ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್ ಆಯ್ಕೆಮಾಡಿದ ಹರ್ಭಜನ್ ! ಆಯ್ಕೆಯಾದ ಕನ್ನಡಿಗ ಯಾರು ಗೊತ್ತಾ?

ಸಾರ್ವಕಾಲಿಕ ಶ್ರೇಷ್ಠ ಮ್ಯಾಚ್ ವಿನ್ನರ್ ಆಯ್ಕೆಮಾಡಿದ ಹರ್ಭಜನ್ ! ಆಯ್ಕೆಯಾದ ಕನ್ನಡಿಗ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತ ಕಂಡ ದಿಗ್ಗಜ ಸ್ಪಿನರ್ ಗಳಲ್ಲಿ ಒಬ್ಬರಾಗಿರುವ ಹರ್ಭಜನ್ ಸಿಂಗ್ ರವರು ಇದೀಗ ಭಾರತ ಕ್ರಿಕೆಟ್ ತಂಡದ ಕುರಿತು ತಮ್ಮದೇ ಆದ ಅಭಿಪ್ರಾಯಗಳನ್ನು ವ್ಯಕ್ತ ಪಡಿಸಿದ್ದಾರೆ. ತಮ್ಮದೇ ಆದ ಲೆಕ್ಕಾಚಾರಗಳ ಮೂಲಕ ಕೆಲವೊಂದು ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ.

ಹೌದು ಸ್ನೇಹಿತರೇ, ಇದೀಗ ಮಾತನಾಡಿರುವ ಹರ್ಭಜನ್ ಸಿಂಗ್ ರವರು, ಭಾರತ ಕಂಡ ಅತ್ಯಂತ ಶ್ರೇಷ್ಠ ಪಂದ್ಯ ಗೆಲ್ಲಿಸಬಲ್ಲ/ಪಂದ್ಯ ವಿಜೇತ ಆಟಗಾರ ಯಾರು ಎಂಬ ಪ್ರಶ್ನೆಗೆ ಸೂಕ್ತ ಕಾರಣಗಳ ಮೂಲಕ ವಿವರಣೆ ನೀಡಿದ್ದಾರೆ. ಅಂದ ಹಾಗೇ ಇವರು ಆಯ್ಕೆ ಮಾಡಿದ ಆಟಗಾರ ಮತ್ತ್ಯಾರು ಅಲ್ಲ, ನಮ್ಮ ನಿಮ್ಮೆಲ್ಲರ ಹೆಮ್ಮೆಯ ಆಟಗಾರ ಅನಿಲ್ ಕುಂಬ್ಳೆ. ಹೌದು ಹರ್ಭಜನ್ ಸಿಂಗ್ ರವರು ಅನಿಲ್ ಕುಂಬ್ಳೆ ರವರನ್ನು ಭಾರತ ಕಂಡ ಅತ್ಯಂತ ಯಶಸ್ವಿ ಬೌಲರ್ ಹಾಗೂ ಪಂದ್ಯದಲ್ಲಿ ಗೆಲ್ಲಿಸಬಲ್ಲ/ಪಂದ್ಯ ವಿಜೇತ ಆಟಗಾರ ಎಂದು ಹೆಸರಿಸಿದ್ದಾರೆ.

ಈ ಆಯ್ಕೆಗೆ ಸೂಕ್ತ ಕಾರಣಗಳನ್ನು ನೀಡಿರುವ ಹರ್ಭಜನ್ ಸಿಂಗ್ ರವರು, ನನ್ನ ದೃಷ್ಟಿಯಲ್ಲಿ ಅನಿಲ್ ಕುಂಬ್ಳೆ ರವರು ಭಾರತಕ್ಕಾಗಿ ಆಡಿದ ಶ್ರೇಷ್ಠ ಆಟಗಾರ. ಅವರು ಭಾರತ ಕಂಡ ಅತ್ಯಂತ ಶ್ರೇಷ್ಠ ಮ್ಯಾಚ್ ವಿನ್ನರ್ ಆಟಗಾರ. ಕೆಲವರು ಹೇಳುತ್ತಿದ್ದರೂ ಅನಿಲ್ ಕುಂಬ್ಳೆ ರವರ ಚೆಂಡು ತಿರುಗುತ್ತಿರಲಿಲ್ಲ ಎಂದು, ಆದರೆ ಚಂಡು ತಿರುಗುತ್ತದೆಯೋ ಇಲ್ಲವೋ ಎಂಬುದೇ ಲೆಕ್ಕವಿಲ್ಲದಂತೆ ಬ್ಯಾಟ್ಸ್ಮನ್ ಗಳನ್ನು ಪೆವಿಲಿಯನ್’ಗೆ ಕಳುಹಿಸುತ್ತಿದ್ದರು. ಅನಿಲ್ ಕುಂಬ್ಳೆ ಅವರಿಗೆ ಇದ್ದ ಅರ್ಧದಷ್ಟು ಸ್ಪರ್ಧಾತ್ಮಕ ಆಲೋಚನೆಗಳು ಇತರ ಆಟಗಾರರಿಗೆ ಇದ್ದಿದ್ದರೇ, ಖಂಡಿತ ಅವರು ಚಾಂಪಿಯನ್ ಆಗಿ ಹೊರಹೊಮ್ಮುತ್ತಾರೆ. ಅವರೊಂದಿಗೆ ಹಲವಾರು ವರ್ಷಗಳ ಕಾಲ ಆಟವಾಡಿದ್ದೇನೆ, ಅದು ನನ್ನ ಅದೃಷ್ಟ ಅವರು ನಂಬಲಾಗದಷ್ಟು ಬದ್ದ ಆಟಗಾರ ಎಂದು ಹಾಡಿ ಹೊಗಳಿದ್ದಾರೆ.