(ನೈಜ ಘಟನೆ) ದುರಹಂಕಾರ ಮಿತಿ ಮೀರಿದಾಗ ಅಡಗಿಸಲು ಬಂದ ಭಗವಂತ …! !

(ನೈಜ ಘಟನೆ) ದುರಹಂಕಾರ ಮಿತಿ ಮೀರಿದಾಗ ಅಡಗಿಸಲು ಬಂದ ಭಗವಂತ …! !

ದುರಹಂಕಾರ ಮಿತಿ ಮೀರಿದಾಗ ಅಡಗಿಸಲು ಬಂದ ಭಗವಂತ ಯಾವುದಾದರೂ ಒಂದು ರೂಪದಲ್ಲಿ ಬಂದೆ ಬರುತ್ತಾನೆ. ಇದಕ್ಕೆ ಉದಾಹರಣೆ ಎಂಬಂತೆ ಗುತ್ತಲು (ಮಂಡ್ಯ) ಗ್ರಾಮದಲ್ಲಿ ನಡೆದಿದೆ. ಈ ಊರಿನ ದೇವಾಲಯದ ಪೂಜಾರಿಯೊಬ್ಬ 5 ವರ್ಷಗಳಿಂದ ದೇವಾಲಯ ಬಿಟ್ಟು ಮನೆಯಲ್ಲೇಯೇ ದೇವರ ವಿಗ್ರಹ ಇಟ್ಟುಕೊಂಡು ಮೈಮೇಲೆ ದೇವರು ಬರುತ್ತದೆ ಎಂದು ಜನರಿಗೆ ಹೇಳಿಕೊಂಡು ಯಾಮಾರಿಸಿಕೊಂಡು ಹಾಗೂ ಇನ್ನಿತರ ಮಾಟ ಮಂತ್ರ ವಿದ್ಯೆಗಳಿಂದ ಜನರನ್ನು ನಂಬಿಸಿಕೊಂಡು ಮೋಸ ಮಾಡುತ್ತಿದ್ದ. ಅಷ್ಟೇ ಅಲ್ಲದೆ ದೇವಾಲಯದಲ್ಲಿ ದೇವರನ್ನು ಪೂಜಿಸಲು ಯಾರಿಗೂ ಬಿಡದೆ, ತಾನು ಪೂಜಿಸದೆ ಇದ್ದ. (ವಿಡಿಯೋ ಕೆಳಗಡೆ ಇದೆ ಒಮ್ಮೆ ನೋಡಿ)

ಇದರ ಬಗ್ಗೆ ಜನರು ಅವನನ್ನು ಕೇಳಲು ಹೋದರೆ ಭಯ ಪಡುವ ರೀತಿ ಬಿಂಬಿಸಿಕೊಂಡು, ಕೇವಲ ದೇವರನ್ನೇ ಅಲ್ಲದೆ ತನ್ನ ಮನೆಯಲ್ಲಿ ದೇವಾಲಯಕ್ಕೆ ಬಿಟ್ಟಿದ್ದ ಬಸವನನ್ನು ದೇವಾಲಯಕ್ಕೆ ಕಳುಹಿಸದೆ ಇರಿಸಿಕೊಂಡಿದ್ದ. ಆಗ ಇವನ ದುರಹಂಕಾರದ ವರ್ತನೆ ಸಹಿಸದ ಕೆಲವರು ಭಕ್ತರು ಬಂದು ಕವಣಾಪುರ ಬಸಪ್ಪನನ್ನು ದೇವಾಲಯದ ಸಮಸ್ಯೆ ಪರಿಹರಿಸಿ ಕೊಡಲು ಬೇಡಿಕೊಂಡು ಕರೆದುಕೊಂಡು ಹೋಗುತ್ತಾರೆ. ಸ್ಥಳಕ್ಕೆ ಹೋದ ಬಸವ ಸಮಸ್ಯೆ ಅರಿತು ಗ್ರಾಮದ ಮುಖ್ಯಸ್ಥರ ಸಮ್ಮುಖದಲ್ಲಿ ಪರಿಹರಿಸಿ ಕೊಡುತ್ತದೆ.
ಇನ್ನು ಇಂತಹ ನಿಮ್ಮ ಅನೇಕ ಸಮಸ್ಯೆಗೆ ಪರಿಹಾರ ಕೊಡುತ್ತಾರೆ ಬಸವ ಅವರು. ವಿಳಾಸ :
ಕವಣಾಪುರ ಬಸವೇಶ್ವರ , ಕವಣಾಪುರ ರಾಮನಗರ ತಾಲೂಕು / ಜಿಲ್ಲೆ. ಪ್ರತಿ ಸೋಮವಾರ ದರ್ಶನ ಕೊಡುತ್ತದೆ.