ಸೋಲೊಪ್ಪಿಕೊಂಡು ಮಂಡಿಯೂರಿದ ಶರಣಗೌಡ ! ಬಿಎಸ್ವೈ ರವರ ವಿರುದ್ಧ ತೊಡೆ ತಟ್ಟಿದ್ದ ಶರಣಗೌಡ ಮಾಡಿದ್ದೇನು ಗೊತ್ತಾ??

ಸೋಲೊಪ್ಪಿಕೊಂಡು ಮಂಡಿಯೂರಿದ ಶರಣಗೌಡ ! ಬಿಎಸ್ವೈ ರವರ ವಿರುದ್ಧ ತೊಡೆ ತಟ್ಟಿದ್ದ ಶರಣಗೌಡ ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ, ಗುರುಮಿಟಕಲ್ ಶಾಸಕ ನಾಗನಗೌಡರ ರವರ ಪುತ್ರ ಶರಣಗೌಡ ಕಂದುಕುರ್ ಅವರು ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆಗೆ ಗುರಿಯಾಗಿದ್ದರು. ಬಿಜೆಪಿ ಪಕ್ಷದ ವಿರುದ್ಧ ತೊಡೆ ತಟ್ಟಿ ಆಪರೇಷನ್ ಕಮಲ ನಡೆದಿದೆ ಎನ್ನಲಾಗಿದ್ದ ಆಡಿಯೋ ರಿಲೀಸ್ ಮಾಡಿ ಎಂದು ಸದ್ದು ಮಾಡಿದ್ದ ಶರಣಗೌಡ ರವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಆಪರೇಷನ್ ಕಮಲದ ಆಡಿಯೋ ರಿಲೀಸ್ ಮಾಡುವ ಮೂಲಕ ಇಡೀ ದೇಶವನ್ನು ತಲ್ಲಣಗೊಳಿಸಿದ್ದ ಶರಣಗೌಡ ರವರು ನಿಮಗೆಲ್ಲರಿಗೂ ತಿಳಿದಿರುವಂತೆ ಜೆಡಿಎಸ್ ಪಕ್ಷದ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಣೆ ಮಾಡುತ್ತಿದ್ದರು. ಕೇವಲ ಆಡಿಯೋ ಪ್ರಕರಣದಲ್ಲಿ ಅಷ್ಟೇ ಅಲ್ಲದೆ ತದ ನಂತರ ಕೆಲವು ಸರ್ಕಾರದ ವಿರುದ್ಧ ಹೋರಾಟಗಳಲ್ಲಿಯೂ ಭಾಗಿಯಾದ ಶರಣಗೌಡ ರವರು ಏಕಾಏಕಿ ಬಿಎಸ್ ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿದರು. ಕರ್ನಾಟಕದಲ್ಲಿ ಬಿಜೆಪಿ ಪಕ್ಷವನ್ನು ಇಲ್ಲದಂತೆ ಮಾಡುತ್ತೇವೆ, ಅಧಿಕಾರದಿಂದ ಕೆಳಗಿಳಿಸಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರುತ್ತೇವೆ ಎಂದೆಲ್ಲ ಕೆಲವೊಂದು ಹೋರಾಟಗಳಲ್ಲಿ ಕಠಿಣ ಮಾತುಗಳ ಮೂಲಕ ಸರ್ಕಾರವನ್ನು ಟೀಕೆ ಮಾಡಿದ್ದರು.

ಆದರೆ ಇದೀಗ ಶರಣಗೌಡ ರವರು ಉಪಚುನಾವಣೆಯಲ್ಲಿ ಜೆಡಿಎಸ್ ಪಕ್ಷವು ಹಲವಾರು ಕ್ಷೇತ್ರಗಳಲ್ಲಿ ಠೇವಣಿ ಕಳೆದುಕೊಂಡು ತನ್ನ ಭದ್ರಕೋಟೆಯಲ್ಲಿ ಸೋಲನ್ನು ಕಂಡ ನಂತರ, ಒಂದು ಸ್ಥಾನ ಗೆಲ್ಲಲಾಗದೇ ಇರುವ ಕಾರಣ ಜೆಡಿಎಸ್ ಪಕ್ಷದ ಯುವ ಘಟಕದ ಮಹಾ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಸರ್ಕಾರವನ್ನು ಉರುಳಿಸುವ ಹಾಗೂ ಮತ್ತೊಮ್ಮೆ ಜೆಡಿಎಸ್ ಪಕ್ಷವನ್ನು ಕಟ್ಟಿ ಬೆಳೆಸುವ ನಿಟ್ಟಿನಲ್ಲಿ ತಮ್ಮ ಪ್ರಯತ್ನವನ್ನು ಸಂಪೂರ್ಣವಾಗಿ ಪಕ್ಕಕ್ಕೆ ಇಡುವುದು ಬಹುತೇಕ ಖಚಿತವಾಗಿದೆ. ಆದರೆ ರಾಜೀನಾಮೆ ಪತ್ರದಲ್ಲಿ ನಾನು ಇನ್ನು ಮುಂದೆ ಜೆಡಿಎಸ್ ಕಾರ್ಯಕರ್ತನಾಗಿ ಕಾರ್ಯನಿರ್ವಹಣೆ ಮಾಡುತ್ತೇನೆ ಎಂದು ಹೇಳಿದ್ದಾರೆ. ಇದೀಗ ಈ ರಾಜೀನಾಮೆ ಪತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಯಡಿಯೂರಪ್ಪನವರ ವಿರುದ್ಧ ತೊಡೆ ತಟ್ಟಿದ್ದ ಶರಣಗೌಡ ರವರು ಇಂದು ತಾವೇ ಸೋಲನ್ನು ಒಪ್ಪಿಕೊಂಡು ಪಕ್ಕಕ್ಕೆ ಸರಿದಿರುವುದು ಸ್ವಾಗತಾರ್ಹ ಎಂದು ವ್ಯಂಗ್ಯದ ಮಾತುಗಳು ಕೇಳಿಬಂದಿವೆ.