂಖ್ಯಾತ ಸಮಸ್ಯೆಗಳಿಗೆ ಚಿಕಿತ್ಸೆ ನೀಡುವ ವಿಧಾನಗಳಿವೆ. ನಮ್ಮ ದೇಹದಲ್ಲಿ ಯಾವುದೇ ಮೂಲೆಯಲ್ಲಿ ಏನೇ ತೊಂದರೆಯಾದರೂ ಕೂಡ ಆಯುರ್ವೇದದಿಂದ ಪರಿಹಾರ ಸಿಗುತ್ತದೆ ಎಂದು ನಂಬಲಾಗಿದೆ. ಗಿಡಮೂಲಿಕೆಗಳ ಔಷಧಿಗಳ ಮೂಲಕ ಆಯುರ್ವೇದ ಪದ್ಧತಿಗೆ ನಡೆದುಕೊಂಡು ಬಂದಿರುವ ಕಾರಣ ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಕೂಡ ಇರುವುದಿಲ್ಲ. ಹೀಗಿರುವಾಗ ನಾವು ಇಂದು ಯಾರಿಗೂ ತಿಳಿಯದಂತಹ ಎಲೆಮರೆ ಕಾಯಿಯಂತಿರುವ ಒಂದೆಲಗ ಅಥವಾ ಬ್ರಾಹ್ಮಿ ಸೊಪ್ಪಿನ ಮಹತ್ವಗಳ ಕುರಿತು ತಿಳಿಸಿಕೊಡುತ್ತೇವೆ. ಈ ಬ್ರಾಹ್ಮಿ ಸೊಪ್ಪು ಎಲ್ಲೆಂದರಲ್ಲಿ ಬೆಳೆದಿರುತ್ತದೆ, ಇದನ್ನು ಬಹುತೇಕ ಜನರು ಸೇವಿಸಬಹುದು ಎಂಬುದನ್ನು ಕೂಡ ತಿಳಿದುಕೊಂಡಿಲ್ಲ. ಆದರೆ ಈ ಒಂದೆಲೆಗ ಎಲೆಗಳ ಪ್ರಯೋಜನಗಳನ್ನು ಕೇಳಿದರೆ ಕಂಡಿತಾ ನೀವು ಕೂಡ ಬಳಸಲು ಆರಂಭಿಸುತ್ತೀರಿ.

ಸ್ನೇಹಿತರೇ ಪ್ರಮುಖವಾಗಿ ಆಯುರ್ವೇದದ ಪ್ರಕಾರ ಒಂದೆಲೆಗ ಎಲೆಗಳನ್ನು ನಿಮ್ಮ ಮೆದುಳಿನ ಆರೋಗ್ಯವನ್ನು ಕಾಪಾಡಿಕೊಳ್ಳಲು ಹಾಗೂ ನಿಮ್ಮ ನೆನಪಿನ ಶಕ್ತಿಯನ್ನು ಹೆಚ್ಚಿಸಲು ಬಹಳ ಸೂಕ್ತ ಎಂದು ನಂಬಲಾಗಿದೆ. ಇದರಿಂದ ಕೇವಲ ನೆನಪಿನಶಕ್ತಿ ಅಲ್ಲದೇ, ಇನ್ನೂ ಹತ್ತು ಹಲವಾರು ಲಾಭಗಳಿವೆ. ಈ ಕುರಿತಂತೆ ನಾವು ಕೆಲವೊಂದು ಅದ್ಭುತ ಪ್ರಯೋಜನಗಳನ್ನು ಇಂದು ನಿಮಗೆ ತಿಳಿಸಿಕೊಡುತ್ತೇವೆ.

ಮೊದಲನೆಯದಾಗಿ ಸ್ನೇಹಿತರೆ ಒಂಟೆ ಲೆಕ್ಕ ಎಲೆಗಳನ್ನು ನೀವು ಸೇವನೆ ಮಾಡುವುದರಿಂದ ಪ್ರಮುಖವಾಗಿ ನಿಮಗೆ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ, ಸಾಮಾನ್ಯವಾಗಿ ಬ್ಯಾಕ್ಟೀರಿಯಾ ಅಥವಾ ಪರಾವಲಂಬಿ ರೋಗಗಳಿಗೆ ರಾಮಬಾಣವಾಗಿದೆ ಒಂದೆಲೆಗ ಎಲೆಗಳು. ಇನ್ನು ಅಷ್ಟೇ ಅಲ್ಲದೆ ಒಂದೆಲಗ ಎಲೆಗಳನ್ನು ನೀವು ಬಳಸುವುದರಿಂದ ನಿಮ್ಮ ಮನಸ್ಸಿನಲ್ಲಿರುವ ಒತ್ತಡ ಹಾಗೂ ಆತಂಕ ಕಡಿಮೆಯಾಗಿ ನಿಮಗೆ ಮಾನಸಿಕ ಶಕ್ತಿ ದೊರೆಯುತ್ತದೆ. ಅಂದರೆ ಒತ್ತಡದ ಹಾರ್ಮೋನ್ ಕಾರ್ಟಿಸೋಲ್ ಮಟ್ಟವನ್ನು ನಿಮ್ಮ ದೇಹದಲ್ಲಿ ಇದು ಕಡಿಮೆ ಮಾಡುತ್ತದೆ. ಇನ್ನು ನೀವು ಆರೋಗ್ಯಕರ ಜೀವನವನ್ನು ನಡೆಸಲು ನಿಮ್ಮ ದೇಹಕ್ಕೆ ಅಗತ್ಯವಾಗಿರುವ ಆಂಟಿಆಕ್ಸಿಡೆಂಟ್ ಗಳನ್ನು ಈ ಬ್ರಾಹ್ಮಿ ಎಲೆಗಳು ನೀಡುವ ಕಾರಣ ಅಂತ ನಿಮ್ಮ ದೇಹದಲ್ಲಿ ಕ್ಯಾನ್ಸರ್ ಕೋಶಗಳು ಉಂಟಾದರೇ ಕೂಡಲೇ ಅವುಗಳನ್ನು ತೆಗೆದು ಹಾಕುವ ಕೆಲಸ ಮಾಡುತ್ತದೆ.

