ಜಮೀರ್ ರವರಿಗೆ ಬಾರಿ ಮುಜುಗರ ! ಸೋಮಶೇಖರ್ ರೆಡ್ಡಿ ರವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದಿದ್ದಕ್ಕೆ ಬಳ್ಳಾರಿ ಕಾಂಗ್ರೆಸ್ ಹೇಳಿದ್ದೇನು ಗೊತ್ತಾ??

ಜಮೀರ್ ರವರಿಗೆ ಬಾರಿ ಮುಜುಗರ ! ಸೋಮಶೇಖರ್ ರೆಡ್ಡಿ ರವರ ಮನೆ ಮುಂದೆ ಪ್ರತಿಭಟನೆ ಮಾಡುತ್ತೇನೆ ಎಂದಿದ್ದಕ್ಕೆ ಬಳ್ಳಾರಿ ಕಾಂಗ್ರೆಸ್ ಹೇಳಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಪೌರತ್ವ ತಿದ್ದುಪಡಿ ಮಸೂದೆಯ ಕುರಿತು ಎಲ್ಲೆಡೆ ಪ್ರತಿಭಟನೆ ನಡೆಯುತ್ತಿರುವಾಗ ಬಿಜೆಪಿ ಪಕ್ಷದ ಶಾಸಕ ಸೋಮಶೇಖರ ರೆಡ್ಡಿ ರವರು ಕಠಿಣ ಮಾತುಗಳ ಮೂಲಕ ಜಮೀರ್ ಅಹಮದ್ ರವರು ಸೇರಿದಂತೆ ಉಳಿದ ರಾಜಕೀಯ ನಾಯಕರನ್ನು ಉದ್ದೇಶಿಸಿ ಮಾತನಾಡಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಕಾಂಗ್ರೆಸ್ ಶಾಸಕ ಜಮೀರ್ ಅಹಮದ್ ರವರು ಮುಸ್ಲಿಮರನ್ನು ವಿರೋಧಿಸಿ ಸೋಮಶೇಖರ್ ರೆಡ್ಡಿ ರವರು ಮಾತನಾಡಿ ದ್ದಾರೆ ಎಂದು ಹೇಳಿಕೆ ನೀಡಿ, ನಾನು ಬೆಂಗಳೂರಿನಿಂದ ಮಾತನಾಡುವುದಿಲ್ಲ ನೇರವಾಗಿ ಬಳ್ಳಾರಿಗೆ ಬಂದು ಸೋಮಶೇಖರ ರೆಡ್ಡಿ ರವರ ಮನೆ ಮುಂದೆ ಕೂತು ಪ್ರತಿಭಟನೆ ನಡೆಸುತ್ತೇವೆ ಎಂದು ಜಿಲ್ಲಾಧಿಕಾರಿಗೆ ಪ್ರತಿಭಟನೆಗೆ ಅನುಮತಿ ನೀಡುವಂತೆ ಮನವಿ ಮಾಡಿ ಪತ್ರ ಕೂಡ ಬರೆದಿದ್ದರು. ಆದರೆ ಇದೀಗ ಜಮೀರ್ ಅಹ್ಮದ್ ರವರಿಗೆ ಭಾರಿ ಮುಜುಗರ ಉಂಟಾಗುವಂತಹ ಘಟನೆ ನಡೆದಿದೆ, ಬಳ್ಳಾರಿಯಲ್ಲಿ ನಡೆಯುವ ಪ್ರತಿಭಟನೆಗೆ ಅನುಮತಿ ನೀಡಬಾರದು ಎಂದು ಬಳ್ಳಾರಿ ಕಾಂಗ್ರೆಸ್ ಪಕ್ಷದ ಪ್ರಮುಖ ನಾಯಕರು MLC ಕೆ ಸಿ ಕೊಂಡಯ್ಯ ನವರ ನೇತೃತ್ವದಲ್ಲಿ ಸಿಡಿದೆದ್ದಿದ್ದಾರೆ.

ಕಳೆದ ಕೆಲವು ವರ್ಷಗಳ ಹಿಂದೆ 2012 ರಲ್ಲಿ ಜಮೀರ್ ಅಹಮದ್ ರವರು ಬಳ್ಳಾರಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡಿದ್ದರು, ಬಳ್ಳಾರಿಯಲ್ಲಿ ಜನತೆ ಧರ್ಮಗಳ ನಡುವೆ ಶಾಂತಿ ಹಾಗೂ ಸೌಹಾರ್ದತೆಯಿಂದ ಬಾಳುತ್ತಿದ್ದೇವೆ. ಜಮೀರ್ ಅಹಮದ್ ರವರು ಪ್ರಚೋದನಕಾರಿ ಭಾಷಣ ಮಾಡಿದರೆ ನಮಗೆಲ್ಲರಿಗೂ ತೊಂದರೆ ಉಂಟಾಗುತ್ತದೆ. ಪಕ್ಷಕ್ಕೂ ಕೂಡ ಬಹಳ ಪೆಟ್ಟು ಬೀಳುತ್ತದೆ. ಆದ ಕಾರಣದಿಂದಾಗಿ ಯಾವುದೇ ಕಾರಣಕ್ಕೂ ಜಮೀರ್ ಅಹಮದ್ ರವರು ಬಳ್ಳಾರಿಗೆ ಬರಲು ಅನುಮತಿ ನೀಡಬಾರದು ಎಂದು ಪೊಲೀಸರಿಗೆ ಪತ್ರ ಬರೆದದ್ದಷ್ಟೇ ಅಲ್ಲದೆ, ಹೈಕಮಾಂಡ್ ಗೆ ಮನವಿ ಮಾಡಿ ಪತ್ರಿಕಾ ಪ್ರಕಟಣೆ ನೀಡಿದ್ದಾರೆ. 2012ರಲ್ಲಿ ಶ್ರೀರಾಮುಲುರವರ ವಿರುದ್ಧ ಪ್ರಚಾರ ನಡೆಸಲು ಹೋಗಿ ಪ್ರಚೋದನಕಾರಿ ಭಾಷಣ ಮಾಡುವ ಮೂಲಕ ಜಮೀರ್ ಅಹಮದ್ ರವರು ಬಳ್ಳಾರಿ ಜನತೆಯ ಕೆಂಗಣ್ಣಿಗೆ ಗುರಿಯಾಗಿದ್ದ ಘಟನೆಯನ್ನು ನಾವು ಇಲ್ಲಿ ಸ್ಮರಿಸಬಹುದು.