ಶಹಬ್ಬಾಸ್ ಸರ್ ! ಎನ್ಆರ್ಸಿ ಯನ್ನು ಭರ್ಜರಿ ಸಿದ್ಧತೆ ಮಾಡಿಕೊಂಡು ಶಾಕಿಂಗ್ ವರದಿ ಬಹಿರಂಗ ಪಡಿಸಿದ ಭಾಸ್ಕರ್ ರಾವ್ ! ರಾಜಧಾನಿಯಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ಶಹಬ್ಬಾಸ್ ಸರ್ ! ಎನ್ಆರ್ಸಿ ಯನ್ನು ಭರ್ಜರಿ ಸಿದ್ಧತೆ ಮಾಡಿಕೊಂಡು ಶಾಕಿಂಗ್ ವರದಿ ಬಹಿರಂಗ ಪಡಿಸಿದ ಭಾಸ್ಕರ್ ರಾವ್ ! ರಾಜಧಾನಿಯಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಮಸೂದೆ ಹಾಗೂ ಎನ್ಆರ್ಸಿ ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭದಲ್ಲಿ ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ ನವರು ಕರ್ನಾಟಕ ರಾಜ್ಯದಲ್ಲಿ ಎರಡು ಮಸೂದೆಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಅಂದೇ ಖಚಿತಪಡಿಸಿದ್ದರು.

ಇದೀಗ ಇದೇ ವಿಚಾರವಾಗಿ ಮಹತ್ವದ ವಿದ್ಯಮಾನ ನಡೆದಿದೆ. ಹೌದು, ಬೆಂಗಳೂರು ರಾಜಧಾನಿ ಸೇರಿದಂತೆ ಚಿಕ್ಕಮಗಳೂರಿನ ಕಾಫಿ ತೋಟಗಳಲ್ಲಿ ಹಾಗೂ ಇನ್ನಿತರ ಜಿಲ್ಲೆಗಳಲ್ಲಿ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಹೆಚ್ಚು ಅಕ್ರಮ ಬಾಂಗ್ಲಾದೇಶಿ ವಲಸಿಗರು ನೆಲೆಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡುತ್ತಿದ್ದರೇ, ಜನರು ಅದನ್ನು ಸುಳ್ಳು ಎನ್ನುತ್ತಿದ್ದರು. ಆದರೆ 60 ಜನರನ್ನು ಬಾಂಗ್ಲಾದೇಶ ಗಡಿಗೆ ಕರೆದುಕೊಂಡು ಹೋಗಿ ಬಾಂಗ್ಲಾದೇಶಕ್ಕೆ ಬಿಟ್ಟು ಬರುವ ಸಂದರ್ಭದಲ್ಲಿ ಅಕ್ರಮ ವಲಸಿಗರು ಬೆಂಗಳೂರು ಪೊಲೀಸರ ಜೊತೆ ನಮ್ಮನ್ನು ಹೊರ ಬರುತ್ತಿದ್ದೀರೀ ಆದರೆ ಕೇವಲ ಬೆಂಗಳೂರಿನಲ್ಲಿಯೇ ಮೂರು ಲಕ್ಷಕ್ಕೂ ಹೆಚ್ಚು ಜನ ಇದ್ದಾರೆ ಅವರನ್ನು ಏನು ಮಾಡುತ್ತೀರಿ ಎಂದು ಪ್ರಶ್ನೆ ಮಾಡಿದ್ದರು ಎನ್ನಲಾಗಿದೆ. ಅವರ ಹೇಳಿಕೆಯನ್ನು ಗಂಭೀರವಾಗಿ ತೆಗೆದುಕೊಂಡ ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಏನು ಮಾಡಿದರೂ ಗೊತ್ತಾ? ತಿಳಿಯಲು ಕೆಳಗಡೆ ಓದಿ.

ಕೂಡಲೇ ಎಚ್ಚೆತ್ತುಕೊಂಡ ಬೆಂಗಳೂರು ಪೊಲೀಸ್ ಅಧಿಕಾರಿಗಳು ರಾಜಧಾನಿಯಲ್ಲಿ ಅಕ್ರಮವಾಗಿ ನೆಲೆಸಿರುವ ಎಲ್ಲಾ ಬಾಂಗ್ಲಾ ದೇಶಿಯರ ಮಾಹಿತಿಗಳನ್ನು ಕಲೆ ಹಾಕಲು ಆರಂಭ ಮಾಡಿ ಇದುವರೆಗೂ ಬರೋಬ್ಬರಿ ಮೂರು ಲಕ್ಷಕ್ಕೂ ಹೆಚ್ಚು ಅಕ್ರಮ ವಲಸಿಗಾರರ ಮಾಹಿತಿ ಯನ್ನು ಕಲೆ ಹಾಕಿದ್ದಾರೆ ಎಂದು ಭಾಸ್ಕರ್ ರವರು ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬಾಂಗ್ಲಾ ದೇಶದಿಂದ ದಲ್ಲಾಳಿಗಳ ಮೂಲಕ ಬೆಂಗಳೂರಿಗೆ ತಲುಪಿ ಇಲ್ಲಿ ನೆಲೆಸಿದ್ದಾರೆ ಎಂದು ತಿಳಿಸಿದ್ದಾರೆ. ಇನ್ನು ಶಾಕಿಂಗ್ ಮಾಹಿತಿ ಏನೆಂದರೇ ಕೆಲವರು ಆಧಾರ್ ಕಾರ್ಡ್, ವೋಟರ್ ಐಡಿ ರಾಜಕಾರಣಿಗಳ ಮೂಲಕ ಮಾಡಿಸಿಕೊಂಡು ಪೌರ ಕಾರ್ಮಿಕರಾಗಿ ಸರ್ಕಾರಿ ಉದ್ಯೋಗ ಗಿಟ್ಟಿಸಿಕೊಂಡು ಇದ್ದಾರೆ ಎಂದು ತಿಳಿದು ಬಂದಿದೆ. ಒಟ್ಟಿನಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇರುವ ಕಾರಣ ಇದೀಗ ಮೂರು ಲಕ್ಷ ಮಂದಿ ಹೊರ ಹೋಗುವುದು ಬಹುತೇಕ ಖಚಿತವಾಗಿದೆ.