ಮತ್ತೊಮ್ಮೆ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿ ! ಈ ಕನ್ನಡತಿ ಮತ್ತೊಮ್ಮೆ ಮಾಡಿದ್ದೇನು ಗೊತ್ತಾ?

ಮತ್ತೊಮ್ಮೆ ಕನ್ನಡಿಗರ ಮನಗೆದ್ದ ಅನುಷ್ಕಾ ಶೆಟ್ಟಿ ! ಈ ಕನ್ನಡತಿ ಮತ್ತೊಮ್ಮೆ ಮಾಡಿದ್ದೇನು ಗೊತ್ತಾ?

ಕನ್ನಡತಿ ಅನುಷ್ಕಾ ಶೆಟ್ಟಿ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ದಕ್ಷಿಣ ಭಾರತದ ಖ್ಯಾತ ನಟಿಯರಲ್ಲಿ ಒಬ್ಬರು. ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಅನುಷ್ಕಾ ಶೆಟ್ಟಿ ರವರಿಗೆ ತನ್ನ ತಾಯಿ ನಾಡು ಕರ್ನಾಟಕದ ಬಗ್ಗೆ ಇರುವ ಅಭಿಮಾನ ಕಿಂಚಿತ್ತೂ ಇಲ್ಲಿಯವರೆಗೂ ಕಡಿಮೆಯಾಗಿಲ್ಲ ಎಂಬುದನ್ನು ಈ ಹಿಂದೆ ಹಲವಾರು ಬಾರಿ ಸಾಬೀತು ಮಾಡಿದ್ದಾರೆ. ಪರ ಭಾಷಾ ಚಿತ್ರಗಳಲ್ಲಿ ಅವಕಾಶ ಸಿಕ್ಕ ತಕ್ಷಣ ಕನ್ನಡವೇ ಮರೆತು ಹೋದಂತೆ ಮಾತನಾಡುವ ಹಲವಾರು ಜನರ ನಡುವೆ ಕನ್ನಡ ಚಿತ್ರರಂಗದಲ್ಲಿ ಒಮ್ಮೆಯೂ ಅವಕಾಶ ಪಡೆಯದೇ ಇತರ ಚಿತ್ರರಂಗದಲ್ಲಿ ಸ್ಟಾರ್ ನಟಿಯಾಗಿ ಮಿಂಚಿದರೂ ಕೂಡ ಇವರ ಆದ್ಯತೆ ಎಂದೆಂದಿಗೂ ಕನ್ನಡ ಆಗಿರುತ್ತದೆ ಎಂದು ನಮಗೆಲ್ಲರಿಗೂ ತಿಳಿದೇ ಇದೆ.

ಇದೀಗ ಇದೇ ಅನುಷ್ಕಾ ಶೆಟ್ಟಿ ಅವರು ಮತ್ತೊಮ್ಮೆ ಕನ್ನಡಿಗರ ಮನ ಗೆದ್ದಿದ್ದಾರೆ, ಹೌದು ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ತಮ್ಮ ಅಭಿಮಾನಿಗಳು ಹೆಚ್ಚು ಇದ್ದಾರೆ ಎಂದು ತಿಳಿದಿದ್ದರೂ ತಿಳಿದಿದ್ದರೂ ಕೂಡ ಸಂಕ್ರಾಂತಿ ಹಬ್ಬದ ಪ್ರಯುಕ್ತ ಶುಭಾಶಯ ಕೋರಲು ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಅನುಷ್ಕಾ ಶೆಟ್ಟಿ ರವರು ಜಾಗ ನೀಡಿದ್ದು ಮಾತ್ರ ಕನ್ನಡಕ್ಕೆ. ಹೌದು ಕನ್ನಡದಲ್ಲಿ ಸಂಕ್ರಾಂತಿ ಹಬ್ಬಕ್ಕೆ ತಮ್ಮ ಅಭಿಮಾನಿಗಳಿಗೆ ಶುಭಾಶಯ ಕೋರಿರುವ ಅನುಷ್ಕಾ ಅನುಷ್ಕಾ ಶೆಟ್ಟಿ ರವರ ಪೋಸ್ಟ್ ಕೆಳಗಡೆ ಇದೆ, ಈ ಪೋಸ್ಟ್ ಇದೀಗ ವೈರಲ್ ಆಗಿದ್ದು ಅನುಷ್ಕಾ ಶೆಟ್ಟಿ ರವರ ಕನ್ನಡ ಪ್ರೇಮಕ್ಕೆ ಮತ್ತೊಮ್ಮೆ ಕನ್ನಡಿಗರು ಧನ್ಯವಾದ ತಿಳಿಸಿದ್ದಾರೆ.