ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದು ತನ್ನ ಅಂತ್ಯಕ್ಕೆ ತಾನೇ ನಾಂದಿ ಹಾಡಿದ ಪಾಕಿಸ್ತಾನ ! ಪಾಕಿಸ್ತಾನದ ಹೀನಾಯ ಸ್ಥಿತಿ ಹೇಗಿದೆ ಗೊತ್ತಾ??

ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳಲು ಬಂದು ತನ್ನ ಅಂತ್ಯಕ್ಕೆ ತಾನೇ ನಾಂದಿ ಹಾಡಿದ ಪಾಕಿಸ್ತಾನ ! ಪಾಕಿಸ್ತಾನದ ಹೀನಾಯ ಸ್ಥಿತಿ ಹೇಗಿದೆ ಗೊತ್ತಾ??

ಭಾರತದ ಜಮ್ಮು ಹಾಗೂ ಕಾಶ್ಮೀರ ದಲ್ಲಿ ವಿಶೇಷ ಸ್ಥಾನಮಾನ ರದ್ಧತಿಯ ನಂತರ ಪಾಕಿಸ್ತಾನವು ಕಿಂಚಿತ್ತು ಕಾರಣವಿಲ್ಲದೆ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವ ಪ್ರತಿಕಾರ ಬೆಳೆಯಲಾರಂಭಿಸಿತು. ಸುಖಾಸುಮ್ಮನೆ ಬಡಾಯಿಕೊಚ್ಚಿಕೊಳ್ಳುವ ಇಮ್ರಾನ್ ಖಾನ್ ರವರು ಭಾರತದ ವಿರುದ್ಧ ಮನಬಂದಂತೆ ನಿರ್ಧಾರಗಳನ್ನು ತೆಗೆದುಕೊಂಡಿದ್ದರು, ಏನೋ ಭಾರತ ಪಾಕಿಸ್ತಾನವನ್ನು ನಂಬಿ ಬದುಕು ಕಟ್ಟಿಕೊಂಡು ಬದುಕುತ್ತಿರುವಂತೆ ನಾವು ಭಾರತದ ಜೊತೆ ವ್ಯಾಪಾರ ವ್ಯವಹಾರಗಳನ್ನು ನಿಲ್ಲಿಸುತ್ತೇವೆ, ರೈಲುಗಳನ್ನು ಸ್ಥಗಿತಗೊಳಿಸುತ್ತೇವೆ, ಎಲ್ಲಾ ಸಂಬಂಧಗಳನ್ನು ಕಳೆದುಕೊಂಡು ಭಾರತದ ರಾಯಭಾರಿಯನ್ನು ವಾಪಸ್ಸು ಕಳುಹಿಸುತ್ತೇವೆ ಎಂದೆಲ್ಲಾ ಬೊಬ್ಬೆ ಹೊಡೆದು ಹೇಳಿದಂತೆ ನಡೆದುಕೊಂಡಿದ್ದರು. ಆದರೆ ಭಾರತಕ್ಕೆ ನಷ್ಟ ತರುವ ಪಾಕಿಸ್ತಾನದ ಕುತಂತ್ರ ಯೋಚನೆ ಇದೀಗ ಸಂಪೂರ್ಣ ಉಲ್ಟಾ ಹೊಡೆದಿದೆ. ಪಾಕಿಸ್ತಾನವು ಹೀನಾಯ ಸ್ಥಿತಿ ತಲುಪಿದೆ.

ಹಲವಾರು ವರ್ಷಗಳಿಂದ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ಪಾಕಿಸ್ತಾನವು ಭಾರತದ ವಿರುದ್ಧ ಕೈಗೊಂಡ ಒಂದೊಂದು ಕ್ರಮಗಳು ಇದೀಗ ಪಾಕಿಸ್ತಾನಕ್ಕೆ ತಿರುಗುಬಾಣವಾಗಿವೆ, ಭಾರತದ ಜೊತೆ ವ್ಯಾಪಾರ-ವ್ಯವಹಾರ ನಿಲ್ಲಿಸಿದ ಕಾರಣ ಒಂದೇ ದಿನದಲ್ಲಿ ಪಾಕಿಸ್ತಾನದ ಶೇರು ಮಾರುಕಟ್ಟೆ ಬಾರಿ ಪಾತಾಳಕ್ಕೆ ಕುಸಿದಿದ್ದು ಒಂದು ಲಕ್ಷ ಕೋಟಿ ಭಾರತೀಯ ರೂಪಾಯಿಗಳನ್ನು ಕಳೆದುಕೊಂಡಿದೆ. ಅಷ್ಟೇ ಅಲ್ಲದೆ ಹಲವಾರು ದೈನಂದಿಕ ವಸ್ತುಗಳಲ್ಲಿ ಭಾರತದ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದ್ದ ಪಾಕಿಸ್ತಾನದಲ್ಲಿ ಇದೀಗ ತರಕಾರಿ ಕೊಳ್ಳಬೇಕು ಎಂದುಕೊಂಡರೂ, ಸಾವಿರಾರು ರೂ ವ್ಯಯ ಮಾಡುವ ಪರಿಸ್ಥಿತಿ ಎದುರಾಗಿದೆ. ತರಕಾರಿಗಳ ಬೆಲೆ ಗಗನಕ್ಕೆ ಏರಿದ್ದು, ಚಿನ್ನ ಕೈ ಗೆಟುಕದಂತಹ ಪರಿಸ್ಥಿತಿ ಎದುರಾಗಿದೆ. ಇದರಿಂದ ರೊಚ್ಚಿಗೆದ್ದಿರುವ ಪಾಕಿಸ್ತಾನದ ನಾಗರಿಕರು ಇಮ್ರಾನ್ ಖಾನ್ ರವರ ನಿರ್ಧಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.