ಚೀನಾ ವೈರಸ್ ಪ್ರಭಾವ ಯಾವಾಗ ಕಡಿಮೆಯಾಗುತ್ತದೆ ಎಂದು ಮತ್ತೊಮ್ಮೆ ಭವಿಷ್ಯ ನುಡಿದ ಜ್ಯೋತಿಷಿ ಅಭಿಜ್ಞ ಆನಂದ್ ! ಹೇಳಿದ್ದೇನು ಗೊತ್ತಾ??

ಚೀನಾ ವೈರಸ್ ಪ್ರಭಾವ ಯಾವಾಗ ಕಡಿಮೆಯಾಗುತ್ತದೆ ಎಂದು ಮತ್ತೊಮ್ಮೆ ಭವಿಷ್ಯ ನುಡಿದ ಜ್ಯೋತಿಷಿ ಅಭಿಜ್ಞ ಆನಂದ ! ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಚೀನಾ ವೈರಸ್ ಪ್ರಭಾವದಿಂದ ಇದೀಗ ವಿಶ್ವದ ಎಲ್ಲೆಡೆ ತಲ್ಲಣ ಉಂಟಾಗಿದೆ. ಈ ತಲ್ಲಣ ಸೃಷ್ಟಿಯಾಗುವ ಮುನ್ನ ಬಾಲ ಜ್ಯೋತಿಷಿ ಅಭಿಜ್ಞ ಆನಂದ್ ರವರು ಎಚ್ಚರಿಕೆ ನೀಡಿದ್ದರು.

ಆದರೆ ಅಂದು ಅವರ ಮಾತುಗಳನ್ನು ಯಾರೂ ಅಷ್ಟಾಗಿ ಗಣನೆಗೆ ತೆಗೆದು ಕೊಂಡಿರಲಿಲ್ಲ. ಆದರೆ ಚೀನಾ ವೈರಸ್ ಪ್ರಭಾವ ದಿನೇದಿನೇ ಹೆಚ್ಚಾಗುತ್ತಿದ್ದಂತೆ ಇವರ ವಿಡಿಯೋಗಳು ಎಲ್ಲೆಡೆ ವೈರಲ್ ಆಗಲು ಆರಂಭಿಸಿದವು. ತದನಂತರ ಹಲವಾರು ವಿಚಾರಧಾರೆಗಳನ್ನು ತಿಳಿಸಿದ ಬಾಲ ಜ್ಯೋತಿಷಿ ಅಭಿಜ್ಞ ಆನಂದ್ ರವರು ಕೆಲವೇ ಕೆಲವು ದಿನಗಳಲ್ಲಿ ಬಹಳ ಫೇಮಸ್ ಆದರು. ಇವರು ಹೇಳಿದಂತೆ ಏಪ್ರಿಲ್ ತಿಂಗಳಿನಲ್ಲಿ ಭಾರತದಲ್ಲಿ ಚೀನಾ ವೈರಸ್ ಪ್ರಭಾವ ಹೆಚ್ಚಾಗಿದೆ, ಇದೀಗ ಮತ್ತೊಮ್ಮೆ ಚೀನಾ ವೈರಸ್ ಪ್ರಭಾವದ ಕುರಿತು ಮಾತನಾಡಿರುವ ಜ್ಯೋತಿಷಿ ಅಭಿಜ್ಞ ಆನಂದ್ ರವರು ಈ ರೀತಿ ಹೇಳಿದ್ದಾರೆ.

ಇದೀಗ ಇದರ ಕುರಿತು ಮಾತನಾಡಿರುವ ಜ್ಯೋತಿಷಿ ಅಭಿಜ್ಞ ಆನಂದ್ ರವರು ಭಾರತದಲ್ಲಿ ಮೇ ನಾಲ್ಕನೇ ತಾರೀಖಿನವರೆಗೂ ಆಹಾರಕ್ಕಾಗಿ ಹಲವಾರು ಜನರು ಕಷ್ಟಪಡ ಬೇಕಾಗುತ್ತದೆ. ಯಾವುದೇ ಸರ್ಕಾರಗಳು ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಎಲ್ಲರಿಗೂ ಆಹಾರ ನೀಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಯಾರು ಆಹಾರವನ್ನು ವ್ಯರ್ಥಮಾಡಬಾರದು, ಇನ್ನು ಭಾರತದಲ್ಲಿ ಈ ವೈರಸ್ ಪ್ರಭಾವ ಅಷ್ಟಾಗಿ ಇರುವುದಿಲ್ಲ. ಆದರೆ ಇಡೀ ವಿಶ್ವವೇ ಇದರಿಂದ ನಲುಗುತ್ತದೆ. ಜುಲೈ ಮೊದಲ ವಾರದವರೆಗೂ ಚೀನಾ ವೈರಸ್ ಅನ್ನು ಸಂಪೂರ್ಣವಾಗಿ ತಡೆಗಟ್ಟಲು ಸಾಧ್ಯವಿಲ್ಲ, ತದನಂತರ ವಷ್ಟೇ ಇದರ ಪ್ರಭಾವ ಕಡಿಮೆ ಯಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಈಗಲೇ ಎಚ್ಚೆತ್ತುಕೊಂಡು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಕೊಳ್ಳುವತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.