ಮುಂದು ವರೆದ “ದಾದಾ” ಗಿರಿ ! ಮಂಡಿಯೂರಿದ ಪಾಕ್ ಕ್ರಿಕೆಟ್ ಸಂಸ್ಥೆ ! ಇದು ಅಸಲಿ ದಾದಾ ಗಿರಿ

ಮುಂದು ವರೆದ “ದಾದಾ” ಗಿರಿ ! ಮಂಡಿಯೂರಿದ ಪಾಕ್ ಕ್ರಿಕೆಟ್ ಸಂಸ್ಥೆ ! ಇದು ಅಸಲಿ ದಾದಾ ಗಿರಿ

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ಸೌರವ್ ಗಂಗೂಲಿ ರವರ ದಾದಾಗಿರಿಯ ಬಗ್ಗೆ ಹೇಳುವ ಅವಶ್ಯಕತೆ ಇಲ್ಲ ಎಂದು ನಮಗೆ ತಿಳಿದಿದೆ. ಮೈದಾನದಲ್ಲಿ ನಾಯಕನಾಗಿ ದಾದಾ ಗಿರಿ ಮೆರೆಯುತ್ತಿದ್ದ ಸೌರವ್ ಗಂಗೂಲಿ ರವರು, ಇದೀಗ ಮೈದಾನದ ಹೊರಗೂ ತಮ್ಮ ದಾದಾಗಿರಿಯನ್ನು ಮುಂದುವರೆಸುತ್ತಿದ್ದಾರೆ.

ಯು ಟರ್ನ್ ಮಾಡಿದ್ದ ಪಾಕ್ ಕ್ರಿಕೆಟ್ ಸಂಸ್ಥೆಯನ್ನು ಮತ್ತೊಮ್ಮೆ ಸರಿಯಾದ ಹಾದಿಗೆ ತಂದಿದ್ದಾರೆ. ಹೌದು, ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕಳೆದ ಕೆಲವು ದಿನಗಳ ಹಿಂದೆ (ಲಾಕ್ ಡೌನ್ಗು ಮುನ್ನ) PCB ಕ್ರಿಕೆಟ್ ಸಂಸ್ಥೆಯು ಭಾರತ ತಂಡ ಪಾಕಿಸ್ತಾನ ದೇಶಕ್ಕೆ ಬಂದು ಕ್ರಿಕೆಟ್ ಆಡಲೇಬೇಕು, ಏಷ್ಯಾ ಕಪ್ ಅನ್ನು ಆಯೋಜಿಸುವ ಸರದಿ ನಮ್ಮದು ಎಂದು ವಾದ ಮಂಡಿಸಿತ್ತು. ಒಂದೇ ಒಂದು ಮೀಟಿಂಗ್ ಮೂಲಕ ICC ಸಂಸ್ಥೆಯಲ್ಲಿ ತನ್ನ ದಾದಾಗಿರಿ ಮೆರಿದಿದ್ದ ಗಂಗೂಲಿ ರವರು ಇತರ ದೇಶಗಳಿಗೆ ಟೂರ್ನಿ ಸ್ಥಳಾಂತರಿಸುವಂತೆ ಮಾಡಿದ್ದರು. ಆದರೆ ಕೆಲವು ದಿನಗಳ ನಂತರ PCB ತನ್ನ ಆದೇಶವನ್ನು ವಾಪಸ್ಸು ತೆಗೆದುಕೊಂಡಿತ್ತು.

ತದ ನಂತರ ಲಾಕ್ ಡೌನ್ ಆದ ಕಾರಣ ಯಾರು ಇದರ ಕುರಿತು ಮಾತನಾಡಿರಲಿಲ್ಲ, ಆದರೆ ಇದೀಗ ಜಗತ್ತಿನ ಎಲ್ಲೆಡೆ ಕ್ರೀಡಾ ಚಟುವಟಿಕೆಗಳನ್ನು ಪ್ರಾರಂಭಿಸುವ ಆಲೋಚನೆ ನಡೆಯುತ್ತಿರುವ ಸಂದರ್ಭದಲ್ಲಿ, ಏಷ್ಯಾ ಕ್ರಿಕೆಟ್ ಬೋರ್ಡ್ ಜೊತೆ ಸಭೆ ನಡೆಸಿ ಪಾಕಿಸ್ತಾನ ಇತರ ಯಾವುದಾದರೂ ದೇಶಗಳಲ್ಲಿ ಟೂರ್ನಿ ನಡೆಸಲಿ, ಯಾವುದೇ ಕಾರಣಕ್ಕೆ ಯಾವುದೇ ಭಾರತೀಯ ಕ್ರಿಕೆಟ್ ತಂಡದ ಆಟಗಾರರು ಪಾಕಿಸ್ತಾನದ ನೆಲಕ್ಕೆ ಬರುವುದಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ. ಭಾರತ ಇಲ್ಲದೇ ಟೂರ್ನಿ ನಡೆಸುತ್ತೇನೆ ಎನ್ನುತ್ತಿದ್ದ ಪಾಕ್ ಕ್ರಿಕೆಟ್ ಬೋರ್ಡ್ ಇದೀಗ ಬಿಸಿಸಿಐ ಗೆ ಮಣಿದು, UAE ಅಥವಾ ಶ್ರೀಲಂಕಾದಲ್ಲಿ ಟೂರ್ನಿ ಆಯೋಜಿಸುತ್ತೇವೆ ಎಂದು ತಿಳಿಸಿದೆ.