ಲಾಭ/ನಷ್ಟದ ಆಲೋಚನೆ ಮಾಡದೇ ನಿಸ್ವಾರ್ಥತೆಯಿಂದ ಸೇವೆ ಮಾಡಿದರೇ ಮನಶಾಂತಿ ಸಿಗುತ್ತದೆ ಎಂಬುದಕ್ಕೆ ಈ ಜಾನಪದ ಕಥೆಯೇ ಉದಾಹರಣೆ

ನಮಸ್ಕಾರ ಸ್ನೇಹಿತರೇ, ಅಗತ್ಯವಿರುವ ಜನರಿಗೆ ಸೇವೆ ಮಾಡುವಾಗ, ಅದರಿಂದ ಪ್ರಯೋಜನ ಇದೆಯೋ, ಇಲ್ಲವೋ ಎಂದು ಯೋಚಿಸಬೇಡಿ, ಆಗ ಮಾತ್ರ ಸೇವೆ ಮಾಡಿದ ತೃಪ್ತಿಯಿಂದ ನಿಮ್ಮ ಮನಸ್ಸು ಶಾಂತಿಯನ್ನು ಪಡೆಯುತ್ತದೆ. ನಾವು ಸೇವೆಯ ಬದಲು ಪ್ರತಿಫಲವನ್ನು ಯೋಚಿಸಿದರೇ, ಮನಸ್ಸು ಶಾಂತವಾಗಿರುವುದಿಲ್ಲ ಎಂದು ಹಿರಿಯರು ಸೇರಿದಂತೆ ಪುರಾಣಗಳಲ್ಲಿ ಹೇಳಲಾಗಿದೆ. ಇಂದು ಅದೇ ರೀತಿಯ ಒಂದು ಜಾನಪದ ಕಥೆಯ ಬಗ್ಗೆ ನಾವು ತಿಳಿದುಕೊಳ್ಳೋಣ.

ಒಬ್ಬ ಸಂತನು ಬಹಳ ವರ್ಷಗಳ ಹಿಂದೆ ಒಂದು ನದಿಯ ದಡದಲ್ಲಿ ಗುಡಿಸಲು ಹಾಕಿಕೊಂಡು ಊರಿನಿಂದ ದೂರದಲ್ಲಿ ವಾಸಿಸುತ್ತಿದ್ದನು. ಗುಡಿಸಲನ್ನು ಆಶ್ರಮ ಮಾಡಿಕೊಂಡು ಒಬ್ಬನೇ ಇದ್ದನು. ಅವನ ಆಶ್ರಮದ ಸುತ್ತಲೂ ಉದ್ದನೆಯ ಹುಲ್ಲು ದಟ್ಟವಾಗಿ ಬೆಳೆದಿತ್ತು. ಈ ಸಂತನಿಗೆ ಈ ರೀತಿಯ ಹುಲ್ಲನ್ನು ಬಳಸಿಕೊಂಡು ಬುಟ್ಟಿ ಮಾಡುವುದು ತಿಳಿದಿತ್ತು. ಒಂದು ದಿನ ತನ್ನ ದಿನ ನಿತ್ಯದ ಧ್ಯಾನ ಮಾಡಿ ಆಶ್ರಮವನ್ನು ಸ್ವಚ್ಛಗೊಳಿಸಿ, ಸುಮ್ಮನೆ ಕೂರುವುದು ಯಾಕೆ ಎಂದು ಆ ಹುಲ್ಲಿನಿಂದ ಬುಟ್ಟಿಯನ್ನು ಮಾಡಿದನು. ಬಹಳ ವರ್ಷ ಆದಮೇಲೆ ಮಾಡಿದ ಕೆಲಸ ಸಂತನಿಗೆ ಬಹಳ ಇಷ್ಟವಾಗಿತ್ತು.

ಬುಟ್ಟಿ ಮಾಡಿದ ನಂತರ ಸಂತನಿಗೆ ಇದರಿಂದ ನನಗೆ ಏನು ಪ್ರಯೋಜನವಿಲ್ಲ, ನಾನು ಇಟ್ಟುಕೊಂಡು ಏನು ಮಾಡುವುದು ಎಂದು ನದಿಯಲ್ಲಿ ತೇಲಿಬಿಟ್ಟನು. ಮರುದಿನ ಸಂತ ಮತ್ತೆ ಬುಟ್ಟಿಯನ್ನು ಮಾಡಿ ನದಿಗೆ ಎಸೆದನು. ಈ ಬಾರಿ ಕಳೆದ ಬಾರಿಗಿಂತ ಕಡಿಮೆ ಸಮಯ ತಗುಲಿತ್ತು. ಇದರಿಂದ ಸಂತನಿಗೆ ಮತ್ತಷ್ಟು ಖುಷಿಯಾಯಿತು. ಇನ್ನು ವೇಗವಾಗಿ ಮಾಡಬಹುದು ಎಂದು ಪ್ರತಿ ದಿನ ಬುಟ್ಟಿಯನ್ನು ತಯಾರಿಸುವುದು. ನದಿಯಲ್ಲಿ ತೇಲಿ ಬಿಡುವುದು ಇದನ್ನೇ ಅಭ್ಯಾಸ ಮಾಡಿಕೊಂಡನು. ಇದರಿಂದ ಸಂತಾನ ಮನಸ್ಸಿಗೆ ಖುಷಿಯಾಗುತ್ತಿತ್ತು.

