ಹಿಂದೂ ಫೈರ್ ಬ್ರಾಂಡ್ ರಾಜಾ ಸಿಂಗ್ ಮೇಲೆ ಪೊಲೀಸರ ದಾಳಿ! ಗಂಭೀರವಾಗಿ ಗಾಯಗೊಂಡ ರಾಜಾ ಸಿಂಗ್

ಹಿಂದೂ ಫೈರ್ ಬ್ರಾಂಡ್ ರಾಜಾ ಸಿಂಗ್ ಮೇಲೆ ಪೊಲೀಸರ ದಾಳಿ! ಗಂಭೀರವಾಗಿ ಗಾಯಗೊಂಡ ರಾಜಾ ಸಿಂಗ್

ತೆಲಂಗಾಣ ರಾಜ್ಯದ ಬಿಜೆಪಿ ಶಾಸಕರಾದ ರಾಜಾ ಸಿಂಗ್  ಬಗ್ಗೆ ಇಡೀ ದೇಶದ ಜನರಿಗೆ ತಿಳಿದಿದೆ. ಸದಾ ಹೋರಾಟಗಳಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳುವ ಶಾಸಕ, ಮೊದಲಿನಿಂದಲೂ ತನ್ನ ಪ್ರಾಣವನ್ನು ಲೆಕ್ಕಿಸದೆ ಹಲವಾರು ಕಾರ್ಯಾಚರಣೆಗಳಲ್ಲಿ ಖುದ್ದು ಭಾಗಿಯಾಗಿದ್ದಾರೆ. ಅದರಲ್ಲಿಯೂ ಗೋಮಾತೆಯನ್ನು ಕಳ್ಳಸಾಗಾಣಿಕೆದಾರರಿಂದ ರಕ್ಷಿಸಲು ತಾವೇ ವಾಹನಗಳನ್ನು ಬೆನ್ನತ್ತಿ ಹಿಡಿದು, ಹಲವಾರು ಬಾರಿ ಹೊಡೆದಾಟಗಳನ್ನು ನಡೆಸಿ ರಕ್ಷಿಸುವ ಮೂಲಕ ಸದ್ದು ಮಾಡಿದ್ದಾರೆ. ಸದಾ ಭಾರತೀಯ ಸಂಸ್ಕೃತಿ ಹಾಗೂ ಹಿಂದೂ ಧರ್ಮದ ಬಗ್ಗೆ ಧ್ವನಿ ಎತ್ತುವ ರಾಜಾ ಸಿಂಗ್ ರವರಿಗೆ ಇದೀಗ ತೆಲಂಗಾಣ ರಾಜ್ಯದ ಪೊಲೀಸರು ಮನಬಂದಂತೆ ಥಳಿಸಿದ್ದಾರೆ ಎಂಬ ವರದಿ ಹೊರಬಿದ್ದಿದೆ. ಈ ವಿಷಯ ಕೇಳಿದ ಜನರು ಒಂದು ವೇಳೆ ಇದು ಬಿಜೆಪಿ ಪಕ್ಷದ ಶಾಸಕನನ್ನು ಹೊರತುಪಡಿಸಿ ಉಳಿದ ಪಕ್ಷದ ಶಾಸಕನಾಗಿದ್ದರೆ, ಇಡೀ ದೇಶವೇ ಪ್ರಜಾಪ್ರಭುತ್ವ ಅಂತ್ಯ ಕಂಡಿದೆ ಎಂದು ಬೊಬ್ಬೆ ಹೊಡೆಯುತ್ತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.

ಕಳೆದ 2009ರಲ್ಲಿ ಭಾರತೀಯ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ ರಾಣಿ ಅವಂತಿ ಬಾಯಿ ರವರ ಪ್ರತಿಮೆಯನ್ನು ತೆಲಂಗಾಣದಲ್ಲಿ ಸ್ಥಾಪಿಸಲಾಗಿತ್ತು. ಆದರೆ ಸ್ವಾತಂತ್ರ್ಯ ಹೋರಾಟಗಾರ್ತಿ ಎಂಬುದನ್ನು ನೋಡದ ಜನರು ಇತ್ತೀಚೆಗೆ ಅದರ ಮೇಲೆ ದಾಳಿಯನ್ನು ಆರಂಭಿಸಿದ್ದರು. ಪರಿಣಾಮವಾಗಿ ಇತ್ತೀಚೆಗೆ ಪ್ರತಿಮೆಯನ್ನು ತೆರವುಗೊಳಿಸಲಾಗಿತ್ತು. ಮೊದಲೇ ಭಾರತೀಯ ಇತಿಹಾಸದ ಬಗ್ಗೆ ಭಾರಿ ಗೌರವವನ್ನು ಹೊಂದಿರುವ ರಾಜಾ ಸಿಂಗ್ ರವರು ಇದರಿಂದ ಕುಪಿತರಾಗಿ, ತನ್ನ ಬೆಂಬಲಿಗ ಪಡೆಯೊಂದಿಗೆ ಮೂರ್ತಿಯನ್ನು ಪುನರ್ ಸ್ಥಾಪಿಸಲು ಹೋದಾಗ ಇಬ್ಬರು ಎಸಿಪಿಗಳು ಮತ್ತು ಇಬ್ಬರು ಎಸ್‌ಐಗಳು ರಾಜಾ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ತಲೆ ಭಾಗದಲ್ಲಿ ಗಂಭೀರ ಗಾಯವಾದ ಹಿನ್ನಲೆಯಲ್ಲಿ ರಾಜಾ ಸಿಂಗ್ ಅವರನ್ನು ಓಸ್ಮಾನಿಯಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು.ರಾಜಾ ಸಿಂಗ್‌ ಅವರ ತಲೆಯ ಭಾಗಕ್ಕೆ ಗಾಯವಾಗಿರುವ ಕುರಿತು ಆಸ್ಪತ್ರೆಯ ಮೂಲಗಳು ಧೃಡಪಡಿಸಿವೆ.