ಶುರುವಾಯಿತು ದೆಹಲಿಯಲ್ಲಿ ತೇಜಸ್ವಿ ಸೂರ್ಯ ರವರ ಹವಾ! ಮಾಧ್ಯಮದವರಿಗೆ ಇವರೇ ಫೇವರೆಟ್ ಯಾಕೆ ಗೊತ್ತಾ??

ಶುರುವಾಯಿತು ದೆಹಲಿಯಲ್ಲಿ ತೇಜಸ್ವಿ ಸೂರ್ಯ ರವರ ಹವಾ! ಮಾಧ್ಯಮದವರಿಗೆ ಇವರೇ ಫೇವರೆಟ್ ಯಾಕೆ ಗೊತ್ತಾ??

ಲೋಕಸಭಾ ಚುನಾವಣೆಯಲ್ಲಿ ಯಾರು ಊಹಿಸದ ರೀತಿಯಲ್ಲಿ ಟಿಕೆಟ್ ಪಡೆದು ಇಡೀ ದೇಶದ ಗಮನ ಸೆಳೆದಿದ್ದ ತೇಜಸ್ವಿ ಸೂರ್ಯ ಅವರು ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲಿ ಭರ್ಜರಿಯಾಗಿ ಗೆಲುವು ದಾಖಲಿಸಿರುವ ತೇಜಸ್ವಿ ಸೂರ್ಯ ರವರು, ಇದೀಗ ದೆಹಲಿಯಲ್ಲಿ ಭಾರೀ ಸದ್ದು ಮಾಡುತ್ತಿದ್ದಾರೆ. ಹೌದು ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ 28 ವರ್ಷದ ತೇಜಸ್ವಿ ಸೂರ್ಯರು ಗೆದ್ದು ಬಂದ ಕೆಲವೇ ಕೆಲವು ದಿನಗಳಲ್ಲಿ ದೆಹಲಿಯಲ್ಲಿ ಮಾಧ್ಯಮದವರಿಗೆ ಫೇವರೆಟ್ ಆಗಿದ್ದಾರೆ. ಯಾವ ದಿಲ್ಲಿ ಮಾಧ್ಯಮಗಳನ್ನು ಗಮನಿಸಿದರು ಸಹ ತೇಜಸ್ವಿ ಸೂರ್ಯ ರವರನ್ನು ತಮ್ಮ ಸ್ಟುಡಿಯೋಗೆ ಚರ್ಚೆಗೆ ಕರೆದೊಯ್ಯಲು ಕಾದು ಕುಳಿತಿದ್ದಾರೆ. ಯಾಕೆ ಗೊತ್ತಾ ತಿಳಿಯಲು ಕೆಳಗಡೆ ಓದಿ.

ಹಲವಾರು ವರ್ಷಗಳಿಂದ ಭಾರತದ ದಕ್ಷಿಣ ಕ್ಷೇತ್ರದಿಂದ ಇಂಗ್ಲೀಷ್ ಮಾತನಾಡುವ ಬಿಜೆಪಿ ಪಕ್ಷದ ವಕ್ತಾರ ದೆಹಲಿಯ ಮಾಧ್ಯಮಗಳಿಗೆ ಬೇಕಾಗಿತ್ತು. ಇಷ್ಟೇ ಅಲ್ಲದೆ ಬಹುತೇಕ ದಕ್ಷಿಣದ ನಾಯಕರಿಗೆ ಹಿಂದಿ ಕೂಡ ಸಂಪೂರ್ಣವಾಗಿ ಬರುತ್ತಿರಲಿಲ್ಲ ಇನ್ನು ಇಂಗ್ಲಿಷ್ ಕತೆ ಕೇಳಲೇ ಬೇಡಿ. ಹೀಗಿರುವಾಗ ಈ ಸ್ಥಾನವನ್ನು ತುಂಬಲು ಬಹಳ ನಿರ್ಗಳವಾಗಿ ಭಾಷೆ ಬಳಸುವ ತೇಜಸ್ವಿ ಸೂರ್ಯ ರೊಬ್ಬರು ಇದೀಗ ಸಂಸತ್ತಿಗೆ ಎಂಟ್ರಿಕೊಟ್ಟಿದ್ದಾರೆ. ಯಾವುದೇ ಹರುಕು ಮುರುಕು ಇಲ್ಲದೆ ಸ್ಪಷ್ಟವಾಗಿ ಆಂಗ್ಲ ಭಾಷೆ ಮಾತನಾಡುವ ತೇಜಸ್ವಿ ಸೂರ್ಯ ರವರ ಹಿಂದೆ ಇದೇ ಕಾರಣಕ್ಕಾಗಿ ದೆಹಲಿಯ ಮಾಧ್ಯಮಗಳು ಬಿದ್ದಿವೆ. ರಾಷ್ಟ್ರರಾಜಧಾನಿಯಲ್ಲಿರುವ ಬಹುತೇಕ ಆಂಗ್ಲ ಮಾಧ್ಯಮಗಳು ಕೇವಲ ಒಮ್ಮೆ ತೇಜಸ್ವಿ ಸೂರ್ಯ ರವರನ್ನು ಚರ್ಚೆಗೆ ಕರೆದೊಯ್ಯಲು ಹಾತೊರೆಯುತ್ತಿವೆ.