ಬಿಗ್ ನ್ಯೂಸ್: ಶರದ್ ಪವಾರ್ ಗೆ ಭಾರಿ ಮುಖಭಂಗ- ಮೋದಿಯನ್ನು ಕೆಣಕಿ ಬೆಪ್ಪಾದ ಪವಾರ್

ಬಿಗ್ ನ್ಯೂಸ್: ಶರದ್ ಪವಾರ್ ಗೆ ಭಾರಿ ಮುಖಭಂಗ- ಮೋದಿಯನ್ನು ಕೆಣಕಿ ಬೆಪ್ಪಾದ ಪವಾರ್

ಕೇವಲ 48 ಗಂಟೆಗಳ ಹಿಂದಷ್ಟೇ ಶರದ್ ಪವಾರ್ ಅವರು ಫಲಿತಾಂಶಕ್ಕೂ ಮುನ್ನ ವೇ ಸೋಲನ್ನು ಖಚಿತಪಡಿಸಿಕೊಳ್ಳುವ ಅಂತಹ ಮಾತನ್ನು ಆಡಿದ್ದರು. ಬಿಜೆಪಿ ಪಕ್ಷ ಮತಯಂತ್ರಗಳನ್ನು ಹ್ಯಾಕ್ ಮಾಡಿ ಗೆಲ್ಲಲಿದೆ ಎಂದು ಭವಿಷ್ಯ ನುಡಿದಿದ್ದ ಶರದ್ ಪವಾರ್ ಅವರು ಸುಖಾಸುಮ್ಮನೆ ನರೇಂದ್ರ ಮೋದಿ ಅವರನ್ನು ಎಳೆದು ತಂದು, ಮತಯಂತ್ರಗಳನ್ನು ಈಗಾಗಲೇ ಹ್ಯಾಕ್ ಮಾಡಲಾಗಿದೆ ನಾನು ನೀಡಿದ ಮತವೂ ಸಹ ಬಿಜೆಪಿ ಪಕ್ಷಕ್ಕೆ ಹೋಗಿದೆ ಆದರೆ ನನ್ನ ಕೈಯಲ್ಲಿ ಏನು ಮಾಡಲು ಸಾಧ್ಯವಾಗಲಿಲ್ಲ ಎಂದು ತಮ್ಮ ಹತಾಶೆಯನ್ನು ಹೊರಹಾಕಿದ್ದರು. ಆದರೆ ಇದೀಗ ಸತ್ಯಾಂಶ ಹೊರ ಬಿದ್ದಿದ್ದು ಪವಾರ್ ಅವರಿಗೆ ಭಾರಿ ಮುಖಭಂಗವಾಗಿದೆ.

ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಶರದ್ ಪವಾರ್ ಅವರು ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರದಲ್ಲಿ ಮತದಾನದ ಹಕ್ಕನ್ನು ಹೊಂದಿದ್ದಾರೆ. ಇದೇ ಕ್ಷೇತ್ರದಲ್ಲಿ ತಾನು ಚಲಾಯಿಸಿದ ಬಿಜೆಪಿ ಪಕ್ಷಕ್ಕೆ ಹೋಗಿದೆ ಎಂದು ನರೇಂದ್ರ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಆದರೆ ಸತ್ಯಾಂಶವೇನೆಂದರೆ ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಯಾವ ಬಿಜೆಪಿ ಅಭ್ಯರ್ಥಿಯೂ ಸ್ಪರ್ಧಿಸಿಲ್ಲ. ಕಮಲದ ಗುರುತಿಗೆ ನನ್ನ ಮತ ಹೋಗಿತ್ತು ಎಂದು ಹೇಳಿಕೆ ನೀಡಿದ್ದ ಶರದ್ ಪವಾರ್ ಅವರು ಮತ ಯಂತ್ರದಲ್ಲಿ ಬಿಜೆಪಿ ಪಕ್ಷದ ಚಿನ್ಹೆಯೇ ಇರಲಿಲ್ಲ ಎಂಬುದನ್ನು ಮರೆತಂತೆ ಕಾಣುತ್ತಿದೆ. ಯಾಕೆಂದರೆ ಮೈತ್ರಿ ಧರ್ಮದ ಪ್ರಕಾರ ಮುಂಬೈ ದಕ್ಷಿಣ ಲೋಕಸಭಾ ಕ್ಷೇತ್ರವನ್ನು ಬಿಜೆಪಿ ಪಕ್ಷವು ಶಿವಸೇನಾ ಪಕ್ಷಕ್ಕೆ ಬಿಟ್ಟುಕೊಟ್ಟಿತ್ತು. ಅಲ್ಲಿ ಇದ್ದಿದ್ದು ಕೇವಲ ಶಿವಸೇನೆ ಪಕ್ಷದ ಚಿನ್ಹೆ. ನಾನು ನನ್ನ ಕಣ್ಣಾರೆ ಕಂಡಿದ್ದೇನೆ ಬಿಜೆಪಿ ಪಕ್ಷಕ್ಕೆ ಎಲ್ಲಾ ಮತಗಳು ಹೋಗುತ್ತಿವೆ ಎಂದು ಹೇಳಿಕೆ ನೀಡಿದ್ದ ಪವಾರ್ ರವರಿಗೆ ಇದೀಗ ಈ ಸತ್ಯಾಂಶದಿಂದ ಭಾರಿ ಮುಜುಗರ ಉಂಟಾಗಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಸಾಮಾನ್ಯ ಜನರು ತೆಗೆದುಕೊಂಡಿದ್ದಾರೆ.