ಪೊಲೀಸರು ಬಿಡುಗಡೆ ಮಾಡಿದ ವಿಡಿಯೋ ನೋಡಿ ಪ್ರಶ್ನೆಗಳ ಸುರಿಮಳೆ ಸುರಿಸಿದ ಕುಮಾರಸ್ವಾಮಿ ! ಕುಮಾರಸ್ವಾಮಿ ವಿರುದ್ಧ ರೊಚ್ಚಿಗೆದ್ದ ಜನ ! ನಿಮ್ಮ ಅಭಿಪ್ರಾಯ ತಿಳಿಸಿ

ಪೊಲೀಸರು ಬಿಡುಗಡೆ ಮಾಡಿದ ವಿಡಿಯೋ ನೋಡಿ ಪ್ರಶ್ನೆಗಳ ಸುರಿಮಳೆ ಸುರಿಸಿದ ಕುಮಾರಸ್ವಾಮಿ ! ಕುಮಾರಸ್ವಾಮಿ ವಿರುದ್ಧ ರೊಚ್ಚಿಗೆದ್ದ ಜನ ! ನಿಮ್ಮ ಅಭಿಪ್ರಾಯ ತಿಳಿಸಿ

ಮಂಗಳೂರಿನಲ್ಲಿ ಇತ್ತೀಚೆಗೆ ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಪ್ರತಿಭಟನೆಯು ಅಶಾಂತಿಯ ಹಾದಿಯಲ್ಲಿ ತೆರಳಿದಾಗ, ನಡೆಯುವ ಅವಘಡಗಳನ್ನು ತಡೆಯಲು ಪೊಲೀಸರು ಗೋಲಿಬಾರ್ ನಡೆಸಿದ್ದರು. ಇದರ ಕುರಿತು ಪರ-ವಿರೋಧದ ಹೇಳಿಕೆಗಳು ಸಾಕಷ್ಟು ಕೇಳಿಬಂದಿದ್ದವು.

ಇದೇ ಕಾರಣದಿಂದ ಪೊಲೀಸರು ಪರಿಸ್ಥಿತಿ ಯಾವ ರೀತಿ ನಮ್ಮ ಕೈತಪ್ಪಿ ಹೋಗಿತ್ತು ಎಂಬುದನ್ನು ತೋರಿಸಲು ಹಲವಾರು ಮನೆಗಳ ಸಿಸಿಟಿವಿ ಹಾಗೂ ಮೊಬೈಲ್ಗಳಲ್ಲಿ ಸೆರೆ ಹಿಡಿದ ದೃಶ್ಯಗಳನ್ನು ತಮಗೆ ಕಳಿಸುವಂತೆ ಮನವಿ ಮಾಡಿದ ಬಳಿಕ ಸಾಮಾನ್ಯ ಜನರೇ ಕಳುಹಿಸಿರುವ ವಿಡಿಯೋಗಳನ್ನು ಇಂದು ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಮಾಡಿದ ತಕ್ಷಣ ಕುಮಾರಸ್ವಾಮಿರವರ ಪ್ರಶ್ನೆಗಳ ಸುರಿಮಳೆ ಯನ್ನು ಸುರಿಸಿದ್ದಾರೆ. ಆದರೆ ಈ ಪ್ರಶ್ನೆಗಳನ್ನು ಕೇಳಿದ ತಕ್ಷಣ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಜನರು ಕುಮಾರಸ್ವಾಮಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಒಮ್ಮೆ ಸಂಪೂರ್ಣ ಪ್ರಶ್ನೆಗಳನ್ನು ಓದಿ, ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ.ಮೊದಲನೆಯದಾಗಿ ಈ ವಿಡಿಯೋ ಮಾನಗಳೂರಿನದ್ದೇ ಎಂಬುದಕ್ಕೆ ಸಾಕ್ಷಿಯೇನು ಎಂದು ಪ್ರಶ್ನೆ ಮಾಡಿದ್ದಾರೆ.ತದನಂತರ ಈ ಕೆಳಗಿನ ಟ್ವೀಟ್ ಗಳನ್ನೂ ಮಾಡಿದ್ದಾರೆ.