ಕಾಶ್ಮೀರದ ಕುರಿತು ಮತ್ತೊಂದು ಹೇಳಿಕೆ ನೀಡಿದ ಚಿದಂಬರಂ ! ರೊಚ್ಚಿಗೆದ್ದ ಹಿಂದೂ-ಮುಸಲ್ಮಾನ್ ಬಾಂಧವರು

ಕಾಶ್ಮೀರದ ಕುರಿತು ಮತ್ತೊಂದು ಹೇಳಿಕೆ ನೀಡಿದ ಚಿದಂಬರಂ ! ರೊಚ್ಚಿಗೆದ್ದ ಹಿಂದೂ-ಮುಸಲ್ಮಾನ್ ಬಾಂಧವರು

ನರೇಂದ್ರ ಮೋದಿ ಅವರನ್ನು ಟೀಕಿಸಲು ವಿರೋಧಪಕ್ಷದವರು ಮೊದಲು ಬಿಡುವ ಬಾಣ ವೇನೆಂದರೆ ಅದುವೇ ಮೋದಿ ಒಬ್ಬರು ಮುಸ್ಲಿಂ ವಿರೋಧಿಯೆಂದು. ಆದರೆ ನರೇಂದ್ರ ಮೋದಿ ಇರುವರೆಗೂ ಇಲ್ಲಿವರೆಗೂ ಯಾವ ಕ್ಷಣದಲ್ಲೂ ಸಹ ಮುಸ್ಲಿಂ ವಿರೋಧಿಯಾಗಿ ಕಾಣಿಸಿಕೊಂಡಿಲ್ಲ, ಹಿಂದೂ, ಮುಸ್ಲಿಂ ಅಥವಾ ಬೇರೆ ಯಾವುದೇ ಧರ್ಮವಾಗಲಿ ನರೇಂದ್ರ ಮೋದಿ ರವರಿಗೆ ಸಮಾನರು. ನರೇಂದ್ರ ಮೋದಿರವರ ಕೋಪ ಕೇವಲ ದೇಶದ್ರೋಹಿಗಳ ವಿರುದ್ಧ, ಇದನ್ನು ಹಿಂದೆಯೂ ಹಲವಾರು ಬಾರಿ ಸಾಬೀತು ಮಾಡಿದ್ದಾರೆ. ಅಷ್ಟೇ ಅಲ್ಲದೆ ಹಲವಾರು ಬಾರಿ ಮುಸ್ಲಿಮರ ಪರ ನಿಂತು ವಿಶೇಷ ರೀತಿಯ ಸೌಲಭ್ಯಗಳನ್ನು ಕಲ್ಪಿಸಿ, ಇತ್ತೀಚಿಗಷ್ಟೇ ಮುಸ್ಲಿಂ ಮಹಿಳೆಯರಿಗೆ ತ್ರಿವಳಿ ತಲಾಕ್ ರದ್ದು ಮಾಡುವ ಮೂಲಕ ಮತ್ತೊಮ್ಮೆ ತಾನು ಏನು ಎಂಬುದನ್ನು ಸಾಬೀತು ಮಾಡಿದ್ದರು.

ಇಷ್ಟೆಲ್ಲಾ ನಿರ್ಧಾರಗಳನ್ನು ತೆಗೆದುಕೊಂಡರೂ ಸಹ ಇಂದಿಗೂ ಮೋದಿ ಅವರನ್ನು ಮುಸ್ಲಿಂ ವಿರೋಧಿಯೆಂದು ಕೆಲವರು ಟೀಕೆ ಮಾಡುತ್ತಿರುತ್ತಾರೆ. ಈಗಾಗಲೇ ಹಲವಾರು ಮುಸಲ್ಮಾನ ಬಾಂಧವರು ತಳ್ಳಿಹಾಕಿದ್ದರೂ ಸಹ ವಿರೋಧ ಪಕ್ಷಗಳ ಟೀಕೆ ಮಾತ್ರ ನಿಂತಿಲ್ಲ. ಇದೀಗ ಇದೇ ವಿಚಾರವಾಗಿ ಧ್ವನಿ ಎತ್ತಿರುವ ಚಿದಂಬರಂ ರವರು ಕಾಶ್ಮೀರ ವಿಷಯದಲ್ಲಿಯೂ ಸಹ ಮುಸ್ಲಿಮರನ್ನು ಎಳೆದು ತಂದಿದ್ದಾರೆ. ಹೌದು ಒಂದುವೇಳೆ ಕಾಶ್ಮೀರದಲ್ಲಿ ಮುಸ್ಲಿಮರಿಗೆ ಬದಲಾಗಿ ಹಿಂದೂಗಳು ಹೆಚ್ಚಾಗಿ ಇದ್ದರೆ, ನರೇಂದ್ರ ಮೋದಿ ರವರು ಈ ರೀತಿಯ ನಿರ್ಧಾರ ತೆಗೆದು ಕೊಳ್ಳುತ್ತಿರಲಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ಹಾಗು ಮುಸಲ್ಮಾನ ಬಾಂಧವರು ಇಬ್ಬರು ಸೇರಿ ಚಿದಂಬರಂ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೆ ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷ ಮಾಡಿದ್ದ ದೊಡ್ಡ ತಪ್ಪನ್ನು ಇದೀಗ ಮೋದಿ ಸರ್ಕಾರ ಸರಿ ಮಾಡಿದರೂ ಸಹ ಕಾಂಗ್ರೆಸ್ ಪಕ್ಷವು ಕೋಮು ಬಣ್ಣ ಹಚ್ಚುವ ಪ್ರಯತ್ನ ಮಾಡುತ್ತಿದೆ ಎಂದು ಬಿಜೆಪಿ ನಾಯಕ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ.