370 ರದ್ದು – ಮುಸ್ಲಿಮರ ಮೇಲಿನ ದಾಳಿ ಎಂದ ಎಡಪಂಥೀಯನ ಚಳಿ ಬಿಡಿಸಿದ ಫೈರ್ ಬ್ರಾಂಡ್ ಅಜಿತ್ ಹನುಮಕ್ಕನವರ್, ವೀಡಿಯೋ ವೈರಲ್

370 ರದ್ದು – ಮುಸ್ಲಿಮರ ಮೇಲಿನ ದಾಳಿ ಎಂದ ಎಡಪಂಥೀಯನ ಚಳಿ ಬಿಡಿಸಿದ ಫೈರ್ ಬ್ರಾಂಡ್ ಅಜಿತ್ ಹನುಮಕ್ಕನವರ್, ವೀಡಿಯೋ ವೈರಲ್

ಸುವರ್ಣ ನ್ಯೂಸ್ ವರದಿಗಾರ ಅಜಿತ್ ಹನುಮಕ್ಕನವರ್ ರವರ ಬಗ್ಗೆ ಯಾರಿಗೆ ತಿಳಿದಿಲ್ಲ ಹೇಳಿ, ಸದಾ ದೇಶದ ಪರ ಧ್ವನಿ ಎತ್ತುವ ಈ ವರದಿಗಾರನ ಪ್ರೋಗ್ರಾಮ್ ನೋಡುವುದು ಇನ್ನಿಲ್ಲದ ಸಂತೋಷಕ್ಕೆ ಕಾರಣವಾಗುತ್ತದೆ. ಇವರ ದೇಶದ ಪರವಾದ ಮಾತುಗಳಿಗೆ ಕಾರ್ಯಕ್ರಮದಲ್ಲಿ ಭಾಗಾವಹಿಸುವ ಎಡಪಂಥೀಯರಂತೂ ಉತ್ತರ ನೀಡಲಾಗದೆ ಸುಮ್ಮನಾದರೆ ಎಲ್ಲರೂ ಕೇಕೆ ಹಾಕಿ ಅಜಿತ್ ರವರನ್ನು ಹೊಗಳುತ್ತಾರೆ. ಯಾವುದೇ ಕಾರಣಕ್ಕೂ ದೇಶದ ವಿರುದ್ದದ ಹೇಳಿಕೆಯನ್ನು ಒಪ್ಪಿಕೊಳ್ಳದೆ ಇತಿಹಾಸವನ್ನು ಕೆದಕಿ ಉತ್ತರ ನೀಡಿ, ವಿರೋಧಿಗಳ ಬಾಯಿ ಮುಚ್ಚಿಸುವುದರಲ್ಲಿ ಇವರು ಬಹಳ ಪ್ರಸಿದ್ದರು ಎಂಬುವುದರಲ್ಲಿ ಎರಡು ಮಾತಿಲ್ಲ. ಈದೀಗ ಇದೆ ರೀತಿಯ ಮತ್ತೊಂದು ಘಟನೆ ಸುವರ್ಣ ನ್ಯೂಸ್ ರೂಮ್ ನಲ್ಲಿ ನಡೆದಿದ್ದು ಅಜಿತ್ ರವರ ಪ್ರಶ್ನೆಗಳಿಗೆ ಎಡಪಂಥೀಯ ಚಿಂತಕ ಉತ್ತರ ನೀಡಲಾರದೆ ಒದ್ದಾಡಿದ್ದಾರೆ.

ಕಳೆದ ಎರಡು ದಿನಗಳ ಹಿಂದೆ ಮೋದಿ ನೇತೃತ್ವದ ಸರ್ಕಾರ ಜಮ್ಮು ಹಾಗೂ ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ನಾನಮಾನವನ್ನು ರದ್ದು ಮಾಡಿ, ದೇಶ ದ್ರೋಹಿಗಳ ಸದ್ದಡಗಿಸಲು ಎರಡು ಭಾಗಗಳಾಗಿ ವಿಭಜನೆ ಮಾಡಿದ ನಂತರ, ಎಲ್ಲರ ಅಭಿಪ್ರಾಯ ಸಂಗ್ರಹಿಸಲು ಸುವರ್ಣ ನ್ಯೂಸ್ ವಿಶೇಷ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಊಹಿಸಿದಂತೆ ಅಜಿತ್ ರವರು ಸುವರ್ಣ ನ್ಯೂಸ್ ಪರವಾಗಿ ಕಾರ್ಯಕ್ರಮ ನಡೆಸಿಕೊಳ್ಳು ಮುಂದಾಗಿದ್ದರು. ಈ ಕಾರ್ಯ ಕ್ರಮದಲ್ಲಿ ಅಜಿತ್ ರವರು ಎಡಪಂಥೀಯ ನಾಯಕನನ್ನು ತರಾಟೆಗೆ ತೆಗೆದುಕೊಂಡು ಕಾಶ್ಮೀರಿ ಪಂಡಿತರ ಪರ ನಿಂತು, ಕೇಳಿದ ಪ್ರಶ್ನೆಗಳಿಗೆ ಎಡಪಂಥೀಯ ನಾಯಕ ಉತ್ತರ ನೀಡಲಾಗದೆ ತಬ್ಬಿಬ್ಬಾದರು, ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದ್ದು, ಕೆಳಗಡೆ ಇದೆ, ನೋಡಿ ನಿಮ್ಮ ಅಭಿಪ್ರಾಯ ತಿಳಿಸಿ ಹಾಗೂ ವಿರೋಧ ಮಾಡುತ್ತಿರುವ ಎಲ್ಲರಿಗೂ ತಲುಪಿಸಿ.