ಅಸ್ಸಾಂ ವಿಭಜಿಸುತ್ತೇನೆ ಎಂದವನನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದ ಹುಡುಗಿ ಯಾರೆಂದು ತಿಳಿದರೇ ಭೇಷ್ ಎನ್ನುತ್ತೀರಾ ! ಅಷ್ಟಕ್ಕೂ ಆ ಹುಡುಗಿ ಯಾರು ಗೊತ್ತಾ??

ಅಸ್ಸಾಂ ವಿಭಜಿಸುತ್ತೇನೆ ಎಂದವನನ್ನು ಹಿಡಿಯಲು ಪೊಲೀಸರಿಗೆ ಸಹಾಯ ಮಾಡಿದ ಹುಡುಗಿ ಯಾರೆಂದು ತಿಳಿದರೇ ಭೇಷ್ ಎನ್ನುತ್ತೀರಾ ! ಅಷ್ಟಕ್ಕೂ ಆ ಹುಡುಗಿ ಯಾರು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಅಸ್ಸಾಂ ರಾಜ್ಯವನ್ನು ಹಾಗೂ ಈಶಾನ್ಯ ಭಾರತವನ್ನು ಭಾರತದ ಇತರ ಭಾಗಗಳಿಂದ ಬೇರ್ಪಡಿಸಿ ಬೇಕು ಎಂದು ಕರೆ ನೀಡಿದ್ದ ಶಾರ್ಜೀಲ್ ಇಮಾಮ್ ನನ್ನು ದೆಹಲಿ ಪೊಲೀಸರು ಬಂಧಿಸಿರುವುದು ನಿಮಗೆಲ್ಲರಿಗೂ ತಿಳಿದಿರುವ ವಿಷಯ.

ಈತನನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿರುವ ದೆಹಲಿ ಪೊಲೀಸರು ವಿಚಾರಣೆ ವೇಳೆಯಲ್ಲಿ ಹಲವಾರು ಮಹತ್ವದ ಮಾಹಿತಿಗಳನ್ನು ಕಲೆ ಹಾಕಿದ್ದಾರೆ. ಈತನ ಮುಖ್ಯ ಗುರಿ ಭಾರತವನ್ನು ಮುಸ್ಲಿಂ ರಾಷ್ಟ್ರವನ್ನಾಗಿ ಮಾಡಬೇಕು ಎಂಬುದನ್ನು ಇವನು ಒಪ್ಪಿಕೊಂಡಿ ರುವುದಾಗಿ ದೆಹಲಿ ಪೊಲೀಸರು ಹೇಳಿಕೆ ನೀಡಿದ್ದಾರೆ. ಇದರ ಬೆನ್ನಲ್ಲೇ ಇಂದು ಪೊಲೀಸರು ಈತನನ್ನು ಕರೆದುಕೊಂಡು ಹೋಗುವಾಗ ಮಾಧ್ಯಮಗಳು ಹಲವಾರು ಪ್ರಶ್ನೆ ಕೇಳಿದರೂ ಈತ ಉತ್ತರ ನೀಡಿದ್ದನ್ನು ಕಂಡ ಜನ ಸದಾ ಮನಬಂದಂತೆ ಅದೇ ಪ್ರಚೋದನಕಾರಿ ಭಾಷಣಗಳನ್ನು ಮಾಡುತ್ತಿದ್ದ ಈತ ಮಾಧ್ಯಮಗಳು ಎಷ್ಟೇ ಪ್ರಶ್ನೆ ಮಾಡಿದರೂ ಒಂದೇ ಒಂದು ಹೇಳಿಕೆಯನ್ನೂ ಕೂಡ ನೀಡುತ್ತಿಲ್ಲ ಎಂದರೆ ದೆಹಲಿ ಪೊಲೀಸರು ಯಾವ ಮಟ್ಟಕ್ಕೆ ಲಾಠಿ ರುಚಿ ತೋರಿಸಿರ ಬೇಕು ಎಂಬುದನ್ನು ನೀವೇ ಅರ್ಥ ಮಾಡಿಕೊಳ್ಳಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಪೋಸ್ಟ್ಗಳು ಹರಿಬಿಟ್ಟಿದ್ದಾರೆ.

ಇದರ ಬೆನ್ನಲ್ಲೇ ಮಾತನಾಡಿರುವ ದೆಹಲಿ ಪೊಲೀಸರು ಈತನನ್ನು ಬಂಧಿಸಲು ಸಹಾಯ ಮಾಡಿದ ವ್ಯಕ್ತಿ ಯಾರೆಂದು ತಿಳಿಸಿದ್ದಾರೆ, ಹೌದು ಈತನ ಮನೆಯ ಮೇಲೆ ಹಾಗೂ ಸಂಬಂಧಿಕರ ಮನೆಯ ಮೇಲೆ ದಾಳಿ ನಡೆಸಿದರೂ ಈತ ಸಿಕ್ಕಿರಲಿಲ್ಲ, ಕೊನೆಗೆ ದೆಹಲಿ ಪೊಲೀಸರಿಗೆ ನೆನಪಾಗಿದ್ದು ಈತನ ಗರ್ಲ್ಫ್ರೆಂಡ್. ಹೌದು ಈ ವಿಷಯವನ್ನು ಗಲ್ಫ್ರೆಂಡ್ ಮುಂದೆ ಪೊಲೀಸರು ಪ್ರಸ್ತಾಪಿಸಿದಾಗ ಆಕೆ ಪೊಲೀಸರ ಮಾತಿಗೆ ಮರು ಮಾತನಾಡದೇ ಒಪ್ಪಿಕೊಂಡು ನಾನು ನಿನ್ನ ಬಳಿ ಮಾತನಾಡಬೇಕು ಬಾ ಎಂದು ಕರೆಸಿ ಕೊಂಡಿದ್ದಾರೆ.‌ ಗರ್ಲ್ ಫ್ರೆಂಡ್ ಕರೆ ಮಾಡಿ ಕರೆದ ಕೂಡಲೇ ಓಡಿಬಂದ ಈತನನ್ನು ಪೊಲೀಸರು ಸಮಯ ನೋಡಿ ಬಂಧಿಸಿದ್ದಾರೆ. ಈ ಸಹೋದರಿಯ ನಿರ್ಧಾರಕ್ಕೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಂಸೆಗಳು ವ್ಯಕ್ತವಾಗುತ್ತಿದ್ದು, ಒಬ್ಬ ದೇಶ ವಿಭಜನೆ ಮಾಡುತ್ತೇನೆ ಎಂದ ತಕ್ಷಣ ಆತನ ಪ್ರೇಯಸಿ ಕೂಡ ಆತನನ್ನು ಮರೆತು ದೇಶ ಆಯ್ಕೆ ಮಾಡಿಕೊಂಡಳು ಇದಲ್ಲವೇ ಭಾರತ ಮಾತೆಯ ನಮಗೆ ಹೇಳಿ ಕೊಡುವುದು ಎಂದು ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿದ್ದಾರೆ.