ನಮಸ್ಕಾರ ಸ್ನೇಹಿತರೇ, ಭಾರತ ಹಾಗೂ ಚೀನಾ ಗಡಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಕುರಿತು ನಿಮಗೆ ಹೆಚ್ಚಾಗಿ ಹೇಳುವ ಅವಶ್ಯಕತೆ ಇಲ್ಲ, ನಾವು ಶಾಂತಿ ಬಯಸಿದ್ದೇವೆ, ಹಿಂದೆ ಸರಿಯುತ್ತಿದ್ದೇವೆ ಎನ್ನುವ ಚೀನಾ ದೇಶ, ಹೇಳಿಕೆ ನೀಡಿದ ಕೆಲವು ಗಂಟೆಗಳ ನಂತರ ಮತ್ತಷ್ಟು ಸೇನೆಯನ್ನು ರವಾನೆ ಮಾಡಿ ತನ್ನ ಬುದ್ದಿಯನ್ನು ಈ ಹಿಂದೆ ಹಲವಾರು ಬಾರಿ ತೋರಿಸಿಬಿಟ್ಟಿದೆ.
ಆದರೆ ಇಂದು ನಡೆದ ಮಹತ್ವದ ವಿದ್ಯಮಾನದಲ್ಲಿ ಚೀನಾ ದೇಶ ಕೊನೆಗೂ ಹಿಂದೆ ಸರಿದಿದೆ. ಇಷ್ಟು ದಿವಸ ಚೀನಾ ಮಾತುಗಳು ಕೇವಲ ಹೇಳಿಕೆಗಷ್ಟೇ ಸೀಮಿತವಾಗಿದ್ದವು. ಪ್ರತಿ ಬಾರಿಯ ಮಾತುಕತೆಯ ನಂತರ ಹಿಂದೆ ಸರಿಯಲು ಒಪ್ಪಿಕೊಂಡಿದ್ದೇವೆ ಎಂದು ಹೇಳುತ್ತಿತ್ತು. ಆದರೆ ಮತ್ತದೇ ರಾಗ ಎಂಬಂತೆ ಮತ್ತಷ್ಟು ಸೇನಾ ಜಮಾವಣೆಯನ್ನು ಮಾಡಿ ಯುದ್ಧ ವಿಮಾನಗಳನ್ನು ಹಾರಿಸುತ್ತಿತ್ತು. ಆದರೆ ಕೊನೆಗೂ ಇಂದು ಸರಿ ಸುಮಾರು ಎರಡು ಕಿಲೋಮೀಟರ್ ಗಳಷ್ಟು ಹಿಂದೆ ಸರಿದಿದೆ. ಗಲ್ವನ್ ಪ್ರದೇಶದಿಂದ ಎರಡು ಕಿಲೋಮೀಟರ್ ಹಿಂದೆ ಸರಿದಿದ್ದರು ಕೂಡ ಭಾರತೀಯ ಸೇನೆ ಹೈ ಅಲರ್ಟ್ ನಲ್ಲಿ ಇರಲಿದೆ ಎಂಬುದು ತಿಳಿದು ಬಂದಿದೆ.
ಯಾಕೆಂದರೆ ಚೀನಾ ದೇಶದ ಮಾತುಗಳನ್ನು ನಂಬಲು ಸಾಧ್ಯವಿಲ್ಲ ಎಂಬುದನ್ನು ಭಾರತೀಯ ಸೇನೆ ಚೆನ್ನಾಗಿ ಅರ್ಥ ಮಾಡಿಕೊಂಡಿದೆ. ಇನ್ನು ಇದೇ ಸಮಯದಲ್ಲಿ ಚೀನಾ ಸೇನೆ ಹಿಂದೆ ಸರಿದರೂ ಕೂಡ ಶಸ್ತ್ರಸಜ್ಜಿತ ವಾಹನಗಳು ಇನ್ನು ಗಡಿಯಲ್ಲಿ ಬೀಡು ಬಿಟ್ಟಿವೆ. ಇದನ್ನು ಕಂಡ ಭಾರತೀಯ ಸೇನೆಯು ಮತ್ತಷ್ಟು ಅಲರ್ಟ್ ಆಗಿ ಚೀನಾ ದೇಶದ ಪ್ರತಿಯೊಂದು ನಡೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ.