ಮಹೇಶ್ ಭಟ್ ಸಿನಿಮಾ ಬಿಡುಗಡೆಯಾದ ನಿಮಿಷಗಳಲ್ಲಿ ಗೆದ್ದು ಬೀಗಿದ ಸುಶಾಂತ್ ಫ್ಯಾನ್ಸ್ ! ಬಾಲಿವುಡ್ ನಲ್ಲಿ ಬಿರುಗಾಳಿ ! ನಡೆದದ್ದೇನು ಗೊತ್ತಾ?

ಮಹೇಶ್ ಭಟ್ ಸಿನಿಮಾ ಬಿಡುಗಡೆಯಾದ ನಿಮಿಷಗಳಲ್ಲಿ ಗೆದ್ದು ಬೀಗಿದ ಸುಶಾಂತ್ ಫ್ಯಾನ್ಸ್ ! ಬಾಲಿವುಡ್ ನಲ್ಲಿ ಬಿರುಗಾಳಿ ! ನಡೆದದ್ದೇನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ಅಭಿಮಾನಿಗಳು ಇದೀಗ ಬಾಲಿವುಡ್ ನಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದ ಕುರಿತು ಸ್ವಜನ ಪಕ್ಷಪಾತದ ವಿಚಾರದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬ ಸೆಲೆಬ್ರಿಟಿಗಳಿಗೂ ಬುದ್ಧಿ ಕಲಿಸಲೇ ಬಿಡುವುದಿಲ್ಲ ಎಂದು ಪಣ ತೊಟ್ಟಿದ್ದಾರೆ. ಸುಶಾಂತ್ ಸಿಂಗ್ ರಜಪೂತ್ ರವರ ಘಟನೆ ನಡೆದ ದಿನದಿಂದ ಪ್ರತಿಯೊಬ್ಬರಿಗೂ ಬುದ್ಧಿ ಕಲಿಸುತ್ತೇವೆ ಎಂದು ಹಲವಾರು ಬಾರಿ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನಗಳ ಮೂಲಕ ಈಗಾಗಲೇ ದೊಡ್ಡ ದೊಡ್ಡ ಸೆಲೆಬ್ರಿಟಿಗಳ ವಿರುದ್ಧ ಗೆದ್ದಿರುವ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳು ಇದೀಗ ಮತ್ತೊಮ್ಮೆ ಗೆಲುವು ಕಂಡಿದ್ದಾರೆ. ಅಷ್ಟೇ ಅಲ್ಲದೇ ಇಷ್ಟಕ್ಕೆ ನಮ್ಮ ಕೆಲಸ ಮುಗಿದಿಲ್ಲ ಇನ್ನು ಬಾಲಿವುಡ್ ನಲ್ಲಿ ಹಲವಾರು ಸೆಲೆಬ್ರಿಟಿಗಳಿಗೆ ಇದೇ ಗತಿ ಬರುವಂತೆ ಮಾಡುತ್ತೇವೆ ಎಂದು ಹೇಳುವ ಮೂಲಕ ಬಾಲಿವುಡ್ ಚಿತ್ರರಂಗದಲ್ಲಿ ಬಿರುಗಾಳಿ ಎಬ್ಬಿಸಿದ್ದಾರೆ.

ಹೌದು ಸ್ನೇಹಿತರೇ, ಕಳೆದ ಕೆಲವು ದಿನಗಳ ಹಿಂದೆ ಮಹೇಶ್ ಭಟ್ ರವರು ಬರೋಬ್ಬರಿ 21 ವರ್ಷಗಳ ನಂತರ ಸಡಕ್-2 ಚಿತ್ರದ ಮೂಲಕ ನಿರ್ದೇಶನಕ್ಕೆ ಮರಳುತ್ತಿದ್ದ ಕಾರಣ ಹಾಗೂ ಆಲಿಯಾ ಭಟ್ ನಟನೆ, ಸಂಜಯ್ ದತ್ ಅಭಿಮಾನಿಗಳಿಂದ ಸಡಕ್-2 ಚಿತ್ರವೂ ಬಾಲಿವುಡ್ ಚಿತ್ರರಂಗದಲ್ಲಿ ಉತ್ತಮ ಹೆಸರು ಗಳಿಸಲಿದೆ ಎಂಬ ಮಾತುಗಳು ಕೇಳಿಬಂದಿದ್ದವು. ಆದರೆ ಎಲ್ಲಾರ ಲೆಕ್ಕಾಚಾರಗಳು ಇದೀಗ ಉಲ್ಟಾ ಆಗಿವೆ. ಅಷ್ಟೇ ಅಲ್ಲದೇ ಈ ಅಭಿಯಾನಗಳು ನಮ್ಮನ್ನು ಏನು ಮಾಡಲು ಸಾಧ್ಯವಿಲ್ಲ ಎಂದು ಊಹಿಸಿದ್ದ ಖ್ಯಾತ ಸೆಲೆಬ್ರೆಟಿಗಳಿಗೆ ಇದೀಗ ಒಮ್ಮೆಲೇ ಶಾಕ್ ಎದುರಾಗಿದೆ. ಹೌದು ಸ್ನೇಹಿತರೇ, ಸಡಕ್-2 ಟ್ರೈಲರ್ ಬಿಡುಗಡೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ಕೋಟ್ಯಾಂತರ ಜನ ಸಡಕ್-2 ಚಿತ್ರಕ್ಕೆ ಡಿಸ್ ಲೈಕ್ ಬಟನ್ ಒತ್ತುವ ಮೂಲಕ ಚಿತ್ರ ಬಿಡುಗಡೆಯಾದರೆ ಮುಂದೇನಾಗಬಹುದು ಎಂದು ಸ್ಪಷ್ಟ ಸಂದೇಶವನ್ನು ಸಾರಿದರು. ಆದರೆ ಅದ್ಯಾವುದಕ್ಕೂ ತಲೆಕೆ’ಡಿಸಿಕೊಳ್ಳದ ಮಹೇಶ್ ಭಟ್ ರವರು ಇದೀಗ ಡಿಸ್ ಡಿಸ್ನಿ ಪ್ಲಸ್ ಹಾಟ್-ಸ್ಟಾರ್ ನಲ್ಲಿ ಚಿತ್ರವನ್ನು ಬಿಡುಗಡೆ ಮಾಡಿದ್ದಾರೆ.

