ಭಾರತದ ಗಡಿ ದಾಟಿ ಸಾವಿರ ಕೆಜಿ ಬಾಂಬ್ ಹಾಕಿ ಆರ್ಭಟಿಸಿದ ಮಿರಾಜ್ ಯುದ್ಧ ವಿಮಾನ

ಭಾರತದ ಗಡಿ ದಾಟಿ ಸಾವಿರ ಕೆಜಿ ಬಾಂಬ್ ಹಾಕಿ ಆರ್ಭಟಿಸಿದ ಮಿರಾಜ್ ಯುದ್ಧ ವಿಮಾನ

ಪುಲ್ವಾಮಾ ದಾಳಿಗೆ ಭಾರತ ಸೇನೆಯು ಯಾವಾಗ ಸೇಡು ತೀರಿಸಿಕೊಳ್ಳುತ್ತದೆ ಎಂದು ಇಡೀ ದೇಶವೇ ಕಾದು ಕುಳಿತಿತ್ತು. ಹಲವು ಬಾರಿ ಉಗ್ರರನ್ನು ಫಿನಿಶ್ ಮಾಡಿದ ಸುದ್ದಿಗಳು ಕೇಳಿದರೂ ಸಹ ದೇಶದ ಜನತೆ ಇದು ಸಾಕಾಗುವುದಿಲ್ಲ ಎಂಬಂತೆ ಮಾತನಾಡಿದರು. ಪುಲ್ವಾಮಾ ದಾಳಿಗೆ ಪ್ರತಿಕಾರ ತೀರಿಸಿಕೊಳ್ಳಲು ಭಾರತೀಯ ಸೇನೆಯು ಮೊದಲಿನಿಂದಲೂ ಸಿದ್ಧವಾಗಿ ನಿಂತಿತ್ತು ಆದರೆ ಸಮಯಕ್ಕಾಗಿ ಕಾದು ಕುಳಿತಿತ್ತು.

ಇಂದು ಆ ಸಮಯ ಬಂದಂತೆ ಕಾಣುತ್ತಿದೆ ಬೆಳ್ಳಂಬೆಳಗ್ಗೆ ಭಾರತೀಯ ಯುದ್ಧ ವಿಮಾನಗಳು ಅಕಾಡಕ್ಕೆ ಇಳಿದಿವೆ, ಬರೋಬ್ಬರಿ ಸಾವಿರ ಕೆಜಿ ಬಾಂಬ್ (ಸ್ಪೋಟಕ) ಗಳನ್ನು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಹಾಕಲಾಗಿದೆ ಎಂಬ ಮಾಹಿತಿ ಹೊರ ಬಿದ್ದಿದೆ,ಉಗ್ರರ ತಾಣಗಳ ವಿಷಯ ತಿಳಿದ ಕೂಡಲೇ ಯುದ್ಧ ವಿಮಾನ ಮುಗಿಬಿದ್ದಿದ್ದು ಸೇನೆಗೆ ಸಂಪೂರ್ಣ ಸ್ವತಂತ್ರ ನೀಡಿದ್ದ ಕಾರಣ ಸರಿಯಾದ ಸಮಯಕ್ಕೆ ದಾಳಿ ಮಾಡಲು ಸಹಾಯವಾಗಿದೆ.. ವಿಷಯದ ಸಂಪೂರ್ಣ ಮಾಹಿತಿಗಾಗಿ ಕೆಳಗಡೆ ಓದಿ.

ಪುಲ್ವಾಮಾ ದಾಳಿಗೆ ಪ್ರತೀಕಾರವಾಗಿ ಇಂದು ಭಾರತೀಯ ಯುದ್ಧ ವಿಮಾನ ಗಡಿಯಲ್ಲಿ ಸರಿಯಾದ ಸಮಯಕ್ಕಾಗಿ ಕಾದು ಕುಳಿತಿದ್ದ ವಿಮಾನಗಳು ಬೆಳ್ಳಂಬೆಳಗ್ಗೆ ಘರ್ಜಿಸಿವೆ. ಬರೋಬ್ಬರಿ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಗಡಿ ದಾಟಿ ಸಾವಿರ ಕೆಜಿ ಬಾಂಬ್ ಹಾಕಿ ಉಗ್ರರ ಬೇಟೆಯಾಡಿದ್ದಾರೆ.

ಪ್ರಮುಖ ಉಗ್ರರ ತಾಣಗಳ ಮೇಲೆ ತಡರಾತ್ರಿ ಯುದ್ಧ ವಿಮಾನಗಳು ಘರ್ಜಿಸಿದ್ದು ಗಡಿಯಲ್ಲಿ ಯುದ್ಧದ ಆತಂಕ ಹೆಚ್ಚಾಗಿದೆ. ಒಟ್ಟಿನಲ್ಲಿ ಪುಲ್ವಾಮಾ ದಾಳಿಗೆ ಉಗ್ರರ ಹೆಡೆಮುರಿಕಟ್ಟಲು ಸಿದ್ಧವಾಗಿರುವ ಭಾರತೀಯ ಸೇನೆಯು ಇಂದು ಘರ್ಜಿಸಿದ್ದು ಮುಂದಿನ ಸಮಯದಲ್ಲಿ ಮತ್ತಷ್ಟು ಗರ್ಜಿಸುವ ಸಾಧ್ಯತೆಗಳು ಹೆಚ್ಚಾಗಿದ್ದು ಉಗ್ರರ ಹೆಡೆಮುರಿ ಕಟ್ಟುವುದು ಖಚಿತವಾಗಿದೆ. ಗಡಿಯ ಕ್ಷಣ ಕ್ಷಣದ ಮಾಹಿತಿಗಾಗಿ ನಮ್ಮ ಪೇಜ್ ಅನ್ನು ಫಾಲೋ ಮಾಡಿ.