ಬೀದಿಗೆ ಬಂದ ಖರ್ಗೆ- ಕಾರಣಕರ್ತ ಮೋದಿ, ಸಂಭ್ರಮಿಸಿದ ನಮೋ ಭಕ್ತರು

ಬೀದಿಗೆ ಬಂದ ಖರ್ಗೆ- ಕಾರಣಕರ್ತ ಮೋದಿ, ಸಂಭ್ರಮಿಸಿದ ನಮೋ ಭಕ್ತರು

0

ದೇಶಾದ್ಯಂತ ಬಂದ್ ನಡೆಸಿ ವಿರೋಧ ಪಕ್ಷಗಳು ಮೋದಿ ರವರ ವಿರುದ್ಧ ಹೋರಾಟ ನಡೆಸಿದ್ದೇವೆ ಎಂದು ಬೀಗುತ್ತಿದ್ದರೆ, ನರೇಂದ್ರ ಮೋದಿ ಭಕ್ತರು ಕೊಟ್ಟ ಮಾತನ್ನು ಮೋದಿ ರವರ ಉಳಿಸಿಕೊಂಡರು ಎಂದು ಎಲ್ಲೆಡೆ ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ.

ಇದೇ ಸಮಯದಲ್ಲಿ ಕಾಂಗ್ರೆಸ್ ನ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ರವರನ್ನು ಬೀದಿಗಿಳಿಯುವಂತೆ ಮಾಡಿದ ಮೋದಿ ರವರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಪ್ರಶಂಸೆ ವ್ಯಕ್ತವಾಗಿದೆ.

ಅಷ್ಟಕ್ಕೂ ವಿಷಯದ ಮೂಲವೇನು?

ನರೇಂದ್ರ ಮೋದಿ ರವರು ಅಧಿಕಾರಕ್ಕೆ ಏರುವ ಮುನ್ನ ತಮ್ಮ ಪ್ರಣಾಳಿಕೆಯಲ್ಲಿ ದೇಶದ ಪ್ರತಿಯೊಬ್ಬ ಬ್ರಷ್ಟ ರನ್ನು ಬೀದಿಗಿಳಿಯುತ್ತೇನೆ ಎಂದು ದೇಶದ ಜನರಿಗೆ ಆಶ್ವಾಸನೆ ನೀಡಿದ್ದರು.ಇದನ್ನು ಮೋದಿ ರವರು ಈಡೇರಿಸಿದ್ದಾರೆ ಎಂದು ಮೋದಿ ಭಕ್ತರು ಹೇಳುತ್ತಿದ್ದಾರೆ.

ಇದಕ್ಕೆ ಕಾರಣವೇನೆಂದರೆ ಇದುವರೆಗೂ ಯಾವುದೇ ಬಂದುಗಳಲ್ಲಿ ಭಾಗವಹಿಸದ ಮತ್ತು ಬರೋಬ್ಬರಿ 25  ವರ್ಷಗಳ ನಂತರ ಮಲ್ಲಿಕಾರ್ಜುನ ಖರ್ಗೆ ರವರು ಅಧಿಕೃತವಾಗಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ.  ಇದನ್ನೇ ನೋಡಿಕೊಂಡು ಮೋದಿ ಭಕ್ತರು ದೇಶದ ಅತಿ ದೊಡ್ಡ ಭ್ರಷ್ಟರಲ್ಲಿ ಒಬ್ಬರಾದ ಖರ್ಗೆ ಅವರು ಬೀದಿಗಿಳಿದಿದ್ದಾರೆ ಎಂದು ಮಲ್ಲಿಕಾರ್ಜುನ ಖರ್ಗೆ ರವರ ಕಾಲೆಳೆದಿದ್ದಾರೆ.