ರಾಹುಲ್, ಪಂತ್, ಪಾಂಡ್ಯ ಇವರ್ಯಾರು ಅಲ್ಲ ! ಭಾರತದ ಭವಿಷ್ಯದ ಫಿನಿಶರ್ ಆಯ್ಕೆಮಾಡಿದ ರಾಬಿನ್ ಉತ್ತಪ್ಪ ! ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಭಾರತದ ಅತ್ಯುತ್ತಮ ಫಿನಿಶರ್ ಗಳಲ್ಲಿ ಒಬ್ಬರಾಗಿದ್ದ ಮಹೇಂದ್ರ ಸಿಂಗ್ ಧೋನಿ ರವರ ನಿವೃತ್ತಿಯ ಮಾತುಗಳು ಎಲ್ಲೆಡೆ ಕೇಳಿ ಬರುತ್ತಿವೆ. ನಾಯಕನಾಗಿ, ವಿಕೆಟ್ ಕೀಪರ್ ಹಾಗೂ ಫಿನಿಶರ್ ಆಗಿ ತಂಡದಲ್ಲಿ ಕಾರ್ಯ ನಿರ್ವಹಿಸಿದ್ದ ಮಹೇಂದ್ರ ಸಿಂಗ್ ಧೋನಿ ರವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬುವ ಪ್ರಶ್ನೆಗೆ ಇದೀಗ ಟ್ರೆಂಡಿಂಗ್ ನಲ್ಲಿ ಇದೆ.

ವಿಕೆಟ್ ಕೀಪರ್ ಸ್ಥಾನಕ್ಕೆ ಕೆಎಲ್ ರಾಹುಲ್ ರವರನ್ನು ಕೆಲವು ಜನ ಆಯ್ಕೆ ಮಾಡಿದರೇ, ಇನ್ನು ಕೆಲವರು ರಿಷಬ್ ಪಂತ್ ರವರನ್ನು ಆಯ್ಕೆ ಮಾಡಿದ್ದಾರೆ. ಇನ್ನುಳಿದಂತೆ ಫಿನಿಶರ್ ಸ್ಥಾನವನ್ನು ರಿಷಬ್ ಪಂತ್ ಅಥವಾ ಹಾರ್ದಿಕ್ ಪಾಂಡ್ಯ ರವರು ತುಂಬಲಿದ್ದಾರೆ ಎಂದು ಹಲವಾರು ಕ್ರಿಕೆಟ್ ವಿಶ್ಲೇಷಕರು ಹಾಗೂ ಮಾಜಿ ಕ್ರಿಕೆಟಿಗರು ಅಭಿಪ್ರಾಯ ಪಟ್ಟಿದ್ದಾರೆ. ಆದರೆ ಭವಿಷ್ಯದ ಧೋನಿ ಯಾರು ಎಂಬ ಪ್ರಶ್ನೆಗೆ ರಾಬಿನ್ ಉತ್ತಪ್ಪ ರವರು ಅಚ್ಚರಿಯ ಉತ್ತರ ನೀಡಿದ್ದಾರೆ.

ಹೌದು ಸ್ನೇಹಿತರೇ, ಐಪಿಎಲ್ ನಲ್ಲಿ ಆಟವಾಡಿದ್ದು ಕೇವಲ ಕೆಲವೇ ಕೆಲವು ಪಂದ್ಯಗಳಾದರೂ ಸ್ಮಿತ್, ದ್ರಾವಿಡ್ ಅವರಂತಹ ಆಟಗಾರರು ಅಚ್ಚರಿಪಡುವಂತೆ ಬ್ಯಾಟಿಂಗ್ ಮಾಡಿರುವ ರಾಜಸ್ತಾನ ರಾಯಲ್ಸ್ ತಂಡದ ಯುವ ಆಟಗಾರ ರಿಯಾನ್ ಪರಾಗ್ ರವರು ಭವಿಷ್ಯದ ಧೋನಿ ಆಗಲಿದ್ದಾರೆ, ಖಂಡಿತ ಭಾರತೀಯ ಕ್ರಿಕೆಟ್ ತಂಡದಲ್ಲಿ ಹೆಚ್ಚು ವರ್ಷಗಳ ಕಾಲ ಈತ ಬ್ಯಾಟಿಂಗ್ ಮಾಡುತ್ತಾನೆ, ಈತನಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಉತ್ತಮ ಭವಿಷ್ಯವಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಇವರಂತೆಯೇ ಈ ಹಿಂದೆಯೂ ಹಲವಾರು ಹಿರಿಯ ಆಟಗಾರರು ರಿಯಾನ್ ಪರಾಗ್ ರವರ ಕುರಿತು ಭರವಸೆ ಮೂಡಿಸುವ ಮಾತುಗಳನ್ನಾಡಿದ್ದಾರೆ.