ಒಂದು ದಿನ ಸಂತ ನಾನು ಈ ಕೆಲಸವನ್ನು ವ್ಯರ್ಥವಾಗಿ ಮಾಡುತ್ತಿದ್ದೇನೆ ಎಂದು ಭಾವಿಸಿದನು. ನಾನು ಬುಟ್ಟಿಯ ಹುಲ್ಲುಗಳನ್ನು ತಯಾರಿಸುತ್ತೇನೆ ಮತ್ತು ಅದನ್ನು ನದಿಯಲ್ಲಿ ಹರಿಸುತ್ತೇನೆ, ಅದರಿಂದ ಯಾರೂ ಪ್ರಯೋಜನ ಪಡೆಯುವುದಿಲ್ಲ, ನನಗಲ್ಲ ಯಾರಿಗೂ ಲಾಭವಿಲ್ಲ ಎಂದುಕೊಂಡನು. ನಾನು ಈ ಬುಟ್ಟಿಗಳನ್ನು ಯಾರಿಗಾದರೂ ನೀಡಿದ್ದರೆ, ಅದು ಯಾರಿಗಾದರೂ ಉಪಯುಕ್ತ ವಾಗಬಹುದಿತ್ತು ಎಂದುಕೊಂಡನು.

ಇದನ್ನು ಯೋಚಿಸುತ್ತಾ ಸಂತನು ಮರು ದಿನದಿಂದ ಹುಲ್ಲಿನ ಬುಟ್ಟಿಗಳನ್ನು ತಯಾರಿಸುವುದನ್ನು ನಿಲ್ಲಿಸಿದನು. ಅದ್ಯಾಕೋ ಸಂತನಿಗೆ ಬುಟ್ಟಿ ಮಾಡುವುದು ನಿಲ್ಲಿಸಿದ ಬಳಿಕ ಮನಸ್ಸಿಗೆ ಶಾಂತಿ ಸಿಗಲಿಲ್ಲ. ಏನೋ ಒಂದು ಕಳವಳವಿತ್ತು. ಅದೇ ಕಾರಣಕ್ಕೆ, ಸಂತನು ನದಿಯ ದಡದಲ್ಲಿ ನಡೆದನು. ಮುಂದೆ ಹೋದಾಗ, ನದಿಯ ದಂಡೆಯಲ್ಲಿ ವಯಸ್ಸಾದ ಮಹಿಳೆ ಕುಳಿತಿದ್ದನ್ನು ಅವನು ನೋಡಿದನು. ಅವಳು ದುಃಖದಿಂದ ನೋಡುತ್ತಿದ್ದಳು. ಸಂತನು ಮಹಿಳೆಯ ದುಃಖಕ್ಕೆ ಕಾರಣವನ್ನು ಕೇಳಿದಾಗ, ಈ ಜಗತ್ತಿನಲ್ಲಿ ನನ್ನವರು ಎಂದು ಯಾರು ಇಲ್ಲ, ನಾನು ಒಬ್ಬಳೇ. ವಯಸ್ಸಾಗಿದೆ, ಕೆಲಸ ಮಾಡಲು ಸಾಧ್ಯವಿಲ್ಲ.

ಊಟಕ್ಕೆ ಕಷ್ಟ ಪಡುತ್ತಿರುವ ಸಂದರ್ಭದಲ್ಲಿ ಹುಲ್ಲಿನಿಂದ ಮಾಡಿದ ಸುಂದರವಾದ ಬುಟ್ಟಿಗಳು ಪ್ರತಿದಿನ ನದಿಯಲ್ಲಿ ಹರಿಯುತ್ತಿದ್ದವು, ಅದನ್ನು ನಾನು ಮಾರಾಟ ಮಾಡುವ ಮೂಲಕ ವಾಸಿಸುತ್ತಿದ್ದೆ, ಆದರೆ ಈಗ ಬುಟ್ಟಿಗಳು ಬರುವುದನ್ನು ನಿಲ್ಲಿಸಿದೆ. ಹಾಗಾಗಿ ನನಗೆ ಬೇಸರವಾಗಿದೆ. ಅವನು ಮಹಿಳೆಯನ್ನು ಆಲಿಸಿದಾಗ ಸಂತನು ತನ್ನ ತಪ್ಪನ್ನು ಅರಿತುಕೊಂಡನು. ಮರುದಿನದಿಂದ ಸಂತನು ಮತ್ತೆ ಹುಲ್ಲಿನ ಬುಟ್ಟಿಗಳನ್ನು ತಯಾರಿಸಿ ನದಿಯಲ್ಲಿ ತೇಲಿಬಿಡುವುದನ್ನು ಆರಂಭಿಸಿದರು.

ಈ ಪ್ರಸಂಗದ ಪಾಠವೇನೆಂದರೇ, ನಿಸ್ವಾರ್ಥತೆಯಿಂದ ಯಾರಿಗಾದರೂ ಸಹಾಯ ಮಾಡಲು ಯಾವುದೇ ಕೆಲಸ ಮಾಡಿದರೇ, ಅದರಿಂದ ಲಾಭ/ಪ್ರಯೋಜನದ ಬಗ್ಗೆ ಆಲೋಚನೆ ಮಾಡದೇ ಇದ್ದಾರೆ ಮಾತ್ರ ನಮ್ಮ ಮನಸ್ಸಿಗೆ ನೆಮ್ಮದಿ. ಇಂತಹ ಜಾನಪದ ನಮ್ಮ ಸದ್ಗುಣವನ್ನು ಹೆಚ್ಚಿಸುತ್ತವೆ ಮತ್ತು ಇತರರು ಅದರಿಂದ ಪ್ರಯೋಜನ ಪಡೆಯುತ್ತಾರೆ. ನಮ್ಮ ಮನಸ್ಸು ಶಾಂತವಾಗಿ ಉಳಿಯುತ್ತದೆ.