ಆದರೆ ಬಿಡುಗಡೆಯಾದ ಕೆಲವೇ ಕೆಲವು ಗಂಟೆಗಳಲ್ಲಿ ಸುಶಾಂತ್ ಸಿಂಗ್ ರಜಪೂತ್ ರವರ
ಅಭಿಮಾನಿಗಳು ಹೇಳಿದಂತೆ ಮಾಡಿ ತೋರಿಸಿ ಗೆದ್ದು ಬೀಗಿದ್ದಾರೆ. ವಿಶ್ವದ ಅತಿದೊಡ್ಡ ಸಿನಿಮಾ ವೆಬ್ಸೈಟ್ ಎಂದು ಖ್ಯಾತಿ ಪಡೆದು ಕೊಂಡಿರುವ IMDB ವೆಬ್ಸೈಟ್ನಲ್ಲಿ ಹತ್ತಕ್ಕೆ ಕೇವಲ 1.1 ಪಡೆದುಕೊಳ್ಳುವಲ್ಲಿ ಮಾತ್ರ ಸಡಕ-2 ಚಿತ್ರವು ಯಶಸ್ವಿಯಾಗಿದೆ. ಈ ಹಿಂದೆ ಹಲವಾರು ಯಶಸ್ಸಿನ ಚಿತ್ರಗಳನ್ನು ನೀಡಿರುವ ಆಲಿಯಾ ಭಟ್ ಹಾಗೂ ಸಂಜಯ್ ದತ್ ರವರ ಜೊತೆ ಪೂಜಾ ಭಟ್ ಹಾಗೂ ಆದಿತ್ಯ ರಾಯ್ ಕಪೂರ್ ಅವರು ಮುಖ್ಯ ಪಾತ್ರದಲ್ಲಿ ನಟಿಸಿ, ಇಪ್ಪತ್ತೊಂದು ವರ್ಷಗಳ ನಂತರ ಮಹೇಶ್ ಭಟ್ ರವರು ಚಿತ್ರರಂಗಕ್ಕೆ ನಿರ್ದೇಶಕನಾಗಿ ವಾಪಸಾಗಿದ್ದರೂ ಕೂಡ ಅಭಿಮಾನಿಗಳು ಯಾವುದಕ್ಕೂ ಕ್ಯಾರೇ ಎನ್ನದೆ ಬಾಲಿವುಡ್ ಸ್ವಜನ ಪಕ್ಷಪಾತದಲ್ಲಿ ಭಾಗಿಯಾಗಿರುವ ಪ್ರತಿಯೊಬ್ಬರಿಗೂ ಬುದ್ಧಿ ಕಲಿಸುವ ನಿಟ್ಟಿನಲ್ಲಿ ಸುಶಾಂತ್ ಸಿಂಗ್ ಅಭಿಮಾನಿಗಳು ಈ ರೀತಿ ಮಾಡಿದ್ದಾರೆ. ಒಟ್ಟಿನಲ್ಲಿ ಸುಶಾಂತ್ ಸಿಂಗ್ ರಜಪೂತ್ ರವರ ಅಭಿಮಾನಿಗಳ ಅಭಿಯಾನಗಳು ಯಾವುದೇ ಕಾರಣಕ್ಕೂ ತಣ್ಣಗಾಗುವ ಸೂಚನೆಗಳು ಕಾಣಿಸುತ್ತಿಲ್ಲವಾದ ಕಾರಣ ಇದೀಗ ಇನ್ನಷ್ಟು ಸೆಲೆಬ್ರಿಟಿಗಳಿಗೆ ಎದೆಯಲ್ಲಿ ಢವ ಢವ ಸೃಷ್ಟಿಯಾಗಿರುವುದು ಸುಳ್ಳಲ್ಲ. ಈ ಪ್ರತಿಕ್ರಿಯೆಯಿಂದ ಬಾಲಿವುಡ್ ಅಕ್ಷರಸಹ ನಡುಗಿದೆ ಎಂದರೆ ತಪ್ಪಾಗಲಾರದು.