ಸಲ್ಮಾನ್ ಗೆ ಬಿಗ್ ಶಾಕ್, ಬಯಲಾದವು ಶಾಕಿಂಗ್ ಸಂಗತಿಗಳು. ರೊಚ್ಚಿಗೆದ್ದ ಸುಶಾಂತ್ ಫ್ಯಾನ್ಸ್. ಮಾಡಲು ಹೊರಟಿರುವುದೇನು ಗೊತ್ತಾ??

ಸಲ್ಮಾನ್ ಗೆ ಬಿಗ್ ಶಾಕ್, ಬಯಲಾದವು ಶಾಕಿಂಗ್ ಸಂಗತಿಗಳು. ರೊಚ್ಚಿಗೆದ್ದ ಸುಶಾಂತ್ ಫ್ಯಾನ್ಸ್. ಮಾಡಲು ಹೊರಟಿರುವುದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇಂದಿನ ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನೆಟ್ಟಿಗರು ಯಾರನ್ನು ಬೇಕಾದರೂ ರಾತ್ರೋ ರಾತ್ರಿ ಫೇಮಸ್ ಮಾಡಿ ಬಿಡುತ್ತಾರೆ. ಅಷ್ಟೇ ಅಲ್ಲಾ, ಹಲವಾರು ವರ್ಷಗಳಿಂದ ಕಟ್ಟಿದ ಕೋಟೆಯನ್ನು ಕೂಡ ರಾತ್ರೋ ರಾತ್ರಿ ಕುಟ್ಟಿ ಪುಡಿ ಮಾಡುತ್ತಾರೆ.

ಇದಕ್ಕೆ ಸ್ಪಷ್ಟ ಉದಾಹರಣೆ ಎಂದರೇ, ದೀಪಿಕಾ ಪಡುಕೋಣೆ ರವರು ಹತ್ತಾರು ವರ್ಷಗಳಿಂದ ಬಾಲಿವುಡ್ ನ ಟಾಪ್ ನಾಯಕಿಯಾಗಿದ್ದರು. ಇವರ ಸಿನಿಮಾಗಳು ಗಲ್ಲಾ ಪೆಟ್ಟಿಗೆಯಲ್ಲಿ ಬಾರಿ ಸದ್ದು ಮಾಡುತ್ತಿದ್ದವು. ಆದರೆ ಒಮ್ಮೆ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾದ ನಂತರ ಬಿಡುಗಡೆಯಾದ ಚಪಾಕ್ ಸಿನಿಮಾ ಕಥೆ ಏನಾಯಿತು ಎಂದು ನಿಮಗೆಲ್ಲರಿಗೂ ತಿಳಿದೇ ಇದೆ. ಅಷ್ಟೇ ಯಾಕೆ, ಕರಣ್ ಜೋಹರ್ ರವರು ಟಾಪ್ ನಿರ್ದೇಶಕನಾಗಿದ್ದರು.

ಬಾಲಿವುಡ್ ನ ಸ್ಟಾರ್ ಮಕ್ಕಳ ಜೊತೆ ಹಲವಾರು ಸಿನಿಮಾ ನಿರ್ದೇಶಿಸಿ ಸದ್ದು ಮಾಡಿದ್ದರು. ಇನ್ನು ಕಾಫಿ ವಿಥ್ ಕರಣ್ ಶೋ ಕೂಡ ಭರ್ಜರಿಯಾಗಿಯೇ TRP ಪಡೆಯುತಿತ್ತು. ಇಷ್ಟೆಲ್ಲಾ ಆದರೂ ಸುಶಾಂತ್ ಘಟನೆಯಿಂದ ಇದೀಗ ಬಾರಿ ಹಿನ್ನಡೆ ಅನುಭವಿಸುತ್ತಿದ್ದಾರೆ. ಕಾಫಿ ವಿಥ್ ಕರಣ್ ಶೋ ನಿಂತು ಹೋಗುವ ಹಂತಕ್ಕೆ ಬಂದು ತಲುಪಿದೆ. ಇದು ಇಂದಿನ ಸಾಮಾಜಿಕ ಜಾಲತಾಣದ ನೆಟ್ಟಿಗರ ಶಕ್ತಿ. ಇದೀಗ ಇದೀಗ ಇದೇ ನೆಟ್ಟಿಗರು ಕರಣ್ ಜೋಹರ್ ಆದ ಮೇಲೆ ಸಲ್ಮಾನ್ ಖಾನ್ ರವರ ಮೇಲೆ ಕಣ್ಣಿಟ್ಟಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಬಾಲಿವುಡ್ ಅಂಗಳದಲ್ಲಿ ಸ್ವಜನಪಕ್ಷಪಾತದ ಸುದ್ದಿಗಳು ಹರಿದಾಡುತ್ತಿವೆ. ಅದರಲ್ಲಿ ಪ್ರಮುಖವಾಗಿ ಕರಣ್ ಜೋಹರ್ ಹಾಗೂ ಸಲ್ಮಾನ್ ಖಾನ್ ರವರ ಹೆಸರುಗಳು ಕೇಳಿಬಂದಿದ್ದವು. ಸಲ್ಮಾನ್ ಖಾನ್ ರವರು ಸ್ವಜನ ಪಕ್ಷಪಾತವನ್ನು ಮಾಡುತ್ತಿದ್ದಾರೆ ಎಂಬ ಮಾತುಗಳು ಹಲವಾರು ವರ್ಷಗಳಿಂದ ಕೇಳಿ ಬಂದಿತ್ತಾದರೂ, ಯಾರು ಅವುಗಳನ್ನು ಗಣನೆಗೆ ತೆಗೆದುಕೊಂಡಿರಲಿಲ್ಲ. ಆದರೆ ಇದೀಗ ಸುಶಾಂತ್ ಸಿಂಗ್ ಅಭಿಮಾನಿಗಳು ಗಣನೆಗೆ ತೆಗೆದುಕೊಳ್ಳುವಂತೆ ಮಾಡುತ್ತಿದ್ದಾರೆ. ಸಲ್ಮಾನ್ ಖಾನ್ ರವರು, ತಮ್ಮದೇ ಆದ ಗುಂಪನ್ನು ಹೊಂದಿದ್ದಾರೆ. ಅವುಗಳನ್ನು ಮಾತ್ರ ಅವರು ರಕ್ಷಣೆ ಮಾಡುತ್ತಾ ಇತರರನ್ನು ಬೆಳೆಯಲು ಬಿಡುವುದಿಲ್ಲ ಎಂದು ಮಾತುಗಳ ಬಾಣಗಳನ್ನು ಸುರಿಸಿದ್ದಾರೆ.