ಸಂಧಿವಾತ ಮತ್ತು ಉರಿಯೂತದ ಪರಿಸ್ಥಿತಿಗಳಿಂದ ಬ್ರಾಹ್ಮಿ ಎಲೆಗಳು ನಿಮಗೆ ಉತ್ತಮ ಪರಿಹಾರವನ್ನು ನೀಡುತ್ತದೆ. ಅಷ್ಟೇ ಅಲ್ಲದೆ ನಿಮ್ಮ ದೇಹದಲ್ಲಿ ಅಸಿಡಿಟಿ ಹುಣ್ಣುಗಳಿಂದ ನಿಮ್ಮನ್ನು ರಕ್ಷಿಸುತ್ತದೆ. ಇನ್ನು ಅಷ್ಟೇ ಅಲ್ಲದೇ ತಲೆಗೆ ಬ್ರಾಹ್ಮಿ ಎಲೆಗಳಿಂದ ತಯಾರಿಸಿರುವ ಎಣ್ಣೆಯನ್ನು ಬಳಸಿ ಮಸಾಜ್ ಮಾಡಿಕೊಂಡರೇ ನಿಮ್ಮ ಕೂದಲುಗಳು ಉದುರುವುದು ನಿಂತು ಹೋಗುತ್ತದೆ. ಉತ್ಕರ್ಷಣ ನಿರೋಧಕ ಶಕ್ತಿ ನೀಡುವುದರಿಂದ ನಿಮ್ಮ ಕೂದಲುಗಳು ಬೆಳೆಯಲು ಆರಂಭಿಸುತ್ತವೆ. ಅಷ್ಟೇ ಅಲ್ಲದೆ ಈ ರೀತಿ ಎಣ್ಣೆಯನ್ನು ಬಳಸಿ ಮಸಾಜ್ ಮಾಡುವುದರಿಂದ ನಿಮ್ಮ ತಲೆಯಲ್ಲಿ ರ’ಕ್ತಸಂಚಾರ ಸುಗಮವಾಗಲಿದ್ದು, ನಿಮ್ಮ ಮೆದುಳಿಗೆ ಅಗತ್ಯವಾಗಿರುವ ಆಮ್ಲಜನಕ ಸರಬರಾಜು ಸುಗಮವಾಗುತ್ತದೆ. ಇಷ್ಟೇ ಅಲ್ಲದೇ ನೀವು ಕ್ರಮೇಣ ನಿಮ್ಮ ಪಾಕಪದ್ಧತಿಯಲ್ಲಿ ಎಲೆಗಳನ್ನು ಬಳಸುವುದರಿಂದ ನಿಮ್ಮ ಶ್ವಾಸಕೋಶ, ಯಕೃತ್, ಮೂತ್ರಪಿಂಡಗಳ ಕ್ಷಮತೆ ಹೆಚ್ಚಾಗುತ್ತದೆ. ಇದರಿಂದ ನಿಮಗೆ ಯಾವುದೇ ಉಸಿರಾಟದ ತೊಂದರೆಗಳಾಗಲಿ, ಮಲಬದ್ಧತೆ ಯಾಗಲಿ ಅಥವಾ ಸುಸ್ತು ಕಾಣಿಸಿಕೊಳ್ಳುವುದಿಲ್ಲ. ಇಷ್ಟೆಲ್ಲ ಲಾಭ ನೀಡುವ ಬ್ರಾಹ್ಮಿ ಎಲೆಗಳು ನೈಸರ್ಗಿಕವಾಗಿ ನೀರು ಹರಿಯುವ ಸ್ಥಳಗಳಲ್ಲಿ ಬೆಳೆಯುತ್ತವೆ ಹಾಗೂ ಇತ್ತೀಚಿನ ದಿನಗಳಲ್ಲಿ ನೀವು ‌ಕೆಲವೊಂದು ಮಾರುಕಟ್ಟೆಗಳಲ್ಲಿ ಇವುಗಳನ್ನು ಕಾಣಬಹುದಾಗಿದೆ.

Best newsbest news in kannadabramhi leaves in kannadabramhi leaves use in kannadahealthhealth tipshealth tips in kannadaKannadakannada best newskannada health tipsKannada NewsKarunaada Vaaniondelaga use in kannadatop news channeltop news in kannadatop news kannada