ಮೋದಿ ರವರ 56 ಇಂಚಿನ ಎದೆಗಾರಿಕೆ ಟೀಕೆ ಮಾಡಿ ಸವಾಲ್ ಎಸೆದ ಚಿದು ಪುತ್ರ ! ಹೇಳಿದ್ದೇನು ಗೊತ್ತಾ??

ಮೋದಿ ರವರ 56 ಇಂಚಿನ ಎದೆಗಾರಿಕೆ ಟೀಕೆ ಮಾಡಿ ಸವಾಲ್ ಎಸೆದ ಚಿದು ಪುತ್ರ ! ಹೇಳಿದ್ದೇನು ಗೊತ್ತಾ??

ಇಂದು ಇದೇ ಮೊಟ್ಟಮೊದಲ ಬಾರಿಗೆ ತಿಹಾರ್ ಜೈಲಿನಲ್ಲಿ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಹಾಗೂ ಕೇಂದ್ರದ ಮಾಜಿ ಹಣಕಾಸು ಸಚಿವ ಚಿದಂಬರಂ ರವರು ತಮ್ಮ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದಾರೆ. ಇಷ್ಟು ದಿವಸ ಬರೋಬ್ಬರಿ ಇಪ್ಪತ್ತಕ್ಕೂ ಹೆಚ್ಚು ಬಾರಿ ಜಾಮೀನು ಪಡೆದು ಕೊಂಡಿರುವ ಪಿ ಚಿದಂಬರಂ ರವರು ಈ ಬಾರಿ ತಮ್ಮ ಹುಟ್ಟು ಹಬ್ಬವನ್ನು ಆಚರಿಸಲು ಬೇಲ್ ಕೇಳಿದರೂ ಸಹ ನ್ಯಾಯಾಲಯ ಜನಸಾಮಾನ್ಯರಿಗೆ ತಪ್ಪು ಸಂದೇಶ ರವಾನೆ ಮಾಡಿದಂತಾಗುತ್ತದೆ, ಜನರಿಗೆ ನ್ಯಾಯಾಲಯದ ಮೇಲೆ ಇರುವ ಗೌರವ ವನ್ನು ಎತ್ತಿ ಹಿಡಿಯಲು ಯಾವುದೇ ಕಾರಣಕ್ಕೂ ಜಾಮೀನು ನೀಡಲು ಸಾಧ್ಯವೇ ಇಲ್ಲ ಎಂದು ಸ್ಪಷ್ಟ ಪಡಿಸಿ ಬಂಧನದ ಅವಧಿಯನ್ನು ಹೆಚ್ಚಳ ಮಾಡಿ, ಪಿ ಚಿದಂಬರಂ ರವರಿಗೆ ಶಾಕ್ ನೀಡಿತ್ತು. ಆದ ಕಾರಣದಿಂದ ಈ ಬಾರಿ ಪಿ ಚಿದಂಬರಂ ರವರು ತಮ್ಮ ಹುಟ್ಟು ಹಬ್ಬವನ್ನು ಜೈಲಿನಲ್ಲಿ ಆಚರಿಸ ಬೇಕಾದ ಪರಿಸ್ಥಿತಿ ಎದುರಾಗಿದೆ.

ಇದೇ ಕಾರಣದಿಂದ ಬೇಸರ ಗೊಂಡಿರುವ ಪಿ ಚಿದಂಬರಂ ರವರು ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಕಿಡಿಕಾರಿದ್ದಾರೆ ಇನ್ನೂ ಇವರ ಹಾದಿಯನ್ನು ಅನುಸರಿಸಿರುವ ಪಿ ಚಿದಂಬರಂ ರವರ ಪುತ್ರ ಹಾಗೂ ತಮಿಳುನಾಡಿನ ಸಂಸದ ಕಾರ್ತಿಕ್ ರವರು ತಮ್ಮ ಆಕ್ರೋಶದ ಮಾತುಗಳಲ್ಲಿ ತಮ್ಮ ತಂದೆ ಪಿ ಚಿದಂಬರಂ ಅವರಿಗೆ ಶುಭಾಶಯ ಕೋರುವ ಸಂದರ್ಭದಲ್ಲಿ ಮೋದಿ ರವರ 56 ಇಂಚಿನ ಎದೆಗಾರಿಕೆಯ ಬಗ್ಗೆ ಟೀಕೆ ಮಾಡುವ ಸಂದರ್ಭದಲ್ಲಿ ಸವಾಲೆಸೆದಿದ್ದಾರೆ. ಹೌದು, 56 ಇಂಚಿನ ಎದೆಗಾರಿಕೆ ಎಂದರೇ ಅದು ನರೇಂದ್ರ ಮೋದಿ ಅವರ ವಾಕ್ಯ. ಇದೇ ವಿಷಯವನ್ನು ಕೆಣಕಿರುವ ಕಾರ್ತಿಕ್ ರವರು, ಯಾವುದೇ 56 ಇಂಚಿನ ಎದೆಗಾರಿಕೆ ನಿಮ್ಮನ್ನು ತಡೆಯಲು ಸಾಧ್ಯವಿಲ್ಲ ಎಂದಿದ್ದಾರೆ. ನಿಮಗೆ ಇಂದು 74 ವರ್ಷಗಳು ತುಂಬಿವೆ, ನೀವು ಇಲ್ಲಿಯವರೆಗೂ ಯಾವುದೇ ವಿಷಯವನ್ನು ಅದ್ದೂರಿ ಆಚರಣೆ ಮಾಡಿರಲಿಲ್ಲ, ಇಂದು ಇಡೀ ದೇಶದಲ್ಲಿ ಚಿಕ್ಕ ಚಿಕ್ಕ ಸಂಭ್ರಮಗಳನ್ನು ಅದ್ದೂರಿಯಾಗಿ ಆಚರಣೆ ಮಾಡುತ್ತಾರೆ ಎಂದಿದ್ದಾರೆ.