ಡಿಕೆಶಿ ಎಚ್ಚರಿಕೆಗೆ ಖಡಕ್ ಉತ್ತರ ನೀಡಿದ ಸುಧಾಕರ್ ! ಕನಕಪುರ ಬಂಡೆ ಗೆ ಡಿಚ್ಚಿ ಹೊಡೆದಿದ್ದು ಹೇಗೆ ಗೊತ್ತಾ??

ಡಿಕೆಶಿ ಎಚ್ಚರಿಕೆಗೆ ಖಡಕ್ ಉತ್ತರ ನೀಡಿದ ಸುಧಾಕರ್ ! ಕನಕಪುರ ಬಂಡೆ ಗೆ ಡಿಚ್ಚಿ ಹೊಡೆದಿದ್ದು ಹೇಗೆ ಗೊತ್ತಾ??

ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಅನರ್ಹಗೊಂಡಿರುವ ಕಾಂಗ್ರೆಸ್ ಶಾಸಕರಾದ ಸುಧಾಕರ್ ಹಾಗೂ ರೋಷನ್ ಬೇಗ್ ರವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸುತ್ತಿದ್ದಾರೆ. ಇಂದು ಕಾಂಗ್ರೆಸ್ನ ಅನರ್ಹ ಶಾಸಕರಾದ ಸುಧಾಕರ್ ಹಾಗೂ ರೋಷನ್ ಬೇಗ್ ಬಿಎಸ್ವೈ ಅವರನ್ನು ಭೇಟಿ ಮಾಡಿ ಮುಂದಿನ ನಡೆ ಬಗ್ಗೆ ಚರ್ಚೆ ನಡೆಸಿದ್ದಾರೆ.

ತಾವೂ ಸಭೆಯಲ್ಲಿ ನಿರತರಾಗಿದ್ದರೂ ಅನರ್ಹ ಶಾಸಕರ ಬಂದು ತಕ್ಷಣ ಬಿಎಸ್ ಯಡಿಯೂರಪ್ಪನವರು ಸಭೆಯನ್ನು ಮೊಟಕುಗೊಳಿಸಿ ಶಾಸಕರನ್ನು ಭೇಟಿ ಮಾಡಿ ಚರ್ಚಿಸಿದ್ದು ಗಮನ ಸೆಳೆಯಿತು. ಈ ಭೇಟಿ ನಂತರ ಮಾತನಾಡಿರುವ ಸುಧಾಕರ್, ಮಾಜಿ ಸಚಿವ ಡಿಕೆ ಶಿವಕುಮಾರ್ ಅವರಿಗೆ ಹಾಗೂ ಕಾಂಗ್ರೆಸ್ ಪಕ್ಷದ ನಾಯಕರಿಗೆ ಸರಿಯಾಗಿ ಟಾಂಗ್ ನೀಡಿದ್ದಾರೆ.

ಇದೇ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ ಲೋಕಸಭೆ ಚುನಾವಣೆಯಲ್ಲಿ ಹೀನಾಯವಾಗಿ ಸೋತಿದ್ದಕ್ಕೆ ದೋಸ್ತಿ ನಾಯಕರ ವಿರುದ್ಧ ಸುಧಾಕರ್ ಹರಿಹಾಯ್ದಿದ್ದಾರೆ. “ಇವರೆಲ್ಲರೂ ಸೇರಿ ಇಡೀ ರಾಜ್ಯ ಸುತ್ತಿದ್ದಾರೆ. ಹಾಗಿದ್ದರೂ ಈ ಅತಿರಥ- ಮಹಾರಥರು ಸೋತಿದ್ದೇಕೆ,” ಎಂದು ವ್ಯಂಗ್ಯವಾಡಿದರು.ಇನ್ನು ಕನಕಪುರದ ಬಂಡೆ ಡಿಕೆಶಿ ರವರ ಖಡಕ್ ಎಚ್ಚರಿಕೆಯ ಮಾತುಗಳಿಗೆ ಪ್ರತಿಕ್ರಿಯೆ ನೀಡಿ ಡಿ ಕೆ ಶಿವಕುಮಾರ್ ಅವರ ವಿರುದ್ಧ ವಾಗ್ದಾಳಿ ನಡೆಸಿದ ಸುಧಾಕರ್ ಅವರು, “ಕಾಲರ್ ಎತ್ತಿಕೊಂಡು ಜನರ ಬಳಿ ಹೋದರೆ ಮತ ಕೊಡುವುದಿಲ್ಲ. ಕ್ಷೇತ್ರದಲ್ಲಿ ನಿರಂತರವಾಗಿ ಸೇವೆ ಸಲ್ಲಿಸಿದವರನ್ನು ಮತದಾರರು ಆಯ್ಕೆ ಮಾಡುತ್ತಾರೆ. ಯಾರೋ ಇಲ್ಲಿ ಒಬ್ಬರು ಬೊಬ್ಬೆ ಹೊಡೆದ ತಕ್ಷಣ ಜನರು ಹೆದರುವುದಿಲ್ಲ. ಆ ರೀತಿ ಬೆದರುವುದಾಗಿದ್ದರೆ ಲೋಕಸಭೇ ಚುನಾವಣೆಯಲ್ಲಿ ಏಕೆ ಕಾಂಗ್ರೆಸ್ ಒಂದು ಸ್ಥಾನವನ್ನು ಮಾತ್ರ ಗೆಲ್ಲುತ್ತಿತ್ತು?,” ಎಂದು ಪ್ರಶ್ನಿಸಿದರು.