ಬಿಗ್ ನ್ಯೂಸ್: ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಮೋದಿ-ಶಾ ಜೋಡಿಗೆ ಮೊದಲ ಭರ್ಜರಿ ಯಶಸ್ಸು ! ಇಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ?

ಬಿಗ್ ನ್ಯೂಸ್: ಅಕ್ರಮ ವಲಸಿಗರನ್ನು ತಡೆಯುವ ನಿಟ್ಟಿನಲ್ಲಿ ಮೋದಿ-ಶಾ ಜೋಡಿಗೆ ಮೊದಲ ಭರ್ಜರಿ ಯಶಸ್ಸು ! ಇಲ್ಲಿ ನಡೆಯುತ್ತಿರುವುದಾದರೂ ಏನು ಗೊತ್ತಾ?

ನಮಸ್ಕಾರ ಸ್ನೇಹಿತರೇ, ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ದೇಶದ ಹಲವಾರು ರಾಜ್ಯಗಳಲ್ಲಿ ಬಾಂಗ್ಲಾದೇಶ ದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿ ಇಲ್ಲಿನ ಜನ ಜೀವನವನ್ನು ಅಸ್ತವ್ಯಸ್ತ ಮಾಡುತ್ತಿದ್ದಾರೆ ಅಕ್ರಮ ವಲಸಿಗರು.‌ ವಿಪರ್ಯಾಸವೆಂದರೆ ಇಲ್ಲಿನ ರಾಜಕಾರಣಿಗಳು ಇವರಿಗೆ ಆಧಾರ್ ಕಾರ್ಡ್ ನಿಂದ ಹಿಡಿದು ರೇಷನ್ ಕಾರ್ಡ್ ವರೆಗೆ ಎಲ್ಲ ರೀತಿಯ ಸರ್ಕಾರಿ ಸೌಲಭ್ಯಗಳನ್ನು ದೊರೆಯುವಂತೆ ಮಾಡಿದ್ದಾರೆ.

ಇಷ್ಟಕ್ಕೆಲ್ಲ ಕಾರಣ ಅಕ್ರಮ ವಲಸಿಗರ ಮತಗಳು. ಹೌದು, ಅಕ್ರಮ ವಲಸಿಗರನ್ನು ಮತಬ್ಯಾಂಕ್ ಗಳಾಗಿ ಮಾಡಿ ಕೊಂಡಿರುವ ಕಾರಣ ಇವರಿಗೆ ಉಚಿತ ರೇಷನ್ ಸೇರಿದಂತೆ ಎಲ್ಲಾ ರೀತಿಯ ಸರ್ಕಾರಿ ಸೌಲಭ್ಯಗಳು ದೊರೆಯುತ್ತವೆ. ಇಷ್ಟು ಸಾಲದು ಎಂಬಂತೆ ಬಹಳ ಕಡಿಮೆ ದುಡ್ಡಿಗೆ ದಿನಗೂಲಿ ಮಾಡುವ ಕಾರಣ ಹಲವಾರು ಜನರು ಇವರಿಂದ ಉದ್ಯೋಗ ಕಳೆದು ಕೊಂಡಿದ್ದಾರೆ. ಅಸ್ಸಾಂ, ಪಶ್ಚಿಮ ಬಂಗಾಳ, ಕರ್ನಾಟಕ ಅದರಲ್ಲಿಯೂ ಬೆಂಗಳೂರು ಸೇರಿದಂತೆ ದೇಶದ ವಿವಿಧೆಡೆ ಅಕ್ರಮ ವಲಸಿಗರ ಕಾಟ ಹೆಚ್ಚಾಗಿದೆ. ಹೀಗಿರುವಾಗ ಇದನ್ನೆಲ್ಲ ಗಮನಿಸಿದ ಕೇಂದ್ರ ಸರ್ಕಾರವು ಅಕ್ರಮ ವಲಸಿಗರನ್ನು ಮುಲಾಜಿಲ್ಲದೇ ಯಾವ ವಿರೋಧ ಪಕ್ಷಗಳು ಟೀಕೆ ಮಾಡಿದರೂ ಕೂಡ ದೇಶದಿಂದ ಹೊರ ಹಾಕುತ್ತೇವೆ ಎಂಬ ಆದೇಶ ಹೊರಡಿಸಿದ ಮೇಲೆ ಬೆಂಗಳೂರಿನಲ್ಲಿ ನಡೆಯುತ್ತಿರುವ ಘಟನೆಯ ಬಗ್ಗೆ ನೀವು ತಿಳಿದು ಕೊಳ್ಳಲೇಬೇಕು.

ಹೌದು, ಈ ಕುರಿತು ಕನ್ನಡದ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಒಂದಾದ ಸುವರ್ಣ ನ್ಯೂಸ್ ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಅಕ್ರಮ ವಲಸಿಗರು ನರೇಂದ್ರ ಮೋದಿರವರ ಕಾನೂನುನಿಂದ ಸ್ವಯಂ ಪ್ರೇರಿತವಾಗಿ ಎಚ್ಚೆತ್ತುಕೊಂಡಿರುವ ಜಮೀನಿನ ಮಾಲೀಕರು ತಮ್ಮ ಜಮೀನುಗಳಲ್ಲಿ ನೆಲೆಸಿರುವ ಅಕ್ರಮ ವಲಸಿಗರ ದಾಖಲೆಗಳನ್ನು ಕೇಳಲು ಆರಂಭಿಸಿದ್ದಾರೆ. ಅದೇ ರೀತಿ ಬೆಂಗಳೂರಿನಲ್ಲಿರುವ ಹಲವಾರು ಮಾಲೀಕರು ತಮ್ಮ ಜಮೀನಿನಲ್ಲಿ ನೆಲೆಸಿರುವ ವಲಸಿಗರನ್ನು ದಾಖಲೆ ಕೇಳಿದ ತಕ್ಷಣ ರಾತ್ರೋ ರಾತ್ರಿ ಎಲ್ಲರೂ ತಮ್ಮ ತಮ್ಮ ಗುಡಿಸಲುಗಳನ್ನು ಖಾಲಿ ಮಾಡಿಕೊಂಡು ಓಡಿ ಹೋಗಿದ್ದಾರೆ ಎಂಬ ಸುದ್ದಿ ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲಿ ಲಕ್ಷಾಂತರ ಸಂಖ್ಯೆಯಲ್ಲಿ ನೆಲೆಸಿರುವ ಅಕ್ರಮ ವಲಸಿಗರು ಈಗಾಗಲೇ ತಮ್ಮ ನೆಲೆಯನ್ನು ಖಾಲಿ ಮಾಡುತ್ತಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ. ಈ ಮೂಲಕ ನರೇಂದ್ರ ಮೋದಿ ಅವರಿಗೆ ಮೊದಲ ಹೆಜ್ಜೆಯಲ್ಲಿ ಭರ್ಜರಿ ಯಶಸ್ಸು ಗಳಿಸಿದ್ದು ಮುಂದೆ ಯಾವ ರೀತಿಯ ಆದೇಶಗಳ ಮೂಲಕ ಅಕ್ರಮ ವಲಸಿಗರ ಹೆಡೆಮುರಿಕಟ್ಟಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.