ಕೊಹ್ಲಿ, ರೋಹಿತ್ ನಂತರ ಈ ಆಟಗಾರನಿಗೆ ನಾಯಕನಾಗುವ ಅರ್ಹತೆ ಇದೆ ಎಂದ ಶ್ರೀಶಾಂತ್ ! ಆಯ್ಕೆ ಮಾಡಿದ ಆಟಗಾರ ಯಾರು ಗೊತ್ತಾ?

ಕೊಹ್ಲಿ, ರೋಹಿತ್ ನಂತರ ಈ ಆಟಗಾರನಿಗೆ ನಾಯಕನಾಗುವ ಅರ್ಹತೆ ಇದೆ ಎಂದ ಶ್ರೀಶಾಂತ್ ! ಆಯ್ಕೆ ಮಾಡಿದ ಆಟಗಾರ ಯಾರು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಭಾರತೀಯ ಕ್ರಿಕೆಟ್ ತಂಡದ ಮಾಜಿ ವೇಗದ ಬೌಲರ್ ಶ್ರೀಶಾಂತ್ ರವರು ಇದೀಗ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಲೈವ್ ನಲ್ಲಿ ಮಾತನಾಡಿ ಹಲವಾರು ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ.

ಇದೇ ವೇಳೆ ತಮ್ಮ ಕ್ರಿಕೆಟ್ ಜೀವನದ ಕುರಿತು ಹಾಗೂ ಮುಂಬರುವ ತಮ್ಮ ಕನಸಿನ ಕುರಿತು ಮಾತನಾಡಿದ ಶ್ರೀಶಾಂತ್ ರವರು, ನಾನು ಒಮ್ಮೆಯಾದರೂ ಮತ್ತೊಮ್ಮೆ ಭಾರತೀಯ ಕ್ರಿಕೆಟ್ ತಂಡದಲ್ಲಿ ಸೇವೆ ಸಲ್ಲಿಸಬೇಕು ಎಂದು ಹೇಳಿದ್ದಾರೆ. ಇನ್ನು ಇದೇ ಸಮಯದಲ್ಲಿ ಕೊಹ್ಲಿ ಹಾಗೂ ರೋಹಿತ್ ಶರ್ಮಾ ರವರನ್ನು ಹೊರತುಪಡಿಸಿ ಭಾರತದ ಯಾವ ಆಟಗಾರನಿಗೆ ನಾಯಕನಾಗುವ ಅರ್ಹತೆಗಳು ಇವೆ ಎಂದು ಪ್ರಶ್ನೆ ಕೇಳಿದಾಗ ಕಾರಣಗಳ ಸಮೇತ ತಮ್ಮ ಉತ್ತರವನ್ನು ನೀಡಿದ್ದಾರೆ.

ಹೌದು, ಕೊಹ್ಲಿ ಹಾಗೂ ರೋಹಿತ್ ಶರ್ಮಾ ರವರ ಜೊತೆ ನಾನು ಆಟವಾಡಿದ್ದೇನೆ, ಇವರನ್ನು ಹೊರತು ಪಡಿಸಿದರೆ ಕರ್ನಾಟಕದ ಕೆಎಲ್ ರಾಹುಲ್ ರವರಿಗೆ ಭಾರತೀಯ ಕ್ರಿಕೆಟ್ ತಂಡವನ್ನು ಮುನ್ನಡೆಸುವ ಎಲ್ಲಾ ಅರ್ಹತೆಗಳು ಇವೆ. ಯಾವುದೇ ಕ್ರಿಕೆಟ್ ಮಾದರಿಯಲ್ಲಿಯೂ ಅತ್ಯುತ್ತಮ ಪ್ರದರ್ಶನ ನೀಡುವ ಕೆಎಲ್ ರಾಹುಲ್ ರವರು ತಮ್ಮ ಶಿಸ್ತು ಹಾಗೂ ಕ್ರಿಕೆಟ್ ಕ್ರೀಡೆಯನ್ನು ಪ್ರೀತಿಸುವ ರೀತಿ ಖುಷಿ ಕೊಡುತ್ತದೆ. ವಿಕೆಟ್ ಕೀಪಿಂಗ್ ಮಾಡಿಯೂ ಕೂಡ ಶತಕ ಗಳಿಸುವ ಸಾಮರ್ಥ್ಯ ಹೊಂದಿದ್ದಾರೆ, ಈಗಾಗಲೇ ವಿರಾಟ್ ಕೊಹ್ಲಿ ರವರ ನಾಯಕತ್ವದಲ್ಲಿ ಆಟವಾಡಿ ತಂಡವನ್ನು ಹೇಗೆ ಮುನ್ನಡೆಸಬೇಕು ಎಂಬುದರ ಕುರಿತು ಚೆನ್ನಾಗಿ ಕಲಿತಿರುತ್ತಾರೆ ಎಂದು ಅಭಿಪ್ರಾಯ ಹೊರಹಾಕಿದ್ದಾರೆ ‌