ಮತ್ತೊಮ್ಮೆ ಭಾರತೀಯರ ಮನಗೆದ್ದ ಎಬಿಡಿ ! ಕಷ್ಟದ ಸಮಯದಲ್ಲಿ ಒಂದಾಗಿ ಕೊಹ್ಲಿ,ಎಬಿಡಿ ಮಾಡುತ್ತಿರುವುದಾದರೂ ಏನು ಗೊತ್ತಾ?

ಮತ್ತೊಮ್ಮೆ ಭಾರತೀಯರ ಮನಗೆದ್ದ ಎಬಿಡಿ ! ಕಷ್ಟದ ಸಮಯದಲ್ಲಿ ಒಂದಾಗಿ ಕೊಹ್ಲಿ ಮತ್ತು ಎಬಿಡಿ ಮಾಡುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ಎಬಿ ಡಿವಿಲಿಯರ್ಸ್ ಅವರು ಭಾರತವನ್ನು ಯಾವ ಮಟ್ಟಿಗೆ ಗೌರವಿಸುತ್ತಾರೆ ಎಂಬುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ. ಅದರಲ್ಲಿಯೂ ಬೆಂಗಳೂರನ್ನು ನನ್ನ ಎರಡನೇ ತವರು ಮನೆ ಎಂದು ಗರ್ವದಿಂದ ಹೇಳುವ ಇವರು ಇದೀಗ ಕೊಹ್ಲಿ ಜೊತೆ ಗೂಡಿ ಮಹತ್ವದ ಕಾರ್ಯಕ್ಕೆ ಕೈ ಹಾಕಿದ್ದಾರೆ.

ಹೌದು, ಕಳೆದ ಕೆಲವು ದಿನಗಳ ಹಿಂದೆ ವಿರಾಟ್ ಕೊಹ್ಲಿ ರವರಿಗೆ ಕರೆ ಮಾಡಿದ ಎಬಿ ಡಿವಿಲಿಯರ್ಸ್ ರವರು ಗುಜರಾತ್ ತಂಡದ ವಿರುದ್ಧ 2016 ರಲ್ಲಿ 248 ರನ್ ಗಳಿಸಿದ ಪಂದ್ಯದಲ್ಲಿ ತಾವಿಬ್ಬರೂ ಶತಕ ಸಿಡಿಸಿದ ಬ್ಯಾಟ್, ಗ್ಲೌಸ್ ಹಾಗೂ ಸಹಿ ಮಾಡಿದ ಟಿ-ಶರ್ಟ್ ಗಳನ್ನು ಹುಡುಕುವಂತೆ ಹೇಳಿದ್ದರು, ಆದರೆ ಕಾರಣ ತಿಳಿಸಿರಲಿಲ್ಲ. ಇದೀಗ ಇನ್ಸ್ಟಾಗ್ರಾಮ್ ಲೈವ್ ನಲ್ಲಿ ಕೊಹ್ಲಿ ರವರು ಯಾಕೆ ಎಂದಾಗ ಉತ್ತರ ನೀಡಿದ್ದಾರೆ.

ಉತ್ತಮ ಆಲೋಚನೆಯ ಮೂಲಕ ಕರೋನ ಪರಿಸ್ಥಿತಿಯಲ್ಲಿ ಬಡವರಿಗೆ ಸಹಾಯ ಹಸ್ತ ಚಾಚಲು ಮುಂದಾಗಿದ್ದಾರೆ. ಇದಕ್ಕೆ ಕೊಹ್ಲಿ ಕೂಡ ಸಮ್ಮತಿ ಸೂಚಿಸಿ, ಇದಕ್ಕೆ ನನ್ನ ಸಂಪೂರ್ಣ ಬೆಂಬಲ ಇದೆ, ಆಫ್ರಿಕಾ ಅಷ್ಟೇ ಅಲ್ಲದೇ ಭಾರತದ ಬಗ್ಗೆಯೂ ಆಲೋಚನೆ ಮಾಡಿದ್ದಕ್ಕಾಗಿ ವಿಶೇಷ ಧನ್ಯವಾದಗಳು ಎಂದಿದ್ದಾರೆ.

ಇದೀಗ ಈ ಪಂದ್ಯದಲ್ಲಿ ತಾವು ಬಳಸಿದ ವಸ್ತುಗಳ ಮೇಲೆ ಸಹಿ ಮಾಡಿ. ಆನ್ಲೈನ್ ನಲ್ಲಿ ಹರಾಜು ಪ್ರಕ್ರಿಯೆ ಮೂಲಕ ಮಾರಾಟ ಮಾಡಿ ಅದರಿಂದ ಬರುವ ಹಣದಿಂದ ಕರೋನ ಪರಿಸ್ಥಿತಿಯಿಂದ ಊಟವಿಲ್ಲದೆ ಕಷ್ಟಪಡುತ್ತಿರುವ ಬಡವರಿಗೆ ನೀಡಲು ನಿರ್ಧಾರ ಮಾಡಿದ್ದಾರೆ. ಈ ಹಣದಲ್ಲಿ ಅರ್ಧ ಹಣವನ್ನು ಭಾರತಕ್ಕೆ ನೀಡಲು ನಿರ್ಧಾರ ಮಾಡಲಾಗಿದ್ದು, ಉಳಿದ ಅರ್ಧ ಹಣವನ್ನು ಆಫ್ರಿಕಾ ಜನತೆಗೆ ತಲುಪಿಸಲು ಎಬಿ ಡಿವಿಲಿಯರ್ಸ್ ಕೊಹ್ಲಿ ರವರ ಬಳಿ ಮನವಿ ಮಾಡಿದರು, ಇದಕ್ಕೆ ಪ್ರತಿಕ್ರಿಯಿಸಿದ ಕೊಹ್ಲಿ ರವರು ಇದೊಂದು ಅತ್ಯುತ್ತಮ ಆಲೋಚನೆಯಾಗಿದ್ದು, ಇದಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ ನೀವು ಕೇಳಿದ ಬ್ಯಾಟ್, ಗ್ಲೌಸ್ ಹಾಗೂ ಟಿ-ಶರ್ಟ್ ಗಳನ್ನು ಸಿದ್ಧವಾಗಿರಿಸಿದ್ದೇನೆ ಎಂದು ಇನ್ಸ್ಟಾಗ್ರಾಮ್ ಲೈವ್ ನಲ್ಲಿ ತಿಳಿಸಿದ್ದಾರೆ.