ಬಿಗ್ ನ್ಯೂಸ್: ಭಾರತದ ಬೆನ್ನಿಗೆ ಚೂರಿ ಹಾಕಿದ ಚೀನಾ ! ಕುತಂತ್ರ ಬಟಾಬಯಲು

ಬಿಗ್ ನ್ಯೂಸ್: ಭಾರತದ ಬೆನ್ನಿಗೆ ಚೂರಿ ಹಾಕಿದ ಚೀನಾ ! ಕುತಂತ್ರ ಬಟಾಬಯಲು

ನಮ್ಮ ನೆರೆಯ ಶತ್ರು ರಾಷ್ಟ್ರಗಳಿಗೆ ನೀವು ಏನೇ ಹೇಳಿ, ನೇರವಾಗಿ ಎದುರು ಹಾಕಿಕೊಳ್ಳುವುದು ಬರುವುದಿಲ್ಲ, ಸದಾ ಭಾರತದಂತಹ ರಾಷ್ಟ್ರವನ್ನು ಕೆಣಕಲು ಕಾದು ಕುಳಿತಿರುವ ಚೀನಾ ಹಾಗೂ ಪಾಕಿಸ್ತಾನ ದೇಶಗಳು ಬೆನ್ನ ಹಿಂದೆ ಚೂರಿ ಹಾಕುವುದರಲ್ಲಿ ಎತ್ತಿದ ಕೈ. ಇದೀಗ ಇದೇ ರೀತಿಯ ವಿದ್ಯಮಾನವೊಂದು ನಡೆದಿದ್ದು ಭಾರತ ಇದರ ವಿರುದ್ಧ ಬಾರಿ ಆಕ್ರೋಶ ಹೊರಹಾಕುವ ಸಾಧ್ಯತೆ ಹೆಚ್ಚಾಗಿದೆ. ಅಷ್ಟಕ್ಕೂ ನಡೆದದ್ದೇನು ಗೊತ್ತಾ? ಸಂಪೂರ್ಣ ವಿವರಿಗಳಿಗಾಗಿ ಕೆಳಗಡೆ ಓದಿ. ನಿಮಗೆಲ್ಲರಿಗೂ ತಿಳಿದಿರುವ ಹಾಗೇ ಜಮ್ಮು ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ಧತಿಯಿಂದ ಪಾಕಿಸ್ತಾನ ಭಾರತದ ಜೊತೆ ಯುದ್ಧ ಮಾಡುವ ಪ್ರಚೋದನೆ ಒಡ್ಡುತ್ತಿದೆ. ಇನ್ನು ಇದರ ಕುರಿತು ಪ್ರಜಾಪ್ರಭುತ್ವವೇ ಜಾರಿಯಲ್ಲಿ ಇಲ್ಲದ ಚೀನಾ ದೇಶವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡಿ, ಇದು ಜನರ ಮೇಲೆ ನಡೆಯುತ್ತಿರುವ ದೌರ್ಜನ್ಯ ಎನ್ನುತ್ತಿದೆ.

ಇದೀಗ ಈ ವಿಷಯ ಯುದ್ಧದ ವರೆಗೂ ತೆಗೆದುಕೊಂಡು ಹೋಗಿದೆ. ಇತ್ತ ಪಾಕಿಸ್ತಾನ ಯುದ್ಧ ಬೆದರಿಕೆ ಹಾಕುತ್ತಿದ್ದರೆ ಮತ್ತೊಂದೆಡೆ ಕುತಂತ್ರಿ ಚೀನಾ ದೇಶ, ಬೆನ್ನಿಗೆ ಚೂರಿ ಹಾಕುವ ನಿಟ್ಟಿನಲ್ಲಿ ಭಾರತದ ನೌಕಾ ನೆಲೆಗಳ ಮೇಲೆ ಬೇಹುಗಾರಿಕೆ ನಡೆಸುತ್ತಿದೆ ಎಂಬ ಆತಂಕಕಾರಿ ವಿಷಯ ಹೊರ ಬಿದ್ದಿದೆ. ಹಿಂದೂ ಮಹಾಸಾಗರದಲ್ಲಿ ನೌಕಾ ನೆಲೆಗಳ ಮೇಲೆ ಕಣ್ಣಿಟ್ಟಿರುವ ಚೀನಾ ದೇಶ ಅತ್ಯಾಧುನಿಕ ಸರ್ವೇಕ್ಷಣಾ ನೌಕೆಗಳ ಮೂಲಕ ಸಂಪೂರ್ಣ ಮಾಹಿತಿ ಕಲೆಹಾಕಲು ಪ್ರಯತ್ನ ನಡೆಸಿದೆ ಎಂದು ಗುಪ್ತಚರ ಇಲಾಖೆ ಬಹಿರಂಗ ಪಡಿಸಿದೆ. ಇಷ್ಟೇ ಅಲ್ಲದೆ ಭಾರತೀಯ ನೌಕಾ ನೆಲೆಗಳ ಸೂಕ್ಷ್ಮ ಪ್ರದೇಶ ಅಂಡಾಮಾನ್ ನಿಕೋಬಾರ್ ದ್ವೀಪಗಳ ಮೇಲೆ ಹಾಗೂ ಭಾರತದ ವಿಶಿಷ್ಟ ಆರ್ಥಿಕ ವಲಯದ ಬಗ್ಗೆ ಸಂಪೂರ್ಣ ಮಾಹಿತಿ ಕಲೆಹಾಕಲು ಪ್ರಯತ್ನ ನಡೆಸಿ, ತನ್ನ ಅತ್ಯಾಧುನಿಕ ನೌಕೆಗಳನ್ನು ಭಾರತದ ವಲಯಗಳಿಗೆ ಅಕ್ರಮವಾಗಿ ಕಳುಹಿಸಿದೆ ಎಂಬ ವಿಷಯ ಇದೀಗ ಬಯಲಾಗಿದೆ.