ರಣಜಿ ಸೆಮಿಫೈನಲ್ : ಮಧ್ಯಾಹ್ನ ಊಟದ ವೇಳೆ ವೇಳೆಯಷ್ಟರಲ್ಲಿಯೇ ಪರಾಕ್ರಮ ಮೆರೆದ ಕನ್ನಡಿಗರು
ರಣಜಿ ಸೆಮಿಫೈನಲ್ : ಮಧ್ಯಾಹ್ನ ಊಟದ ವೇಳೆ ವೇಳೆಯಷ್ಟರಲ್ಲಿಯೇ ಪರಾಕ್ರಮ ಮೆರೆದ ಕನ್ನಡಿಗರು
ನಮಸ್ಕಾರ ಸ್ನೇಹಿತರೇ, ಇದೀಗ ಕರ್ನಾಟಕ ತಂಡವು ಮತ್ತೊಮ್ಮೆ ರಣಜಿ ಟ್ರೋಫಿಯನ್ನು ಗೆಲ್ಲಲು ಇನ್ನು ಕೇವಲ ಎರಡೇ ಎರಡು ಮೆಟ್ಟಿಲುಗಳು ಬಾಕಿ ಉಳಿದಿವೆ(ಸೆಮಿಫೈನಲ್ ಹಾಗೂ ಫೈನಲ್). ಇದೀಗ ಇಂದು ಸೆಮಿಫೈನಲ್ ಪಂದ್ಯ ಆರಂಭವಾಗಿದ್ದು, ಕರ್ನಾಟಕ ತಂಡಕ್ಕೆ ಬಂಗಾಳ ತಂಡ ಸುಲಭ ತುತ್ತಾಗುವ ಸಾಧ್ಯತೆಗಳು ಹೆಚ್ಚಾಗಿವೆ. ಪಂದ್ಯದ ಮೊದಲ ಎರಡು ಅವಧಿಗಳಲ್ಲಿಯೇ ಕರ್ನಾಟಕ ತಂಡ ಪರಾಕ್ರಮ ಮೆರಿದಿದೆ.
ಹೌದು, ಇಂದು ಮುಂಜಾನೆ ಆರಂಭವಾದ ಪಂದ್ಯದಲ್ಲಿ ಕರ್ನಾಟಕ ಬೌಲರ್ಗಳು ಪಾರುಪತ್ಯ ಮೆರೆದಿದ್ದಾರೆ. ಮಧ್ಯಾಹ್ನ ಊಟದ ವೇಳೆಗೆ 30 ಓವರ್ ಗಳನ್ನು ಎದುರಿಸಿದ ಬಂಗಾಳ ತಂಡವು ಕರ್ನಾಟಕ ಬೌಲರ್ಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನದ ಮುಂದೆ ಮಂಕಾಗಿದೆ. ಈಗಾಗಲೇ ಐದು ಬಲಾಡ್ಯ ಬ್ಯಾಟ್ಸ್ಮನ್ಗಳು ಪೆವಿಲಿಯನ್ ಸೇರಿಕೊಂಡಿದ್ದು, ಕೇವಲ 66 ರನ್ ಗಳಿಸಿದೆ. ಕರ್ನಾಟಕದ ಪರವಾಗಿ ಅಭಿಮನ್ಯು ಮಿಥುನ್ 2 ವಿಕೆಟ್ ಪಡೆದುಕೊಂಡರೇ ಪ್ರಸಿದ್ಧ್ ಕೃಷ್ಣ, ರೋನಿತ್ ಮೋರ್ ಹಾಗೂ ಕೃಷ್ಣಪ್ಪ ಗೌತಮ್ ರವರು ತಲಾ ಒಂದು ವಿಕೆಟ್ ಪಡೆದುಕೊಂಡಿದ್ದಾರೆ.