ಇದಕೆಲ್ಲ ಕಾರಣವೇನೆಂದರೆ, ಒಮ್ಮೆ ಪಾರ್ಟಿಯಲ್ಲಿ ಸುಶಾಂತ್ ಸಿಂಗ್ ಹಾಗೂ ಸಲ್ಮಾನ್ ಖಾನ್ ತಂಡದವರ ವಿರುದ್ಧ ನಡೆದ ವಾಗ್ವಾದ. ಇದರ ನಂತರ ಸಲ್ಮಾನ್ ಖಾನ್ ರವರು, ಟೈಗರ್ ಜಿಂದ ಹೈ ಸಿನಿಮಾದ ಕಲಾವಿದರನ್ನು ಸುಶಾಂತ್ ರವರಿಂದ ದೂರ ಇರಲು ಸಲ್ಮಾನ್ ಖಾನ್ ಆದೇಶ ಮಾಡಿದ್ದರಂತೆ. ಅಷ್ಟೇ ಅಲ್ಲದೇ ಸುಶಾಂತ್ ರವರಿಗೆ ಸಿಗಬೇಕಾಗಿದ್ದ ಹಲವಾರು ಆಫರ್ ಗಳನ್ನೂ ಸಲ್ಮಾನ್ ಖಾನ್ ತಪ್ಪಿಸಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ ಎನ್ನಲಾಗುತ್ತಿದೆ. ವಿವೇಕ್ ಒಬೆರಾಯ್ ರವರ ಜೀವನವನ್ನು ಕೂಡ ಇದೇ ರೀತಿ ಅಂತ್ಯಗೊಳಿದ್ದರು ಎಂಬ ಮಾತುಗಳು ಕೇಳಿಬಂದಿವೆ.

ಇದೇ ರೀತಿ ಹಲವಾರು ಕಲಾವಿದರ ಸಿನಿಮಾ ಜೀವನದಲ್ಲಿ ಸುಖಾ ಸುಮ್ಮನೆ ಎಂಟ್ರಿ ಆಗಿ, ಯಾವುದೇ ಆಫರ್ ಗಳು ಹೋಗದಂತೆ ತಡೆದಿದ್ದಾರೆ ಎಂದು ನೆಟ್ಟಿಗರು ಇದೀಗ ಕೋಪ ಗೊಂಡಿದ್ದಾರೆ. ಅದೇ ಕಾರಣಕ್ಕೆ ಸಲ್ಮಾನ್ ಖಾನ್ ರವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಮುಂಬರುವ ಚಿತ್ರಗಳಿಗಾಗಿ ಕಾಯುತ್ತಿರುವುದ್ದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ದಾರೆ. ಒಟ್ಟಿನಲ್ಲಿ ಈ ನೆಟ್ಟಿಗರ ಅಭಿಯಾನ ಇತರರ ಚಿತ್ರಗಳಿಗೆ ಶಾಕ್ ನೀಡಿದಂತೆ ಸಲ್ಮಾನ್ ಖಾನ್ ರವರಿಗೂ ಶಾಕ್ ನೀಡುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.