ಬಿಗ್ ನ್ಯೂಸ್: ಹಾಸನದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ 9 ಕುಟುಂಬಗಳ ಸುದ್ದಿ ಕೇಳಿದ ತಕ್ಷಣ ಋಷಿ ಕುಮಾರ ಸ್ವಾಮೀಜಿಯವರು ಮಾಡಿದ್ದೇನು ಗೊತ್ತಾ??

ಬಿಗ್ ನ್ಯೂಸ್: ಹಾಸನದಲ್ಲಿ ಕ್ರೈಸ್ತ ಧರ್ಮಕ್ಕೆ ಮತಾಂತರ ಆಗಿದ್ದ 9 ಕುಟುಂಬಗಳ ಸುದ್ದಿ ಕೇಳಿದ ತಕ್ಷಣ ಋಷಿ ಕುಮಾರ ಸ್ವಾಮೀಜಿಯವರು ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಎಲ್ಲಾ ಧರ್ಮಗಳನ್ನು ಗೌರವಿಸ ಬೇಕು ನಿಜ ಆದರೆ ಯಾರನ್ನೇ ಆಗಲಿ ಅವರ ಮೂಲ ಧರ್ಮದಿಂದ ಬಲವಂತವಾಗಿ ಮತಾಂತರ ಮಾಡುವುದು ತಪ್ಪಾಗುತ್ತದೆ. ಆದರೆ ಎಗ್ಗಿಲ್ಲದೆ ಕ್ರಿಶ್ಚಿಯನ್ ಮಿಷನರಿಗಳು ಇಡೀ ಭಾರತದಲ್ಲಿ ಹಲವಾರು ಕಡೆ ಸಾಮಾನ್ಯ ಜನರ ಬಡತನವನ್ನು ಲಾಭವನ್ನಾಗಿ ಮಾಡಿಕೊಂಡು ಈ ಕೆಲಸ ಮಾಡುತ್ತಿದ್ದಾರೆ.

ಇನ್ನು ಕೆಲವರನ್ನು ಬಲವಂತವಾಗಿ ಮತಾಂತರ ಮಾಡುವುದು ಕೂಡ ನಡೆಯುತ್ತಿದೆ ಎಂಬ ಸುದ್ದಿಗಳು ಕೇಳಿ ಬಂದಿವೆ. ಇದೇ ರೀತಿ ಕರ್ನಾಟಕ ರಾಜ್ಯದ ಹಾಸನ ಜಿಲ್ಲೆಯ ಅರಸೀಕೆರೆ ತಾಲ್ಲೂಕಿನಲ್ಲಿ ಇರುವ ಬನ್ನಿಮರದ ಹಟ್ಟಿ ಗ್ರಾಮದಲ್ಲಿ ಕಳೆದ ಕೆಲವು ದಿನಗಳ ಹಿಂದೆ ರಾಜು ಫಾಸ್ಟರ್ ಎಂಬ ವ್ಯಕ್ತಿ ಇಲ್ಲಿರುವ 50 ಕುಟುಂಬಗಳ ಜೊತೆ ಮಾತನಾಡಿ ಗ್ರಾಮಸ್ಥರ ತಲೆ ಕೆಡಿಸಿ ಕ್ರೈಸ್ತ ಧರ್ಮಕ್ಕೆ ಬರುವಂತೆ ಮನವೊಲಿ ಸುತ್ತಿದ್ದಾನೆ, ಒಂಬತ್ತು ಕುಟುಂಬಗಳು ಇವನ ಮಾತನ್ನು ಕೇಳಿ ಕ್ರೈಸ್ತ ಧರ್ಮಕ್ಕೆ ಮತಾಂತರವಾಗಿದ್ದಾರೆ. ಮೊದಲಿಗೆ ಮಕ್ಕಳಿಗೆ ಆಮಿಷ ತೋರಿಸಿ ಮತಾಂತರ ಮಾಡಿ ತದ ನಂತರ ಅವರ ತಂದೆ ತಾಯಿಯನ್ನು ಮಕ್ಕಳು ಬಲವಂತ ಮಾಡುವಂತೆ ಮಾಡಿ ಒಪ್ಪದಿದ್ದರೆ ಮನೆಯಿಂದ ಹೊರ ಹಾಕುತ್ತಿದ್ದರು ಎಂಬ ಆರೋಪಗಳು ಕೇಳಿ ಬಂದಿವೆ. ಇನ್ನು ಕೈಸ ಧರ್ಮಕ್ಕೆ ಮತಾಂತರ ಗೊಂಡ ತಕ್ಷಣ ಮನೆಯಲ್ಲಿರುವ ಎಲ್ಲಾ ಹಿಂದೂ ದೇವರುಗಳ ಫೋಟೋವನ್ನು ಬಿಸಾಡಿದ್ದಾರೆ ಎಂಬುದು ತಿಳಿದು ಬಂದಿದೆ.

ಗ್ರಾಮದಲ್ಲಿ ಇತ್ತೀಚೆಗೆ ಚರ್ಚ್ ಕೂಡ ನಿರ್ಮಾಣವಾಗಿದ್ದು ಅಲ್ಲಿ ತೀರ್ಥ ಕುಡಿಸಿ ಮತಾಂತರ ಮಾಡಲಾಗುತ್ತಿತ್ತು. ಈ ವಿಷಯ ತಿಳಿದ ಕೂಡಲೇ ಋಷಿ ಕುಮಾರ ಸ್ವಾಮೀಜಿ ರವರು ಕೆಲವು ಹಿಂದೂ ಸಂಘಟನೆಗಳ ಕಾರ್ಯಕರ್ತರ ಬೆಂಬಲ ಪಡೆದುಕೊಂಡು ಈಗಾಗಲೇ ಮತಾಂತರ ವಾಗಿದ್ದಾರೆ ಎನ್ನಲಾಗಿರುವ 9 ಕುಟುಂಬಗಳ ಸದಸ್ಯರ ಜೊತೆ ಮಾತನಾಡಿ ಹಿಂದೂ ಧರ್ಮದ ಜಾಗೃತಿ ಮೂಡಿಸಿ, ಶಿವ ಮಂತ್ರವನ್ನು ಹೇಳಿ ಕೊಟ್ಟು ಪಟಿಸುವಂತೆ ಮಾಡಿ ಮರಳಿ ಹಿಂದೂ ಧರ್ಮ ಸ್ವೀಕರಿಸುವಂತೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಉಳಿದ ಮನೆಗಳಿಗೂ ಭೇಟಿ ನೀಡಿರುವ ಋಷಿ ಕುಮಾರ ಸ್ವಾಮೀಜಿ ರವರು ಹಿಂದೂ ಧರ್ಮದ ಮಹತ್ವವನ್ನು ಎಲ್ಲರಿಗೂ ತಿಳಿಸಿ ಜಾಗೃತಿ ಮೂಡಿಸಿದ್ದಾರೆ ಎನ್ನಲಾಗಿದೆ.