ಅಬ್ಬಾ, ಚಿದಂಬರಂ ಒಂಟಿಯಲ್ಲ, ಜೈಲಿನಲ್ಲಿ ೬ ತಿಂಗಳು ಕಾಲ ಚಿದಂಬರಂ ರವರಿಗೆ ಜೊತೆಯಾಗಲಿರುವ ಶಾಸಕ ಯಾರು ಗೊತ್ತಾ?

ಅಬ್ಬಾ, ಚಿದಂಬರಂ ಒಂಟಿಯಲ್ಲ,ಜೈಲಿನಲ್ಲಿ ೬ ತಿಂಗಳು ಕಾಲ ಚಿದಂಬರಂ ರವರಿಗೆ ಜೊತೆಯಾಗಲಿರುವ ಶಾಸಕ ಯಾರು ಗೊತ್ತಾ?

ಕಾಂಗ್ರೆಸ್ ಸರ್ಕಾರದ ಮಾಜಿ ಹಣಕಾಸು ಸಚಿವ ಚಿದಂಬರ ರವರು ಬಂಧನವಾದ ಕ್ಷಣದಿದಂಲೂ ಸಾಮಾಜಿಕ ಜಾಲತಾಣಗಳಲ್ಲಿ, ಪಾಪ ಚಿದಂಬರಂ ರವರು ಜೈಲಿನಲ್ಲಿ ಒಬ್ಬಂಟಿಯಾಗಿದ್ದಾರೆ. ದಯವಿಟ್ಟು ಯಾರನ್ನಾದರೂ ತಿಹಾರ್ ಜೈಲಿಗೆ ಕಳಿಸಿಕೊಡಿ ಎಂದು ಟ್ರೊಲ್ ಗಳು ಹರಿದಾಡುತ್ತಿವೆ. ಅದರಲ್ಲಿಯೂ ಡಿ ಕೆ ಶಿವ್ ಕುಮಾರ್ ರವರ ಬಂಧನ ವಾದ ಮೇಲೆ, ಡಿ ಕೆ ಶಿವ್ ಕುಮಾರ್ ಅವರನ್ನು ಯಾಕೆ ಅಲ್ಲಿಗೆ ಕಳಿಸಿಕೊಡಬಾರದು ಎಂದು ಟ್ರೊಲ್ ಮಾಡಿದ್ದರು. ಅಷ್ಟೇ ಯಾಕೆ ಈ ವಿಷ್ಯದಲ್ಲಿ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ರವರನ್ನು ಎಳೆದು ತಂದು, ನೀನು ಭಯ ಬೀಳಬೇಡ ಅಲ್ಲೇ ಇರು ನಾವು ಇನ್ನೂ ಸ್ವಲ್ಪ ದಿನದಲ್ಲೇ ಅಲ್ಲಿಗೆ ಬರುತ್ತೇವೆ ಎಂದೆಲ್ಲ ಚಿತ್ರಗಳನ್ನು ಎಡಿಟ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದು ಬಿಡುತ್ತಿದ್ದಾರೆ.

ಹೀಗಿರುವಾಗ ಕೊನೆಗೂ ಇದೇ ತಿಹಾರ್ ಜೈಲಿಗೆ ಶಾಸಕರೊಬ್ಬರು ಹೋಗುತ್ತಿರುವ ಕಾರಣ, ಕೊನೆಗೂ ಇದೀಗ ಚಿದಂಬರಂ ರವರಿಗೆ ಕಂಪನಿ ಸಿಕ್ಕಿದಂತಾಗಿದೆ. ಹೌದು, ಕಳೆದ 2015 ರಲ್ಲಿ ದೆಹಲಿಯಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರದ ವೇಳೆಯಲ್ಲಿ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಆಪ್ ಶಾಸಕ ಸೋಮ್ ದತ್ ಅವರನ್ನು ಅಪರಾಧಿ ಎಂದು ನ್ಯಾಯಾಲಯ ಪರಿಗಣಿಸಿದೆ. ಇದರ ವಿರುದ್ಧ ಸಲ್ಲಿಸಿದ್ದ ಮನವಿಯನ್ನು ತಿರಸ್ಕಾರ ಮಾಡಿ, ತಿಹಾರ್ ಜೈಲಿನಲ್ಲಿ 6 ತಿಂಗಳ ಜೈಲು ಶಿಕ್ಷೆ ವಿಧಿಸುವಂತೆ ಆದೇಶ ಹೊರಡಿಸಲಾಗಿದೆ. ಇದರಿಂದ ಕೊನೆಗೂ ಚಿದಂಬರಂ ರವರಿಗೆ ಕಂಪನಿ ಸಿಕ್ಕಿಂದಂತಾಗಿದೆ.ಇದರಿಂದ ಅಧಿಕಾರದಲ್ಲಿ ಇರುವ ಕೇಜ್ರಿವಾಲ್ ರವರಿಗೆ ಬಾರಿ ಮುಖಭಂಗ ಉಂಟಾಗಿದೆ, ಸಾಮಾನ್ಯರ ಮೇಲೆ ಶಾಸಕರೇ ಹಲ್ಲೆ ನಡೆಸುತ್ತಿರುವ ಕಾರಣ, ಎಲ್ಲಿದೆ ಭದ್ರತೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ ಹಾಗೂ ಈ ಕೂಡಲೇ ಶಾಸಕರನ್ನು ಉಚ್ಚಾಟಿಸಬೇಕು ಎಂದು ಒತ್ತಾಯ ಮಾಡಿದ್ದಾರೆ.